ದಾವಣಗೆರೆ: ರಾಜ್ಯ ಬಿಜೆಪಿ ಕಾರ್ಯಕಾರಿಣಿಗೆ ಡೇಟ್ ಫಿಕ್ಸ್: ಏನೆಲ್ಲಾ ಚರ್ಚೆಯಾಗುತ್ತೆ?
ದಾವಣಗೆರೆ, ಸೆಪ್ಟೆಂಬರ್ 8: ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆಯಲ್ಲಿ ಎರಡು ದಿನಗಳ ಕಾಲ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಇದೇ ಸೆಪ್ಟೆಂಬರ್ 18 ಮತ್ತು 19 ರಂದು ನಡೆಸಲು ನಿರ್ಧರಿಸಲಾಗಿದೆ.
ಬಿಜೆಪಿ
ಪಾಲಿಗೆ
ಈ
ಕಾರ್ಯಕಾರಿಣಿ
ಅತ್ಯಂತ
ಮಹತ್ವದ್ದಾಗಿದ್ದು,
ಪಕ್ಷ
ಸಂಘಟನೆ,
ಆಂತರಿಕ
ವಿಚಾರ,
ಸಚಿವ
ಸ್ಥಾನ
ಸಿಗದವರ
ಅಸಮಾಧಾನ
ಶಮನ,
ಪಕ್ಷ
ವಿರೋಧಿ
ಚಟುವಟಿಕೆ
ನಡೆಸುವವರು
ಹಾಗೂ
ಪಕ್ಷಕ್ಕೆ
ಮುಜುಗರವಾಗುವಂಥ
ಹೇಳಿಕೆ
ಕೊಡುವವರಿಗೆ
ಎಚ್ಚರಿಕೆ
ನೀಡುವುದು,
ಕಾರ್ಯಕರ್ತರಲ್ಲಿ
ಹೊಸ
ಉತ್ಸಾಹ
ತುಂಬುವುದು,
ಎಲ್ಲೆಲ್ಲಿ
ಪಕ್ಷ
ದುರ್ಬಲವಾಗಿದೆಯೋ
ಆ
ಜಿಲ್ಲೆಗಳಲ್ಲಿ
ಹೇಗೆ
ಸಂಘಟನೆ
ಮಾಡುವುದು,
ಸಿಎಂ
ಬಸವರಾಜ
ಬೊಮ್ಮಾಯಿ
ನೇತೃತ್ವದ
ಆಡಳಿತದ
ಜೊತೆಗೆ
ಸಂಘಟನೆ
ಮತ್ತಷ್ಟು
ಬಲಪಡಿಸುವುದೂ
ಸೇರಿದಂತೆ
ರಾಜ್ಯ
ಬಿಜೆಪಿಯ
ಎಲ್ಲಾ
ವಿದ್ಯಮಾನಗಳ
ಬಗ್ಗೆಯೂ
ಸಮಾಲೋಚನೆ
ನಡೆಯಲಿದೆ.
ರಾಷ್ಟ್ರೀಯ
ಹಾಗೂ
ರಾಜ್ಯ
ನಾಯಕರ
ದಂಡೇ
ದಾವಣಗೆರೆಗೆ
ಆಗಮಿಸಲಿದ್ದು,
ಶಾಸಕರು,
ಸಂಸದರು,
ಬಿಜೆಪಿ
ಪದಾಧಿಕಾರಿಗಳು
ಈ
ಕಾರ್ಯಕಾರಿಣಿಯಲ್ಲಿ
ಪಾಲ್ಗೊಂಡು
ಚಿಂತನ-
ಮಂಥನ
ನಡೆಸಲಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸಾಧನೆ
ಬಸವರಾಜ ಬೊಮ್ಮಾಯಿಯವರು ಸಿಎಂ ಆದ ಬಳಿಕ ಮೊದಲ ರಾಜ್ಯ ಕಾರ್ಯಕಾರಿಣಿ ಸಭೆ ಇದಾಗಿದ್ದು, ತುಂಬಾನೇ ಮಹತ್ವ ಪಡೆದುಕೊಂಡಿದೆ. ಬೆಳಗಾವಿ, ಹುಬ್ಬಳ್ಳಿ- ಧಾರವಾಡ, ಕಲಬುರಗಿ ಮಹಾನಗರ ಪಾಲಿಕೆ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಬಿಜೆಪಿ ಮಾಡಿರುವ ಸಾಧನೆ, ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ನ್ನು ಹೇಗೆ ಎದುರಿಸಬೇಕು. ಪಕ್ಷ ಬಲಿಷ್ಠವಾಗಿರದ ಕಡೆಯಲ್ಲಿ ಹೇಗೆ ಸಂಘಟನೆ ಮಾಡಬೇಕು ಎಂಬ ಪಾಠವನ್ನು ಪದಾಧಿಕಾರಿಗಳಿಗೆ ನಾಯಕರು ಹೇಳಿಕೊಡಲಿದ್ದಾರೆ.
