ಹನುಮಂತಪ್ಪ ಕುಟುಂಬಕ್ಕೆ 25 ಲಕ್ಷ ಪರಿಹಾರ
ಹುಬ್ಬಳ್ಳಿ, ಫೆಬ್ರವರಿ 12 : ಧಾರವಾಡದ ಕುಂದಗೋಳ ತಾಲೂಕಿನ ಬೆಟದೂರಿನ ವೀರಯೋಧ ಹನುಮಂತಪ್ಪ ಕೊಪ್ಪದ ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಹನುಮಂತಪ್ಪ ಪತ್ನಿಗೆ ಸರ್ಕಾರಿ ನೌಕರಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಗುರುವಾರ ಬೆಳಗ್ಗೆ 11.45ಕ್ಕೆ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಹನುಮಂತಪ್ಪ ಕೊಪ್ಪದ ಅವರು ವಿಧಿವಶರಾದರು. ದೆಹಲಿಯಲ್ಲಿ ಸಕಲ ಸರ್ಕಾರಿ ಗೌರವ ಸಲ್ಲಿಸಿದ ಬಳಿಕ ಪಾರ್ಥಿವ ಶರೀರವನ್ನು ಹುಬ್ಬಳ್ಳಿಗೆ ತರಲಾಯಿತು. [Live : ವೀರ ಯೋಧನಿಗೆ ಅಂತಿಮ ನಮನ]
ರಾತ್ರಿ 10.20ರ ಸುಮಾರಿಗೆ ಹನುಮಂತಪ್ಪ ಕೊಪ್ಪದ ಪಾರ್ಥಿವ ಶರೀರ ಹೊತ್ತ ವಾಯುಪಡೆಯ ವಿಶೇಷ ವಿಮಾನ ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಮಾನ ನಿಲ್ದಾಣದಲ್ಲಿ ಪಾರ್ಥಿವ ಶರೀರವನ್ನು ಬರಮಾಡಿಕೊಂಡು, ಅಂತಿಮ ನಮನ ಸಲ್ಲಿಸಿದರು. [ಚಿತ್ರಗಳು : ತವರಿನಲ್ಲಿ ವೀರಯೋಧನಿಗೆ ಅಂತಿಮ ನಮನ]
ನಂತರ
ಮಾತನಾಡಿದ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು,
'ಹನುಮಂತಪ್ಪ
ಕೊಪ್ಪದ
ಅವರ
ಕುಟುಂಬಕ್ಕೆ
25
ಲಕ್ಷ
ಪರಿಹಾರ
ನೀಡುವುದಾಗಿ
ಘೋಷಣೆ
ಮಾಡಿದರು.
ಬೆಟ್ಟದೂರಿನಲ್ಲಿ
ಸ್ಮಾರಕ
ನಿರ್ಮಾಣಕ್ಕೆ
ಸಹಕಾರ
ನೀಡಲಾಗುತ್ತದೆ.
ಹನುಮಂತಪ್ಪ
ಅವರ
ಪತ್ನಿಗೆ
ಸರ್ಕಾರಿ
ನೌಕರಿ,
ಬೆಟ್ಟದೂರಿನಲ್ಲಿ
ನಾಲ್ಕು
ಎಕರೆ
ಜಮೀನು,
ಮತ್ತು
ಹುಬ್ಬಳ್ಳಿಯಲ್ಲಿ
ಒಂದು
ನಿವೇಶನ
ನೀಡುವುದಾಗಿ'
ಭರವಸೆ
ನೀಡಿದರು.
Bereaved families of All three #SiachenAvalanche martyrs from our state w'll get similar compensation I.e. Rs.25lakh, Site, Land and a Job.
— CM of Karnataka (@CMofKarnataka) February 11, 2016
ಸಿಯಾಚಿನ್ನಲ್ಲಿ ಮೃತಪಟ್ಟ ರಾಜ್ಯದ ಇನ್ನಿಬ್ಬರು ಯೋಧರಾದ ಎಚ್.ಡಿ.ಕೋಟೆ ತಾಲೂಕಿನ ಹಂಪಾಪುರದ ಯೋಧ ಮಹೇಶ ಹಾಗೂ ಹಾಸನ ಜಿಲ್ಲೆ ತೇಜೂರಿನ ಸುಬೇದಾರ್ ಟಿ.ಟಿ.ನಾಗೇಶ್ ಅವರ ಕುಟುಂಬಕ್ಕೂ 25 ಲಕ್ಷ ಪರಿಹಾರ, ಸರ್ಕಾರಿ ಉದ್ಯೋಗ ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ.