ಅದ್ಧೂರಿ ಗಣೇಶೋತ್ಸವಕ್ಕೆ ಬ್ರೇಕ್: ದಾವಣಗೆರೆ ವ್ಯಾಪಾರಿಗಳ ಬ್ಯುಸಿನೆಸ್ ಲಾಕ್!
ದಾವಣಗೆರೆ, ಸೆಪ್ಟೆಂಬರ್ 7: ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ಶೇ.2ರೊಳಗಿದ್ದರೂ ವಿಜೃಂಭಣೆಯ ಗಣೇಶೋತ್ಸವಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಇದರಿಂದಾಗಿ ಗಣಪನ ಮೂರ್ತಿ ಮಾಡುವವರಿಗೆ ನಷ್ಟ ಸಂಭವಿಸಿದೆ. ಇನ್ನು ನೃತ್ಯ, ಮೆರವಣಿಗೆ, ಡಿಜೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿಷೇಧ ಹೇರಿದ್ದರಿಂದಾಗಿ ಇದನ್ನೇ ನಂಬಿದವರು ಈ ಬಾರಿಯೂ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
Recommended Video
ಗಣೇಶೋತ್ಸವ ಹಬ್ಬ ಬಂತೆಂದರೆ ಸಾಕು ಪೆಂಡಾಲ್ ಹಾಕುವುದು, ಡೆಕೋರೇಷನ್ ಮಾಡುವುದು, ಬಗೆಬಗೆಯ ಗಣಪತಿ ಮೂರ್ತಿ ತಯಾರಿಸುವವರು, ಬಟ್ಟೆ ಖರೀದಿಸುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದೆ. ಆದರೆ ಹಬ್ಬದಲ್ಲಿ ಒಂದಿಷ್ಟು ಲಾಭ ಮಾಡಿಕೊಳ್ಳೋಣ ಎಂದುಕೊಂಡವರಿಗೆ ಭಾರೀ ನಿರಾಸೆ ಆಗಿದೆ.
ಕಳೆದ ವರ್ಷವೂ ಇದೇ ಪರಿಸ್ಥಿತಿ. ಈ ವರ್ಷ ಅದಕ್ಕಿಂತ ಹೆಚ್ಚು ಪೆಟ್ಟು ಬಿದ್ದಿದೆ. ಗಣೇಶೋತ್ಸವ ಕೇವಲ ಆಚರಣೆ ಅಷ್ಟೇ ಅಲ್ಲ. ಇದನ್ನೇ ನಂಬಿ ವ್ಯವಹಾರ ನಡೆಸುವವರ ಗೋಳು ಹೇಳತೀರದ್ದಾಗಿದೆ.
ಮಾರ್ಗಸೂಚಿ ಪಾಲನೆ ಕಡ್ಡಾಯ
ಈ ಬಾರಿಯ ಗಣೇಶೋತ್ಸವ ಆಚರಣೆಗೆ ಸರ್ಕಾರ ಷರತ್ತು ಬದ್ಧ ಅನುಮತಿ ಮಾತ್ರ ನೀಡಿದ್ದು, ಅದರಂತೆ ಜಿಲ್ಲೆಯಲ್ಲಿಯೂ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ, ಸಾರ್ವಜನಿಕವಾಗಿ ಅಥವಾ ಮನೆಗಳಲ್ಲಿ ಗಣೇಶೋತ್ಸವ ಆಚರಿಸಲು ಅವಕಾಶ ನೀಡಲಾಗುವುದು. ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ವಿವಿಧ ಇಲಾಖೆಗಳಿಂದ ಪಡೆಯಲಾಗುವ ಅನುಮತಿಯನ್ನು ಒಂದೇ ಕಡೆ ಒದಗಿಸಲು ಏಕಗವಾಕ್ಷಿ ವ್ಯವಸ್ಥೆ ಮಾಡಲು ದಾವಣಗೆರೆ ಜಿಲ್ಲಾಡಳಿತ ನಿರ್ಧರಿಸಿದೆ.
