ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೇಖಕ ಯೋಗೀಶ್ ಮಾಸ್ಟರ್ ಗೆ ಮಸಿ ಬಳಿದು, ಜೀವ ಬೆದರಿಕೆ

ದಿವಂಗತ ಪತ್ರಕರ್ತ ಪಿ. ಲಂಕೇಶ್ ಅವರ ಸ್ಮರಣೆಗಾಗಿ ಏರ್ಪಡಿಸಲಾಗಿದ್ದದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯೋಗೇಶ್ ಮಾಸ್ಟರ್.

|
Google Oneindia Kannada News

ದಾವಣಗೆರೆ, ಮಾರ್ಚ್ 13: ಪ್ರಗತಿಪರ ಲೇಖಕ ಯೋಗೇಶ್ ಮಾಸ್ಟರ್ ಅವರ ಮುಖಕ್ಕೆ ಕಪ್ಪು ಶಾಯಿ ಬಳಿದು ಅವಮಾನ ಮಾಡಿರುವ ಘಟನೆ ನಗರದಲ್ಲಿ ಭಾನುವಾರ ನಡೆದಿದ್ದು ಬೆಳಕಿಗೆ ಬಂದಿದೆ.

ದಿವಂಗತ ಪರ್ತಕರ್ತ ಪಿ. ಲಂಕೇಶ್ ಅವರ ಸ್ಮರಣೆಗಾಗಿ ಏರ್ಪಡಿಸಲಾಗಿದ್ದ 'ಲಂಕೇಶ್ ನೆನಪು' ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ, ತಮ್ಮ ಕೆಲವಾರು ಗೆಳೆಯರೊಂದಿಗೆ ಹೋಟೆಲೊಂದರಲ್ಲಿ ಚಹಾ ಸೇವಿಸುತ್ತಿದ್ದ ಯೋಗೇಶ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

Writer Yogesh Master attacked in Davanagere

ಬೈಕಿನಲ್ಲಿ ಆಗಮಿಸಿದ ಈ ದುಷ್ಕರ್ಮಿಗಳು ಅವರ ಮೇಲೆ ಕಪ್ಪು ಶಾಯಿಯನ್ನು ಎಸೆದು ಅಲ್ಲಿಂದ ಪರಾರಾಯಾಗಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆಯ ಬಗ್ಗೆ ವಿವರಣೆ ನೀಡಿರುವ ಯೋಗೇಶ್, ''ಲಂಕೇಶ್ ಕುರಿತ ಕಾರ್ಯಕ್ರಮ ನಿಮಿತ್ತ ಆಯೋಜಿಸಲಾಗಿದ್ದ ಪುಸ್ತಕ ಮಾರಾಟ ಮಳಿಗೆಗೆ ಹತ್ತಿರದಲ್ಲೇ ಇದ್ದ ಹೋಟೆಲೊಂದರಲ್ಲಿ ನಾನು ಸ್ನೇಹಿತರೊಂದಿಗೆ ಚಹಾ ಸೇವಿಸುತ್ತಿದ್ದಾಗ ನನ್ನ ಮೇಲೆ ಕಪ್ಪು ಶಾಯಿ ತೂರಲಾಗಿದೆ. ಶಾಯಿ ತೂರಿದವರು, ಹಿಂದೂಪರ ಘೋಷಣೆಗಳನ್ನು ಕೂಗುತ್ತಾ, ಹಿಂದೂ ದೇವರುಗಳನ್ನು ಅವಹೇಳನ ಮಾಡುವಂಥ ಲೇಖನಗಳನ್ನು ಬರೆದರೆ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಹೋಗಿದ್ದಾರೆ'' ಎಂದು ಹೇಳಿದರು.

Writer Yogesh Master attacked in Davanagere

ಅವರು ಬರೆದಿರುವ ದುಂಡಿ ಎಂಬ ಕೃತಿ ಸಾಕಷ್ಟು ವಿವಾದಕ್ಕೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Progressive writer Yogesh Master was on 12th March, 2017, attacked by unidentified persons who smeared his face with black oil on the sidelines of a fuction in Davanagere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X