ದಾವಣಗೆರೆ ಬೆಣ್ಣೆದೋಸೆ ಸವಿದು 'ಸೂಪರ್' ಎಂದ ರಾಹುಲ್
Recommended Video
ದಾವಣಗೆರೆ, ಏಪ್ರಿಲ್ 04 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದಾವಣಗೆರೆಯಲ್ಲಿ ಬೆಣ್ಣೆದೋಸೆ ರುಚಿಗೆ ಮನಸೋತು 'ಸೂಪರ್' ಎಂದಿದ್ದಾರೆ. ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಇಂದು ಬೆಳಗ್ಗೆ ಬೆಣ್ಣೆದೋಸೆ ಸವಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಬುಧವಾರ ಬೆಳಗ್ಗೆ ಚಿತ್ರದುರ್ಗಕ್ಕೆ ಭೇಟಿ ನೀಡುವ ಮುನ್ನ ರಾಹುಲ್ ಗಾಂಧಿ ನಗರದ ಪಿಜೆ ಬಡಾವಣೆಯ ವಿಜಿ ಬೆಣ್ಣೆದೋಸೆ ಹೋಟೆಲ್ನಲ್ಲಿ ಬೆಣ್ಣೆದೋಸೆ ಸವಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಜೊತೆಗಿದ್ದರು.
ಮಿರ್ಚಿ ಬಜ್ಜಿ, ಗಿರ್ಮಿಟ್ ಚಪ್ಪರಿಸಿ ತಿಂದ ರಾಹುಲ್ ಗಾಂಧಿ
2 ಬೆಣ್ಣೆದೋಸೆ ಸವಿದ ರಾಹುಲ್ ಗಾಂಧಿ 'ಸೂಪರ್' ಎಂದು ಹೇಳಿದರು. ಹೋಟೆಲ್ ಮಾಲೀಕನ ಕೈ ಕುಲುಕಿ ಮೆಚ್ಚುಗೆ ಸೂಚಿಸಿದರು. ರಾಹುಲ್ ಸೇರಿದಂತೆ ಇತರ 15 ನಾಯಕರು ಸೇರಿ 25 ಬೆಣ್ಣೆದೋಸೆಯನ್ನು ಸವಿದರು. ರಾಹುಲ್ ಗಾಂಧಿ ಮಾಲೀಕನಿಗೆ 800 ರೂ. ನೀಡಿದರು.
ಚಿತ್ರಗಳು: ದಾವಣಗೆರೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
ಬೆಣ್ಣೆದೋಸೆ ಸವಿದ ಬಳಿಕ ಪಕ್ಕದ ಪದ್ದು ಕಾಫಿಬಾರ್ಗೆ ಭೇಟಿ ನೀಡಿ ಟೀ ಪಡೆದರು. ಈ ಸಂದರ್ಭದಲ್ಲಿ ಅಲ್ಲಿದ್ದ ಜನರ ಜೊತೆ ಮಾತುಕತೆ ನಡೆಸಿದರು. ಅಭಿಮಾನಿಗಳ ಜೊತೆ ಸೆಲ್ಫೀ ತೆಗೆಸಿಕೊಂಡರು.
ಮಿರ್ಚಿ ಸವಿದಿದ್ದರು : ಫೆಬ್ರವರಿಯಲ್ಲಿ ರಾಜ್ಯಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ರಾಯಚೂರಿನ ಮೌಲಾ ಸಾಬ್ ಎಂಬುವವರ ಹೋಟೆಲ್ನಲ್ಲಿ ಮಿರ್ಚಿ ಸವಿದಿದ್ದರು.