ಹಾವೇರಿಯ ಎರಡು ಕ್ಷೇತ್ರಗಳಲ್ಲೂ ಗೆಲುವು ನಮ್ಮದೇ ಎಂದ ಗೃಹ ಸಚಿವ
ದಾವಣಗೆರೆ, ನವೆಂಬರ್ 18: ಹಾವೇರಿಯ ಎರಡು ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ, ಉಪ ಚುನಾವಣೆಯಲ್ಲಿ 13 ಕ್ಷೇತ್ರಗಳಲ್ಲಿ ನಮ್ಮದೇ ಗೆಲುವು ಎಂದು ದಾವಣಗೆರೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿಸಿಬಿ ಅಡಿಯಲ್ಲೇ ಪ್ರತ್ಯೇಕ ಉಗ್ರ ನಿಗ್ರಹ ಘಟಕ ಸ್ಥಾಪನೆ: ಬೊಮ್ಮಾಯಿ
ನಗರದ ಬಾಪೂಜಿ ಎಂಬಿಎ ಗ್ರೌಂಡ್ ನಲ್ಲಿ ಕಾರ್ಕಳಕ್ಕೆ ಹೋಗಲು ಹೆಲಿಪ್ಯಾಡ್ ಗೆ ಆಗಮಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಯಿ, "ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಜಾಸ್ತಿ ಇದ್ದು, ಚುನಾವಣೆ ಬಂದಾಗ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗುತ್ತಾ ಹೋಗುತ್ತದೆ. ಅದರಲ್ಲೂ ಆಡಳಿತ ಪಕ್ಷಕ್ಕೆ ಹಾಗೂ ಗೆಲ್ಲುವ ಪಕ್ಷಕ್ಕೆ ಆಕಾಂಕ್ಷಿಗಳು ಸಹಜವಾಗಿಯೇ ಹೆಚ್ಚಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ" ಎಂದರು.
ಇನ್ನು ಸಚಿವ ತನ್ವೀರ್ ಸೇಠ್ ಮೇಲೆ ಕೊಲೆ ಯತ್ನ ವಿಚಾರವಾಗಿ ಮಾತನಾಡಿದ ಅವರು, "ತನ್ವೀರ್ ಸೇಠ್ ಘಟನೆಯಾದ ನಂತರ ಅಧಿಕಾರಿಗಳಿಂದ ಎಲ್ಲಾ ಮಾಹಿತಿ ತರಿಸಿಕೊಂಡಿದ್ದೇನೆ. ಕೊಲೆಯತ್ನ ನಡೆಸಿದ ಯುವಕನನ್ನು ಬಂಧಿಸಲಾಗಿದೆ. ಅಲ್ಲದೆ ತನ್ವೀರ್ ಸೇಠ್ ಆರೋಗ್ಯ ಚೇತರಿಸಿಕೊಂಡಿದೆ ಅದೇ ನಮಗೆ ಒಳ್ಳೇ ಸುದ್ದಿ.. ಅ ಯುವಕ ಈ ಕೆಲಸವನ್ನು ಏಕೆ ಮಾಡಿದ ಎನ್ನುವುದನ್ನು ತನಿಖೆ ನಡೆಯುತ್ತಿದೆ ಎಂದರು.