ತ್ರಿಶೂಲ್ ಕಲ್ಯಾಣ ಮಂಟಪದಲ್ಲಿ ಕಾರ್ಯಕಾರಿಣಿ ಸಭೆ
"ಇದೇ
ಸೆಪ್ಟೆಂಬರ್
18ರಂದು
ದಾವಣಗೆರೆ
ನಗರದ
ಅಪೂರ್ವ
ರೆಸಾರ್ಟ್ನ
ಸಭಾಂಗಣದಲ್ಲಿ
ರಾಜ್ಯ
ಬಿಜೆಪಿ
ಪದಾಧಿಕಾರಿಗಳ
ಸಭೆ
ನಡೆಯಲಿದ್ದು,
ಅಂದು
ಬಿಜೆಪಿ
ರಾಜ್ಯಾಧ್ಯಕ್ಷ
ನಳಿನ್
ಕುಮಾರ್
ಕಟೀಲ್,
ಬಿಜೆಪಿ
ರಾಜ್ಯ
ಉಪಾಧ್ಯಕ್ಷರು,
ರಾಜ್ಯ
ಪದಾಧಿಕಾರಿಗಳು
ಪಾಲ್ಗೊಳ್ಳಲಿದ್ದಾರೆ.
ಅಂದು
ನಡೆಯುವ
ಸಭೆಯಲ್ಲಿ
ಪಕ್ಷ
ಸಂಘಟನೆ
ಬಗ್ಗೆ
ವಿಸ್ತೃತ
ಚರ್ಚೆಯಾಗಲಿದೆ.
ಪಕ್ಷದ
ಪದಾಧಿಕಾರಿಗಳಿಗೆ
ಜವಾಬ್ದಾರಿ
ವಹಿಸುವ
ಕೆಲಸ
ಆಗುತ್ತದೆ.
ಇನ್ನು
ಸೆಪ್ಟೆಂಬರ್
19ರಂದು
ರಾಜ್ಯ
ಬಿಜೆಪಿ
ಕಾರ್ಯಕಾರಿಣಿ
ಸಭೆ
ನಗರದ
ತ್ರಿಶೂಲ್
ಕಲ್ಯಾಣ
ಮಂಟಪದಲ್ಲಿ
ಬೆಳಿಗ್ಗೆ
10.30ಕ್ಕೆ
ಆರಂಭವಾಗಲಿದ್ದು,
ಈ
ಸಭೆಯಲ್ಲಿ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಆಗಮಿಸಲಿದ್ದಾರೆ.
ಇದು
ಬೊಮ್ಮಾಯಿ
ಅವರು
ಸಿಎಂ
ಆದ
ಬಳಿಕ
ನಡೆಯುತ್ತಿರುವ
ಮೊದಲ
ಕಾರ್ಯಕಾರಿಣಿಯಾಗಿದೆ.
ಇನ್ನು
ಬಿಜೆಪಿ
ರಾಷ್ಟ್ರೀಯ
ಪ್ರಧಾನ
ಕಾರ್ಯದರ್ಶಿ
ಬಿ.
ಎಲ್.
ಸಂತೋಷ್,
ರಾಜ್ಯ
ಬಿಜೆಪಿ
ಉಸ್ತುವಾರಿ
ಅರುಣ್
ಸಿಂಗ್,
ಮಾಜಿ
ಸಿಎಂ
ಬಿ.ಎಸ್.