2-3 ವಾರ್ಡ್ನಲ್ಲಿ ಒಂದೇ ಗಣಪನ ಮೂರ್ತಿ ಕೂರಿಸಿ
"ಅತ್ಯಂತ ವಿಜೃಂಭಣೆಯಿಂದ ಆಚರಿಸಬೇಕಾಗಿದ್ದ ಗಣೇಶೋತ್ಸವವನ್ನು ಕೊರೊನಾ ಹರಡುವಿಕೆ ಭೀತಿಯಿಂದ, ಷರತ್ತು ಬದ್ಧವಾಗಿ ಸರಳ ರೀತಿಯಲ್ಲಿ ಆಚರಿಸಲೇಬೇಕಾದ ಅನಿವಾರ್ಯತೆ ಇದೆ. ಸಾರ್ವಜನಿಕವಾಗಿ ಕೂರಿಸಲಾಗುವ ಗಣೇಶ ಮೂರ್ತಿಯನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಸಂಖ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಬೇಕು. ಎರಡ್ಮೂರು ವಾರ್ಡ್ನವರು ಸೇರಿ, ಒಂದೆಡೆ ಪ್ರತಿಷ್ಠಾಪಿಸಿ ಆಚರಿಸುವುದು ಸೂಕ್ತ. ಸರ್ಕಾರದ ಸೂಚನೆಯಂತೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿ ನಾಲ್ಕು ಅಡಿ, ಮನೆಯೊಳಗೆ ಕೂರಿಸುವ ಮೂರ್ತಿ ಎರಡು ಅಡಿ ಮೀರುವಂತಿಲ್ಲ."
ಕೋವಿಡ್ ರಿಪೋರ್ಟ್ ಕಡ್ಡಾಯ
"ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಆಚರಣೆ ಮಾಡುವ ಆಯೋಜಕರು ಕೋವಿಡ್ ಆರ್ಟಿ-ಪಿಸಿಆರ್ ನೆಗೆಟಿವ್ ರಿಪೋರ್ಟ್ ಮತ್ತು ಕನಿಷ್ಟ 1 ಡೋಸ್ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯ. ಗಣೇಶೋತ್ಸವವನ್ನು 5 ದಿನಕ್ಕಿಂತ ಹೆಚ್ಚು ಆಚರಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಸಾರ್ವಜನಿಕವಾಗಿ ಗಣೇಶಮೂರ್ತಿ ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಗರಿಷ್ಠ 20 ಜನಕ್ಕೆ ಸೀಮಿತವಾಗುವ ರೀತಿ ಆವರಣ ನಿರ್ಮಿಸಬೇಕು. ದರ್ಶನ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪ್ರತಿ ವ್ಯಕ್ತಿಗೆ ಬಣ್ಣದಿಂದ ಬಾಕ್ಸ್ ಗುರುತಿಸಬೇಕು."
ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ
"ಸಾರ್ವಜನಿಕರಿಗೆ
ಹಾಗೂ
ವಾಹನ
ಸಂಚಾರಕ್ಕೆ
ಯಾವುದೇ
ಅಡ್ಡಿಯಾಗದಂತಿರಬೇಕು.
ಈ
ಬಾರಿ
ಗಣೇಶೋತ್ಸವ
ಆಚರಣೆ
ಅಂಗವಾಗಿ
ಯಾವುದೇ
ಬಗೆಯ
ಸಾಂಸ್ಕೃತಿಕ,
ಸಂಗೀತ,
ನೃತ್ಯ
ಕಾರ್ಯಕ್ರಮ,
ಡಿಜೆ
ಸಹಿತ
ಮನೋರಂಜನೆ
ಕಾರ್ಯಕ್ರಮ
ಆಯೋಜನೆ
ಅವಕಾಶ
ಇರುವುದಿಲ್ಲ.
ಗಣೇಶ
ಮೂರ್ತಿ
ತರುವಾಗ
ಹಾಗೂ
ವಿಸರ್ಜಿಸುವ
ಸಂದರ್ಭಗಳಲ್ಲಿ
ಮೆರವಣಿಗೆ
ಹೊರಡಿಸುವಂತಿಲ್ಲ.
