ಶಿಕ್ಷಕನ ಮೇಲೆ ವಿದ್ಯಾರ್ಥಿಗಳ ಹಲ್ಲೆ ಪ್ರಕರಣ; ತನಿಖೆಗೆ ಆದೇಶಿದ ಸಚಿವ ಬಿ.ಸಿ. ನಾಗೇಶ್
ದಾವಣಗೆರೆ, ಡಿಸೆಂಬರ್ 11: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ನಲ್ಲೂರಿನ ಹೈಸ್ಕೂಲ್ ವಿದ್ಯಾರ್ಥಿಗಳ ಗುಂಪೊಂದು ತರಗತಿಯಲ್ಲಿ ಪಾಠ ಮಾಡುತ್ತಿದ್ದ ಹಿಂದಿ ಶಿಕ್ಷಕರಿಗೆ ಕುಚೇಷ್ಟೆ ಮಾಡಿರುವ ವಿಡಿಯೋ ರಾಜ್ಯದಾದ್ಯಂತ ವೈರಲ್ ಆಗಿದ್ದು, ಈ ಕುರಿತು ಶಿಕ್ಷಣ ಸಚಿವಾಲಯದಿಂದ ತನಿಖೆಗೆ ಆದೇಶಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕು ನಲ್ಲೂರಿನ ಸರ್ಕಾರಿ ಜೂನಿಯರ್ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ಹಿಂದಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಕಾಶ್ ಬೋಗಾರ್ಗೆ ಶಾಲೆಯ ಐದಾರು ವಿದ್ಯಾರ್ಥಿಗಳು ಕುಚೇಷ್ಟೆ ಮೂಲಕ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲ ಜೊತೆಗೆ ಶಿಕ್ಷಕರ ತಲೆ ಮೇಲೆ ಬಕೆಟ್ ಇಟ್ಟು ವಿಕೃತಿ ಪ್ರದರ್ಶಿಸಿ ಸಂತೋಷಪಟ್ಟಿದ್ದರು.
ಒಬ್ಬ ವಿದ್ಯಾರ್ಥಿ ತರಗತಿಯಲ್ಲಿ ಪಾಠ ಮಾಡಲು ಪ್ರಾರಂಭಿಸಿದ ಶಿಕ್ಷಕನ ತಲೆಯ ಮೇಲೆ ಡಸ್ಟ್ಬಿನ್ ಹಾಕಿದ್ದಾನೆ. ಅಷ್ಟೇ ಅಲ್ಲದೆ ಶಿಕ್ಷಕರಿಗೆ ಅವಮಾನ ಮಾಡುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಮಾತ್ರವಲ್ಲ, ಈ ವಿಡಿಯೋ ಮಾಡಿ ಖುಷಿಪಡುತ್ತಾ ಮನಸ್ಸಿಗೆ ಬಂದಂತ ರೀತಿಯಲ್ಲಿ ಮಾತನಾಡಿದ್ದಾರೆ. ಕಳೆದ ನಾಲ್ಕೈದು ದಿನಗಳ ಹಿಂದೆ ಮಾಡಿದ್ದ ವಿಡಿಯೋ ಗುರುವಾರ ವೈರಲ್ ಆಗಿದ್ದು, ವಿದ್ಯಾರ್ಥಿಗಳ ನಡೆಡಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ನಾವು
ಯಾವಾಗಲೂ
ಶಿಕ್ಷಕರೊಂದಿಗೆ
ಇರುತ್ತೇವೆ
ಘಟನೆ
ಕುರಿತು
ಟ್ವೀಟ್
ಮೂಲಕ
ಪ್ರತಿಕ್ರಿಯಿಸಿರುವ
ಪ್ರಾಥಮಿಕ
ಮತ್ತು
ಪ್ರೌಢ
ಶಿಕ್ಷಣ
ಸಚಿವ
ಬಿ.ಸಿ.
ನಾಗೇಶ್,
ದಾವಣಗೆರೆ
ಜಿಲ್ಲೆಯ
ಚನ್ನಗಿರಿ
ತಾಲೂಕಿನ
ಶಾಲೆಯೊಂದರಲ್ಲಿ
ವಿದ್ಯಾರ್ಥಿಗಳಿಂದ
ಶಿಕ್ಷಕರ
ಮೇಲೆ
ಹಲ್ಲೆ
ನಡೆಸಿರುವುದನ್ನು
ಸಹಿಸಲು
ಸಾಧ್ಯವಿಲ್ಲ,
ಈ
ಬಗ್ಗೆ
ತನಿಖೆ
ನಡೆಸುತ್ತಿರುವ
ಶಿಕ್ಷಣ
ಇಲಾಖೆ
ಹಾಗೂ
ಪೊಲೀಸರು
ಸೂಕ್ತ
ಕ್ರಮ
ಕೈಗೊಳ್ಳುವಂತೆ
ಸೂಚನೆ
ನೀಡಿದ್ದಾರೆ.