ಯಡಿಯೂರಪ್ಪ,
ಬಿಜೆಪಿ
ರಾಜ್ಯಾಧ್ಯಕ್ಷ
ನಳಿನ್
ಕುಮಾರ್
ಕಟೀಲ್,
ಸಂಸದರು,
ಶಾಸಕರು,
ರಾಜ್ಯಮಟ್ಟದ
ನಾಯಕರು
ಪಾಲ್ಗೊಳ್ಳಲಿದ್ದಾರೆ,"
ಎಂದು
ಬಿಜೆಪಿ
ರಾಜ್ಯ
ಪ್ರಧಾನ
ಕಾರ್ಯದರ್ಶಿ
ಎನ್.
ರವಿಕುಮಾರ್
ತಿಳಿಸಿದರು.
ಅಲ್ಲೋಲ ಕಲ್ಲೋಲ ಆಗುತ್ತದೆ ಎಂದು ಹೇಳಲಾಗುತ್ತಿತ್ತು
"ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅಲ್ಲೋಲ ಕಲ್ಲೋಲ ಆಗುತ್ತದೆ ಎಂದು ಹೇಳಲಾಗುತ್ತಿತ್ತು. ಎಲ್ಲವೂ ಸುಸೂತ್ರವಾಗಿ ನಡೆದಿದೆ. ಜೊತೆಗೆ ಸಚಿವ ಸಂಪುಟ ವಿಸ್ತರಣೆಯೂ ಯಾವುದೇ ಗೊಂದಲ ಇಲ್ಲದಂತೆ ನಡೆಯಿತು. ಬೆಳಗಾವಿ, ಹುಬ್ಬಳ್ಳಿ- ಧಾರವಾಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಆಂತರಿಕ ಸರ್ವೆಯಲ್ಲಿ ಬಂದದ್ದೇ ಆಗಿದೆ," ಎಂದು ತಿಳಿಸಿದರು.
Recommended Video
ಬೊಮ್ಮಾಯಿ, ಕುಮಾರಸ್ವಾಮಿ ಮಾತುಕತೆ
"ಕಲಬುರಗಿಯಲ್ಲಿ
ಬಿಜೆಪಿಗೆ
ಜನರು
ಮತದಾನ
ಮಾಡಿದ್ದಾರೆ.
ಶೇ.49ರಷ್ಟು
ಮತದಾನವಾಗಿದೆ.
ಇನ್ನು
ಶೇಕಡಾ
2ರಷ್ಟು
ವೋಟಿಂಗ್
ಜಾಸ್ತಿಯಾಗಿದ್ದರೆ
ನಾವು
ಇನ್ನು
ಹೆಚ್ಚಿನ
ಸ್ಥಾನ
ಗೆಲ್ಲುತ್ತಿದ್ದೆವು.
ಈಗಾಗಲೇ
ಸಿಎಂ
ಬಸವರಾಜ
ಬೊಮ್ಮಾಯಿ
ಹಾಗೂ
ಮಾಜಿ
ಸಿಎಂ
ಎಚ್.ಡಿ.
ಕುಮಾರಸ್ವಾಮಿ
ಜೊತೆ
ಮಾತುಕತೆಯಾಗಿದ್ದು,
ಜೆಡಿಎಸ್
ಒಲವು
ಬಿಜೆಪಿ
ಪರ
ಇದೆ
ಎಂದರು.
ಕಲಬುರಗಿಯಲ್ಲಿ
ಕಾಂಗ್ರೆಸ್
ಪಕ್ಷ
ಒಂದೇ
ಸಮುದಾಯದ
17
ಮಂದಿ
ಗೆದ್ದಿದ್ದಾರೆ.
ಆ
ಪಕ್ಷಕ್ಕೆ
ಒಂದು
ಸಮಾಜದ
ಬೆಂಬಲ
ಇದೆ.
ಆದರೆ
ಬಿಜೆಪಿಗೆ
ಬಹುತೇಕ
ಸಮಾಜದವರ
ಆಶೀರ್ವಾದ
ಸಿಕ್ಕಿದೆ.
ಜನರು
ಬಿಜೆಪಿಯ
ಪರ
ಇದ್ದು,
ಕಾಂಗ್ರೆಸ್
ತಿರಸ್ಕರಿಸುತ್ತಿದ್ದಾರೆ
ಎಂಬುದು
ಮಹಾನಗರ
ಪಾಲಿಕೆ
ಚುನಾವಣೆಯಲ್ಲಿ
ಸಾಬೀತಾಗಿದೆ,"
ಎಂದು
ಎನ್.
ರವಿಕುಮಾರ್
ಹೇಳಿದರು.