ದಾವಣಗೆರೆ; ತಹಶೀಲ್ದಾರ್ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ
ದಾವಣಗೆರೆ, ಮೇ 24; ಹನ್ನೆರಡು ದಿನದ ಹಸುಗೂಸು ಹೊತ್ತು ತಾಯಿ ಎರಡು ಕಿಲೋಮೀಟರ್ ನಡೆದುಕೊಂಡು ಬಂದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ. ಪರಿಸ್ಥಿತಿ ಅರ್ಥ ಮಾಡಿಕೊಂಡ ತಹಶೀಲ್ದಾರ್ ತಮ್ಮ ವಾಹನದಲ್ಲಿ ಮನೆಗೆ ಕಳಿಸಿಕೊಟ್ಟು ಎಲ್ಲರ ಮೆಚ್ಚುಗೆಗಳಿಸಿದ್ದಾರೆ.
ಕೊರೊನಾ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ದಾವಣಗೆಯನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ವಾಹನಗಳ ಓಡಾಟಕ್ಕೆ ನಿಷೇಧ ಹೇರಲಾಗಿದೆ. ಇದು ಕೆಲವರಿಗೆ ಸಮಸ್ಯೆಯನ್ನು ತಂದೊಡ್ಡಿದೆ.
ಮೇ 31ರ ತನಕ ದಾವಣಗೆರೆ ಸಂಪೂರ್ಣ ಲಾಕ್ಡೌನ್
ಚಾಮರಾಜಪೇಟೆಯಲ್ಲಿನ ಹೆರಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮಹಿಳೆ ತನ್ನ ಮಗುವಿನೊಂದಿಗೆ ಬಾಷಾ ನಗರಕ್ಕೆ ಹೋಗಲು ಆಟೋಗಾಗಿ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ವಾಹನ ಸಿಕ್ಕಿಲ್ಲ. ಹೀಗಾಗಿ ಅನಿವಾರ್ಯವಾಗಿ ನಡೆದುಕೊಂಡೇ ಬರುತ್ತಿದ್ದರು.
ದಾವಣಗೆರೆ; ಕಾಂಗ್ರೆಸ್ ಯುವ ಮುಖಂಡರ ವಿರುದ್ಧ ಎಫ್ಐಆರ್
ಈ ವೇಳೆ ವಾಹನ ತಪಾಸಣೆಗೆ ಮಹಾತ್ಮಾಗಾಂಧಿ ರಸ್ತೆಯಲ್ಲಿದ್ದ ದಾವಣಗೆರೆ ತಹಶೀಲ್ದಾರ್ ಗಿರೀಶ್ ಮಹಿಳೆ ಹಾಗೂ ಮತ್ತಾಕೆಯ ಸಂಬಂಧಿಕರನ್ನು ವಿಚಾರಿಸಿದ್ದಾರೆ. ವಾಹನ ಸಿಗದ ಕಾರಣ ಎರಡು ಕಿಲೋಮೀಟರ್ ಹಸುಗೂಸು ಹೊತ್ತು ಬಂದಿರುವುದಾಗಿ ತಿಳಿಸಿದ್ದಾರೆ.
ತಾಯಿ-ಮಗುವನ್ನು ನೋಡಿದ ತಹಶೀಲ್ದಾರ್ ತನ್ನ ಕಾರು ಚಾಲಕನಿಗೆ ತಾಯಿ ಮತ್ತು ಮಗು ಅನ್ನು ಸುರಕ್ಷಿತವಾಗಿ ಬಿಟ್ಟು ಬರುವಂತೆ ಹೇಳಿ ಕಳುಹಿಸಿದರು. ಗಿರೀಶ್ ಮಾನವೀಯ ಕಾರ್ಯಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.
Recommended Video
ಆಟೋ ಸಿಗದೇ ಬಿಸಿಲಿನಲ್ಲಿ ತಾಯಿ, ಮಗು ನಡೆದುಕೊಂಡು ಹೋಗುತ್ತಿದ್ದ ಪರಿಸ್ಥಿತಿ ಅರ್ಥ ಮಾಡಿಕೊಂಡ ತಹಶೀಲ್ದಾರ್ ತಮ್ಮ ಕಾರಿನಲ್ಲಿ ತಾಯಿ, ಮಗುವನ್ನು ಸುರಕ್ಷಿತವಾಗಿ ಮನೆ ಸೇರಿಸಿದ್ದಾರೆ.