ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಬ್ಬದ ಖರೀದಿ ಭರಾಟೆಯಲ್ಲಿ ನಿಯಮ ಮರೆತವರಿಗೆ ಬಿತ್ತು ದಂಡ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ನವೆಂಬರ್ 11: ದೀಪಾವಳಿ ಹಬ್ಬದ ಖರೀದಿ ಭರದಲ್ಲಿ ಜನರು ಮಾಸ್ಕ್ ಹಾಕಿಕೊಳ್ಳದೆ ವ್ಯಾಪಾರ ಮಾಡುತ್ತಿದ್ದು, ತಹಶೀಲ್ದಾರ್ ಗಿರೀಶ್ ಅವರಿಗೆ ದಂಡ ಹಾಕುವ ಮೂಲಕ ಶಾಕ್ ನೀಡಿದ್ದಾರೆ.

ಕಾಳಿಕಾದೇವಿ ರಸ್ತೆಯಲ್ಲಿರುವ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ಜವಳಿ ಅಂಗಡಿ ಸೇರಿದಂತೆ ಹಲವು ಜವಳಿ ಅಂಗಡಿಗಳ ಮೇಲೆ ತಹಶೀಲ್ದಾರ್ ತಂಡ ದಾಳಿ ನಡೆಸಿದ್ದು, ಮಾಸ್ಕ್ ಇಲ್ಲದೆ ಓಡಾಡುತ್ತಿದ್ದವರಿಗೆ ದಂಡ ವಿಧಿಸಿದೆ.

ಮಾಸ್ಕ್ ಧರಿಸದೆ ಸಂಸದ ತೇಜಸ್ವಿ ಸೂರ್ಯ ಕೂಡಾ ದಂಡ ಕಟ್ಟಿದ್ರುಮಾಸ್ಕ್ ಧರಿಸದೆ ಸಂಸದ ತೇಜಸ್ವಿ ಸೂರ್ಯ ಕೂಡಾ ದಂಡ ಕಟ್ಟಿದ್ರು

ದೀಪಾವಳಿ ಹಬ್ಬದ ಹಿನ್ನೆಲೆ ಜವಳಿ ಅಂಗಡಿಯಲ್ಲಿ ಸಾಕಷ್ಟು ಜನರು ಮಾಸ್ಕ್ ಇಲ್ಲದೆ ಬಟ್ಟೆ ಖರೀದಿ ಮಾಡುತ್ತಿದ್ದು, ತಹಶೀಲ್ದಾರ್ ದಾಳಿ ನಡೆಸುತ್ತಿದ್ದಂತೆ ಮಾಸ್ಕ್ ತೆಗೆದು ಹಾಕಿಕೊಳ್ಳಲು ಆರಂಭಿಸಿದರು. ಈ ಸಂದರ್ಭ ಮಾಸ್ಕ್ ಹಾಕಿಕೊಳ್ಳದವರಿಗೆ ದಂಡ ವಿಧಿಸಿದ್ದು, ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು.

Davanagere: Tahsildar Fined People Not Wearing Mask At Purchase For Deepavali

Recommended Video

Ishan Kishan ಆಟ ಹೀಗೆ ಆಗಲು Pandya ಸಹೋದರರೇ ಕಾರಣವಂತೆ | Oneindia Kannada

ಈ ಸಂದರ್ಭ ಸಾರ್ವಜನಿಕರು ಹಾಗೂ ತಂಡದ ನಡುವೆ ವಾಗ್ವಾದವೂ ನಡೆಯಿತು. ಪೊಲೀಸರು ಅವರಿಂದ ದಂಡ ವಸೂಲಿ ಮಾಡಿ, ಜವಳಿ ಅಂಗಡಿಯ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಿಸಲು ಕ್ಯಾಂಪ್ ಕೂಡ ಹಾಕಿಸಿದರು.

English summary
Tahsildar and team raid on shops and fined people for not wearing mask in davanagere
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X