ಸಿದ್ದು, ದಿನೇಶ್ ಗುಂಡೂರಾವ್ ರಾಜೀನಾಮೆ: ಹಾಗೆ ಸುಮ್ಮನೆ!
ದಾವಣಗೆರೆ,
ಡಿಸೆಂಬರ್.09:
ರಾಜ್ಯದಲ್ಲಿ
ನಡೆದ
ವಿಧಾನಸಭಾ
ಚುನಾವಣೆಯಲ್ಲಿ
ಕಾಂಗ್ರೆಸ್
ತೀವ್ರ
ಮುಖಭಂಗ
ಅನುಭವಿಸಿದೆ.
15
ವಿಧಾನಸಭೆ
ಕ್ಷೇತ್ರಗಳ
ಪೈಕಿ
ಬಿಜೆಪಿ
12
ಕ್ಷೇತ್ರಗಳಲ್ಲಿ
ದಿಗ್ವಿಜಯ
ಸಾಧಿಸಿದೆ.
ಕಾಂಗ್ರೆಸ್
ಕೇವಲ
ಎರಡು
ಕ್ಷೇತ್ರಗಳಲ್ಲಿ
ಗೆಲುವು
ಸಾಧಿಸಿದ್ದರೆ,
ಹೊಸಕೋಟೆಯಲ್ಲಿ
ಪಕ್ಷೇತರ
ಅಭ್ಯರ್ಥಿ
ಶರತ್
ಬಚ್ಚೇಗೌಡ
ಗೆಲುವು
ದಾಖಲಿಸಿದ್ದಾರೆ.
ಇನ್ನು,
ಜೆಡಿಎಸ್
ಉಪ
ಚುನಾವಣೆಯಲ್ಲಿ
ಖಾತಕೆಯನ್ನೇ
ತೆರೆದಿಲ್ಲ.
ಉಪ
ಸಮರ
ಫಲಿತಾಂಶದ
ಬೆನ್ನಲ್ಲೇ
ಕಾಂಗ್ರೆಸ್
ನಲ್ಲಿ
ಅಲ್ಲೋಲ-ಕಲ್ಲೋಲ
ಸೃಷ್ಟಿಯಾಗಿದೆ.
ವಿರೋಧ
ಪಕ್ಷ
ನಾಯಕ
ಹಾಗೂ
ಸಮನ್ವಯ
ಸಮಿತಿ
ಅಧ್ಯಕ್ಷ
ಸ್ಥಾನಕ್ಕೆ
ಸಿದ್ದರಾಮಯ್ಯ
ರಾಜೀನಾಮೆ
ಸಲ್ಲಿಸಿದ್ದಾರೆ.
ಇದಾಗ
ಕೆಲ
ನಿಮಿಷದಲ್ಲೇ
ಕೆಪಿಸಿಸಿ
ಅಧ್ಯಕ್ಷ
ಸ್ಥಾನಕ್ಕೆ
ದಿನೇಶ್
ಗುಂಡೂರಾವ್
ಕೂಡಾ
ರಾಜೀನಾಮೆ
ಸಲ್ಲಿಸಿದ್ದಾರೆ.
ಸಿದ್ದರಾಮಯ್ಯ
ಹಾದಿ
ಹಿಡಿದ
ದಿನೇಶ್
ಗುಂಡೂರಾವ್,
ಅಧ್ಯಕ್ಷಗಿರಿಗೆ
ರಾಜೀನಾಮೆ
ಕಾಂಗ್ರೆಸ್
ನಲ್ಲಿ
ಇಷ್ಟೆಲ್ಲಾ
ನಡೆಯುತ್ತಿದ್ದರೆ
ಸ್ವಪಕ್ಷದ
ಹಿರಿಯ
ಶಾಸಕರೊಬ್ಬರು
ಇದೆಲ್ಲ
ಸರ್ವೇಸಾಮಾನ್ಯ
ಬಿಡಿ
ಅನ್ನುವ
ಧಾಟಿಯಲ್ಲಿ
ಮಾತನಾಡಿದ್ದಾರೆ.
