ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನೆಗೆಲಸ ಮಾಡಿ ಮಗನ ಸಾಕುತ್ತಿದ್ದ ದಾವಣಗೆರೆಯ ಈಕೆ ಪಾಡು ಯಾರಿಗೂ ಬೇಡ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಏಪ್ರಿಲ್ 11: ಭಾರತ ಲಾಕ್ ಡೌನ್ ಆದಾಗಿನಿಂದ ಬಡಜನರ ಪಾಡು ಹೇಳತೀರದಾಗಿದೆ. ಕೂಲಿ ಕಾರ್ಮಿಕರು, ನಿರ್ಗತಿಕರು, ವಲಸೆ ಬಂದಿರುವವರ ಕಥೆಯಂತೂ ಇನ್ನೂ ಕಷ್ಟಕರವಾಗಿದೆ.

ಹಾಗೆಯೇ ದಾವಣಗೆರೆಯ ಯಲ್ಲಮ್ಮ ನಗರದಲ್ಲಿ‌ರುವ ವೃದ್ಧೆ ಫಕೀರಮ್ಮ ಹಾಗೂ ಆತನ ಮಗ ರಾಜು ಕಳೆದ 15 ದಿನಗಳಿಂದ ಊಟ ಸಿಗದೆ ಪರದಾಡುವಂತಾಗಿದೆ. ರಾಜುಗೆ ಪಾರ್ಶ್ವವಾಯು ಇದ್ದು, ತಾಯಿ ಫಕೀರಮ್ಮ ಅವರೇ ಮನೆಗಳಿಗೆ ಕೆಲಸಕ್ಕೆ ಹೋಗಿ ಮಗನನ್ನು ನೋಡಿಕೊಳ್ಳುತ್ತಿದ್ದಳು. ಆದರೆ ಈಗ ಅದೂ ಸಾಧ್ಯವಾಗದೆ ಮನೆಯಲ್ಲಿ ಕೂರುವಂತಾಗಿದೆ. ಕೈಯಲ್ಲಿ ಕಾಸಿಲ್ಲದೆ, ತಿನ್ನಲು ಊಟವೂ ಇಲ್ಲದೇ ಕಷ್ಟ ಅನುಭವಿಸುತ್ತಿದ್ದಾರೆ.

 ಸೈಟ್ ಮಾರಿ ಬಡವರಿಗೆ ಅನ್ನ ಕೊಡುತ್ತಿದ್ದಾರೆ ಕೋಲಾರದ ಈ ಸೋದರರು ಸೈಟ್ ಮಾರಿ ಬಡವರಿಗೆ ಅನ್ನ ಕೊಡುತ್ತಿದ್ದಾರೆ ಕೋಲಾರದ ಈ ಸೋದರರು

ದುಸ್ಥಿತಿಯಲ್ಲಿರುವ ಮನೆಯಲ್ಲೇ ಈ ಅಮ್ಮ ಮಗ ಜೀವನ ಮಾಡುತ್ತಿದ್ದು, ಒಂದು ಹೊತ್ತಿನ ಊಟಕ್ಕೂ ಕಷ್ಟವಾಗಿಬಿಟ್ಟಿದೆ. ಒಂದೆಡೆ ಜಿಲ್ಲಾಡಳಿತ, ಯಾರೂ ಹಸಿವಿನಿಂದ ಇರಬಾರದು ಎಂದು ಶಪಥ ಮಾಡಿದೆ. ಇತ್ತ ಕಳೆದ 15 ದಿನಗಳಿಂದ ಸರಿಯಾಗಿ ಊಟವಿಲ್ಲದೆ ಈ ಇಬ್ಬರು ಹಸಿವಿನಿಂದ ನರಳುತ್ತಿದ್ದಾರೆ. ಜನ ಪ್ರತಿನಿಧಿಗಳೂ ಹೊರ ಬಾರದೆ ಮನೆಯಲ್ಲೇ ಕುಳಿತಿದ್ದಾರೆ.

Mother And Son Didnt Get Food Since 15 Days In Davanagere

ಈ ವೃದ್ಧೆ ಹಾಗೂ ಅನಾರೋಗ್ಯಕ್ಕೆ ಒಳಗಾಗಿ ಹಸಿವಿನಿಂದ ಕಂಗಾಲಾಗಿರುವ ಮಗನ ಪರಿಸ್ಥಿತಿ ‌ನೋಡಿದರೆ ಎಂಥವರ ಕಣ್ಣಲ್ಲೂ ನೀರು ತುಂಬುತ್ತದೆ.

English summary
Poor mother and son in davangere not getting food since 15 days due to lockdown, no one came for their help,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X