ನಾವು
ಯಾವಾಗಲೂ
ಶಿಕ್ಷಕರೊಂದಿಗೆ
ಇರುತ್ತೇವೆ,''
ಎಂದು
ತಿಳಿಸಿದ್ದಾರೆ.
ಶಿಕ್ಷಕ ಪ್ರಕಾಶ್ ಬೋಗಾರ್ ಅತ್ಯಂತ ಸರಳ, ಸೌಮ್ಯ ಸ್ವಭಾವದ ಶಿಕ್ಷಕರು. ಮಾತ್ರವಲ್ಲ, ಹೃದಯ ಸಂಬಂಧಿ ಕಾಯಿಲೆಯಿಂದಲೂ ಬಳಲುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ತಮಾಷೆ ಮಾಡಿರಬಹುದು, ಏನಾದರೂ ದೂರು ಕೊಟ್ಟರೆ ಭವಿಷ್ಯ ಹಾಳಾಗುತ್ತದೆ ಎಂದುಕೊಂಡು ಸುಮ್ಮನಾಗಿದ್ದಾರೆ.
ಇನ್ನು ನಲ್ಲೂರು ಸೇರಿದಂತೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇಲ್ಲಿಗೆ ಓದಲು ಬರುತ್ತಾರೆ. ಮೊದಲಿನಿಂದಲೂ ಶಿಕ್ಷಕರ ಬಗ್ಗೆ ಒಳ್ಳೆಯ ಅಭಿಪ್ರಾಯ ಇತ್ತು. ಇಲ್ಲಿ ಓದಿದ ಎಷ್ಟೋ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾರೆ. ಈಗ ವಿದ್ಯಾರ್ಥಿಗಳು ಮಾಡಿರುವ ಕುಚೇಷ್ಟೆಯಿಂದ ಕಾಲೇಜಿಗೆ ಕೆಟ್ಟ ಹೆಸರು ಬರುವಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತರಗತಿಗೆ ಪ್ರವೇಶಿಸಿದಾಗ ನೆಲದ ಮೇಲೆ ಗುಟ್ಕಾ ಪ್ಯಾಕೆಟ್ಗಳ ಕಸದ ರಾಶಿಯನ್ನು ನೋಡಿದ್ದೇನೆ ಎಂದು ಶಿಕ್ಷಕರು ಹೇಳಿದ್ದಾರೆ. ವಿದ್ಯಾರ್ಥಿಗಳು ಶಿಸ್ತು ಕಾಪಾಡಿಕೊಳ್ಳಬೇಕು ಎಂದು ಹೇಳಿ, ಪಾಠ ಮಾಡಲು ಪ್ರಾರಂಭಿಸಿದಾಗ, ಕೆಲವು ವಿದ್ಯಾರ್ಥಿಗಳು ಉಪದ್ರವ ಸೃಷ್ಟಿಸಲು ಪ್ರಾರಂಭಿಸಿದರು. ಆದರೆ, ವಿದ್ಯಾರ್ಥಿಗಳ ಭವಿಷ್ಯವನ್ನು ಪರಿಗಣಿಸಿ ಅವರ ವಿರುದ್ಧ ಪೊಲೀಸರಿಗೆ ದೂರು ನೀಡದಿರಲು ಶಿಕ್ಷಕರು ನಿರ್ಧರಿಸಿದ್ದಾರೆ.
ಶಾಸಕ
ಮಾಡಾಳು
ವಿರೂಪಾಕ್ಷಪ್ಪ
ಭೇಟಿ
ಇನ್ನು
ಈ
ವಿಡಿಯೋ
ಸಾಮಾಜಿಕ
ಜಾಲತಾಣಗಳಲ್ಲಿ
ವೈರಲ್
ಆಗುತ್ತಿದ್ದಂತೆಯೇ
ಚನ್ನಗಿರಿ
ಶಾಸಕ
ಮಾಡಾಳು
ವಿರೂಪಾಕ್ಷಪ್ಪ
ನಲ್ಲೂರಿಗೆ
ಭೇಟಿ
ನೀಡಿದ್ದಾರೆ.