ವಿಧಾನಸಭೆ
ಫಲಿತಾಂಶ
ಈಗಷ್ಟೇ
ಹೊರ
ಬಿದ್ದಿದೆ.
ಅವರು
ನೈತಿಕ
ಹೊಣೆ
ಹೊತ್ತು
ರಾಜೀನಾಮೆ
ಸಲ್ಲಿಸಿದ್ದಾರೆ.
ತನ್ನಿಂದ
ತಾನೇ
ಅವರು
ರಾಜೀನಾಮೆ
ವಾಪಸ್
ಪಡೆದುಕೊಳ್ಳುತ್ತಾರೆ
ಬಿಡಿ
ಎಂದು
ಮಾಜಿ
ಸಚಿವ
ಶಾಮನೂರು
ಶಿವಶಂಕರಪ್ಪ
ಕಡ್ಡಿ
ಮುರಿದಂತೆ
ಹೇಳಿದ್ದಾರೆ.
ರಾಜೀನಾಮೆ ಕೊಡುವುದೆಲ್ಲ ಕಾಮನ್ ಬಿಡಿ!
ವಿಧಾನಸಭೆ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸೋತಿದ್ದಕ್ಕೆ ಸುಮ್ಮನೆ ರಾಜೀನಾಮೆ ಕೊಟ್ಟಿದ್ದಾರೆ. ಅವರೇ ಮತ್ತೆ ವಾಪಸ್ಸು ತೆಗೆದುಕೊಳ್ಳತ್ತಾರೆ ಯಾಕೆ ಸುಮ್ಮನೆ ತಲೆ ಕೆಡಿಸಿಕೊಳ್ಳುತ್ತೀರಾ ಎನ್ನುವ ಧಾಟಿಯಲ್ಲಿ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ದಾವಣಗೆರೆಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು.
ರಾಜೀನಾಮೆ ಕೊಟ್ಟಿದ್ದು ಹಾಗೆ ಸುಮ್ಮನೆ
ಉಪ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಸೋತಿದೆ. ಇದರ ನೈತಿಕ ಹೊಣೆ ಹೊತ್ತು ಇಬ್ಬರು ನಾಯಕರು ಪಕ್ಷವೇ ನೀಡಿದ ಜವಾಬ್ದಾರಿಯುತ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈಗಷ್ಟೇ ಚುನಾವಣೆಯಲ್ಲಿ ಸೋತಿದ್ದೇವೆ. ಹೀಗಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಮತ್ತೆ ಅವರೇ ರಾಜೀನಾಮೆ ವಾಪಸ್ ಪಡೆದುಕೊಳ್ಳುತ್ತಾರೆ ಬಿಡಿ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಹೈಕಮಾಂಡ್ ಕರೆದು ಕೊಡಲಿ ಎಂದು ಈ ನಿರ್ಧಾರ!
ಈಗಷ್ಟೇ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸೋನಿಯಾ ಗಾಂಧಿಯವರೇ ಕರೆದು ಕೊಡಲಿ ಎಂದು ಈ ರೀತಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಕೇವಲ ನಾಟಕ ಎನ್ನುವ ಅರ್ಥದಲ್ಲಿ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಗೆಲ್ಲೋದಕ್ಕೆ ಇಷ್ಟೆಲ್ಲ ಕಾರಣವಿದೆಯೇ?
ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚು ಗೆಲುವು ಸಾಧಿಸಿದ್ದಾರೆ. ಸರ್ಕಾರ ಯಾವುದು ಇರುತ್ತದೆಯೋ ಅವರು ಪಕ್ಷದ ಅಭ್ಯರ್ಥಿಗಳೇ ಗೆಲ್ಲುವುದು ಸ್ವಾಭಾವಿಕ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಆದ್ದರಿಂದ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇದೆಲ್ಲ ಸರ್ವೇಸಾಮಾನ್ಯ. ಅಲ್ಲದೆ, ಸರ್ಕಾರಕ್ಕೆ ಅವರದೇ ಆದ ಸೋರ್ಸ್ ಇರುತ್ತದೆ. ಹೀಗಾಗಿ ಗೆಲುವು ಸಾಧಿಸುವುದು ಸುಲಭವಾಗಿದೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.