ಸಾರ್ವಜನಿಕ
ದರ್ಶನಕ್ಕೆ
ಆಗಮಿಸುವ
ಭಕ್ತಾದಿಗಳಿಗೆ
ಸ್ಯಾನಿಟೈಸರ್
ಹಾಗೂ
ಥರ್ಮಲ್
ಸ್ಕ್ರೀನಿಂಗ್
ವ್ಯವಸ್ಥೆಯನ್ನು
ಆಯೋಜಕರು
ಮಾಡಬೇಕು.
ಅಲ್ಲದೆ
ಭಕ್ತಾದಿಗಳು
ಮತ್ತು
ಸಾರ್ವಜನಿಕರು
ಕಡ್ಡಾಯವಾಗಿ
ಮಾಸ್ಕ್
ಧರಿಸಲೇಬೇಕು.
ಯಾವುದೇ
ಕಾರಣಕ್ಕೂ
ನಮ್ಮ
ವರ್ತನೆ
ಕೋವಿಡ್
ಸೋಂಕು
ಹರಡುವ
ರೀತಿ
ಇರಬಾರದು.
ಒಂದು
ವೇಳೆ
ಯಾವುದೇ
ಉಲ್ಲಂಘನೆ
ಕಂಡುಬಂದಲ್ಲಿ
ಅಂತಹವರ
ವಿರುದ್ಧ
ಕಾನೂನು
ಕ್ರಮ
ಜರುಗಿಸಲಾಗುವುದು,"
ಎಂದು
ದಾವಣಗೆರೆ
ಜಿಲ್ಲಾಧಿಕಾರಿ
ಮಹಾಂತೇಶ್.
ಆರ್.
ಬೀಳಗಿ
ಹೇಳಿದ್ದಾರೆ.
ಗ್ರಾಮ ವ್ಯಾಪ್ತಿಯ ಗ್ರಾ.ಪಂ. ಪಿಡಿಒಗಳಿಂದ ಅನುಮತಿ
"ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ ಕಚೇರಿ, ಉಳಿದಂತೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಆಯಾ ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳ ಕಚೇರಿ, ಗ್ರಾಮ ಮಟ್ಟದಲ್ಲಿ ಆಯಾ ಗ್ರಾಮ ವ್ಯಾಪ್ತಿಯ ಗ್ರಾ.ಪಂ. ಪಿಡಿಒಗಳಿಂದ ಅನುಮತಿ ಪಡೆಯಬೇಕು. ಉಳಿದಂತೆ ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ಪಡೆಯಬೇಕಾದ ಅನುಮತಿಯನ್ನು ಒಂದೇ ಕಡೆ ಪಡೆಯುವಂತಾಗಲು ಮಹಾನಗರ ಪಾಲಿಕೆ ಸೇರಿದಂತೆ ಆಯಾ ಸ್ಥಳೀಯ ಸಂಸ್ಥೆಗಳ ಕಚೇರಿಯಲ್ಲಿಯೇ ಏಕಗವಾಕ್ಷಿ ವ್ಯವಸ್ಥೆ ಮಾಡಿ, ಅನುಮತಿ ದೊರಕಿಸಲು ಅವಕಾಶ ಕಲ್ಪಿಸಲಾಗುವುದು. ಅಲ್ಲದೆ ಅನುಮತಿ ಪಡೆದ ಆಯೋಜಕರು ಸರ್ಕಾರದ ಮಾರ್ಗಸೂಚಿ ಪಾಲಿಸುತ್ತಿರುವ ಬಗ್ಗೆಯೂ ಇದೇ ಅಧಿಕಾರಿಗಳು ನಿಗಾವಹಿಸಿ, ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು," ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
30 ಕಡೆ ಗಣೇಶ ವಿಸರ್ಜನೆಗೆ ವ್ಯವಸ್ಥೆ
