ಬಿಜೆಪಿಯಿಂದ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ
ಧಾರವಾಡ, ನ. 30: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತನ್ನ ಹೋರಾಟವನ್ನು ಮತ್ತಷ್ಟು ಚುರುಕು ಮಾಡಲು ತೀರ್ಮಾನಿಸಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಡಿಸೆಂಬರ್ 9 ರಂದು ಬಿಜೆಪಿ ಕಾರ್ಯಕರ್ತರು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಿದ್ದಾರೆ.
ಹುಬ್ಬಳ್ಳಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ನಂಜುಂಡಪ್ಪ ವರದಿಯನ್ನು ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಯಾಗಿಲ್ಲ. ಇದನ್ನೆಲ್ಲ ವಿರೋಧಿಸಿ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.[ಯಡಿಯೂರಪ್ಪಗೆ ಮತ್ತೆ ಶನಿಕಾಟ, ಶಾಂತಿ ಮಾಡಿಸಿದ್ರು]
ಈರುಳ್ಳಿ ಮತ್ತು ಮೆಕ್ಕೆಜೋಳ ರೈತರ ಗೋಳಿಗೆ ಕೊನೆ ಇಲ್ಲದಂತಾಗಿದೆ. ಎಲ್ಲ ವಿಭಾಗದಲ್ಲೂ ರಾಜ್ಯ ಸರ್ಕಾರ ವಿಫಲವಾಗಿದ್ದು ಬೆಳೆಗಳಿಗೆ ಬೆಂಬಲ ಬೆಳೆ ನೀಡಲು ಪರದಾಡುತ್ತಿದೆ ಎಂದು ಆರೋಪಿಸಿದರು. ಅಸ್ಪಷ್ಟ ಮರುಳು ನೀತಿ, ಜಾರಿಯಾಗದ ಯೋಜನೆಗಳು, ಎಲ್ಲೆಲ್ಲಿಯೂ ತುಂಬಿರುವ ಲಂಚವೇ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ವ್ಯಂಗ್ಯವಾಡಿದರು.[ಬಿಎಸ್ವೈ, ಈಶ್ವರಪ್ಪ ವಿರುದ್ಧದ ತನಿಖೆಗೆ ಹೈಕೋರ್ಟ್ ಅಸ್ತು]
ಸಿದ್ದು
ಗುಂಪಿನ
ಸರ್ಕಾರ
ರಾಜ್ಯದಲ್ಲಿರುವುದು
ಕಾಂಗ್ರೆಸ್
ಸರ್ಕಾರವಲ್ಲ.
ಮುಖ್ಯಮಂತ್ರಿ
ಸಿದ್ದರಾಮಯ್ಯ
ಗುಂಪಿನ
ಸರ್ಕಾರ.
ಅಭಿವೃದ್ಧಿಯನ್ನು
ಮರೆತಿರುವ
ಸಚಿವರು
ಭೂ
ಹಗರಣದಲ್ಲಿ
ನಿರತರಾಗಿದ್ದು
ರಾಜ್ಯದ
ಹಿತ
ಬಲಿ
ಕೊಡುತ್ತಿದ್ದಾರೆ
ಎಂದು
ಆರೋಪಿಸಿದರು.
Comments
English summary
Dharwad: BJP leader B.S. yeddyurappa targeted state Government on Sunday. BJP decided Siege Belagavi Suvarna Soudha on December 9.