ಈ
ವೇಳೆ
ಶಾಲೆಯ
ಶಿಕ್ಷಕರು,
ಪ್ರಾಂಶುಪಾಲರು,
ಗ್ರಾಮಸ್ಥರ
ಜೊತೆ
ಚರ್ಚೆ
ನಡೆಸಿದ್ದಾರೆ.
ಶಿಕ್ಷಕ
ಪ್ರಕಾಶ್
ಬೋಗಾರ್ಗೆ
ಅವಮಾನ
ಮಾಡಿರುವ
ವಿದ್ಯಾರ್ಥಿಗಳು
ಯಾರು?
ಎಲ್ಲಿಯವರು?
ಹೆಸರೇನು?
ಎಂಬ
ಕುರಿತು
ವಿಚಾರಿಸಿದ್ದಾರೆ.
"ಗ್ರಾಮಸ್ಥರ ಜೊತೆ ಈ ವಿದ್ಯಾರ್ಥಿಗಳು ಬೇರೆ ಯಾವುದಾದರೂ ಈ ರೀತಿಯ ಕುಚೇಷ್ಟೆ ಮಾಡಿದ್ದಾರಾ ಎಂಬ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ನೀಡೋಣ ಎಂದು ಹೇಳಿದ್ದಾರೆ. ಈ ವೇಳೆ ಈ ಘಟನೆಯಿಂದ ನಲ್ಲೂರು ಹಾಗೂ ಕಾಲೇಜಿಗೆ ಕೆಟ್ಟ ಹೆಸರು ಬಂದಂತಾಗಿದೆ. ತಪ್ಪು ಮಾಡಿರುವವರಿಗೆ ಶಿಕ್ಷೆಯಾಗಬೇಕು. ಮುಂಬರುವ ದಿನಗಳಲ್ಲಿ ಇಂಥ ಪ್ರಕರಣ ಮರು ಕಳಿಸದಂತೆ ಎಚ್ಚರ ವಹಿಸಬೇಕು," ಎಂದು ಸೂಚನೆ ನೀಡಿದ್ದಾರೆ.
ಕಠಿಣ
ಕ್ರಮ
ಎಂದ
ಜಿಲ್ಲಾಧಿಕಾರಿ
ಇನ್ನು
ದಾವಣಗೆರೆಯಲ್ಲಿ
ಈ
ಬಗ್ಗೆ
ಪ್ರತಿಕ್ರಿಯೆ
ನೀಡಿರುವ
ಜಿಲ್ಲಾಧಿಕಾರಿ
ಮಹಾಂತೇಶ್.
ಆರ್.
ಬೀಳಗಿ,
"ನಲ್ಲೂರಿನ
ಸರ್ಕಾರಿ
ಜೂನಿಯರ್
ಕಾಲೇಜಿನ
ಪ್ರೌಢಶಾಲಾ
ವಿಭಾಗದ
ವಿದ್ಯಾರ್ಥಿಗಳು
ಶಿಕ್ಷಕರಿಗೆ
ಕುಚೇಷ್ಟೆ,
ಅವಮಾನ
ಮಾಡಿರುವ
ವಿಡಿಯೋ
ವೈರಲ್
ಆಗಿರುವುದು
ಗಮನಕ್ಕೆ
ಬಂದಿದೆ.
ಯಾರೇ
ತಪ್ಪು
ಮಾಡಿದ್ದರೂ
ಕ್ರಮ
ತೆಗೆದುಕೊಳ್ಳುತ್ತೇವೆ.
ಶಿಕ್ಷಕರ
ಕಡೆಯಿಂದ
ತಪ್ಪಿದ್ದರೂ
ಸಹ
ಕ್ರಮ
ಆಗುತ್ತದೆ.
ವಿದ್ಯಾರ್ಥಿಗಳು
ಈ
ರೀತಿಯಾದ
ಅವಮಾನ
ಮಾಡಿರುವುದಕ್ಕೆ
ಕಾರಣವೇನು
ಎಂಬ
ಬಗ್ಗೆ
ವರದಿ
ನೀಡುವಂತೆ
ದಾವಣಗೆರೆ
ಡಿಡಿಪಿಐಗೆ
ಸೂಚನೆ
ನೀಡಲಾಗುವುದು,"
ಎಂದು
ಹೇಳಿದ್ದಾರೆ.
Recommended Video