"ದಾವಣಗೆರೆ
ಮಹಾನಗರ
ಪಾಲಿಕೆ
ವ್ಯಾಪ್ತಿಯಲ್ಲಿ
ಗಣೇಶಮೂರ್ತಿ
ವಿಸರ್ಜನೆಗೆ
ಒಟ್ಟು
30
ಕಡೆಗಳಲ್ಲಿ
ಸ್ಥಳ
ಗುರುತಿಸಲಾಗಿದ್ದು,
ಇಲ್ಲಿ
ಪಾಲಿಕೆಯಿಂದ
ನೀರಿನ
ಟ್ಯಾಂಕ್
ಸಹಿತದ
ಟ್ಯಾಂಕರ್
ವ್ಯವಸ್ಥೆ
ಮಾಡಲಾಗುವುದು,
ಅಲ್ಲದೆ
ಶಿರಮಗೊಂಡನಹಳ್ಳಿ,
ಭಾತಿ
ಕೆರೆ
ಬಳಿಯೂ
ಕೃತಕ
ಟ್ಯಾಂಕ್
ನಿರ್ಮಿಸಿ
ಗಣೇಶಮೂರ್ತಿ
ವಿಸರ್ಜನೆಗೆ
ಅವಕಾಶ
ಮಾಡಿಕೊಡಲಾಗುವುದು
ಎಂದು
ಪಾಲಿಕೆ
ಅಧಿಕಾರಿಗಳು
ಮಾಹಿತಿ
ನೀಡಿದ್ದಾರೆ.
ಸಾರ್ವಜನಿಕರು
ನಿಗದಿತ
ಸ್ಥಳಗಳಲ್ಲೇ
ಗಣೇಶಮೂರ್ತಿಯನ್ನು
ವಿಸರ್ಜಿಸಬೇಕು.
ಗಣೇಶಮೂರ್ತಿ
ವಿಸರ್ಜನೆ
ಸ್ಥಳಗಳಲ್ಲಿ
ಸಮರ್ಪಕವಾಗಿ
ವಿದ್ಯುತ್
ದೀಪದ
ವ್ಯವಸ್ಥೆ
ಮಾಡಬೇಕು
ಎಂದು
ಸೂಚಿಸಿರುವ
ಜಿಲ್ಲಾಧಿಕಾರಿಗಳು,
ಮಾಲಿನ್ಯ
ನಿಯಂತ್ರಣ
ಮಂಡಳಿಯಿಂದ
ಈ
ಬಾರಿ
ಅರಿಶಿನ
ಗಣಪ
ಮೂರ್ತಿ
ಪ್ರತಿಷ್ಠಾಪಿಸಲು
ಅಭಿಯಾನ
ಕೈಗೊಂಡಿದ್ದು,
ಸಾರ್ವಜನಿಕರು
ಹೆಚ್ಚಿನ
ಸಂಖ್ಯೆಯಲ್ಲಿ
ಅರಿಶಿನ
ಗಣಪನನ್ನು
ಪ್ರತಿಷ್ಠಾಪಿಸಿ,
ಫೋಟೋ
ವಿಡಿಯೋವನ್ನು
ಇಲಾಖೆಯ
ವೆಬ್ಸೈಟ್ನಲ್ಲಿ
ಅಪ್ಲೋಡ್
ಮಾಡಬೇಕು,"
ಎಂದು
ಮನವಿ
ಮಾಡಿದರು.
ಕೋವಿಡ್ ಲಸಿಕೆ ಅಭಿಯಾನ
"ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ, ಕೋವಿಡ್ ನಿರೋಧಕ ಲಸಿಕೆ ನೀಡುವ ಅಭಿಯಾನ ಕೈಗೊಳ್ಳಲು ಸರ್ಕಾರ ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಿದ್ದು, ಇದರನ್ವಯ, ದಾವಣಗೆರೆ ಜಿಲ್ಲೆಯಲ್ಲಿಯೂ ಈ ಅವಕಾಶ ಬಳಸಿಕೊಂಡು ಲಸಿಕೆ ಅಭಿಯಾನ ಮಾಡಲಾಗುವುದು. ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾ ಆರ್ಸಿಎಚ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು," ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.