ಬಿಸಿಯೂಟ ತಯಾರಕರಿಂದ ಬೆಂಗಳೂರು ಚಲೋ!
ದಾವಣಗೆರೆ,
ಫೆಬ್ರವರಿ
04:
ವೇತನ
ಹೆಚ್ಚಳಕ್ಕೆ
ಆಗ್ರಹಿಸಿ,
ಬಿಸಿಯೂಟ
ತಯಾರಕರು
ಫೆಬ್ರವರಿ
6ರಂದು
ಬೆಂಗಳೂರು
ಚಲೋ
ಕಾರ್ಯಕ್ರಮ
ಹಮ್ಮಿಕೊಂಡಿದ್ದಾರೆ
ಎಂದು
ರಾಜ್ಯ
ಅಕ್ಷರ
ದಾಸೋಹ
ಬಿಸಿಯೂಟ
ತಯಾರಕರ
ಫೆಡರೇಷನ್
ರಾಜ್ಯ
ಪ್ರಧಾನ
ಕಾರ್ಯದರ್ಶಿ
ಆವರಗೆರೆ
ಚಂದ್ರು
ಘೋಷಿಸಿದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಖಾಸಗಿ ಅನುದಾನಿತ ಶಾಲೆಗಳಲ್ಲಿ ಸರ್ಕಾರದ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿಯಲ್ಲಿ ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ 1,18,000 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಇವರಿಗೆ ಗೌರವ ಸಂಭಾವನೆ ಹೆಸರಿನಲ್ಲಿ ಅಲ್ಪವೇತನ ನೀಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಇವರನ್ನು ವಂಚಿಸುತ್ತಿವೆ ಎಂದು ಆಪಾದಿಸಿದರು.
ಬಿಸಿಯೂಟ
ತಯಾರಕರಿಗೆ
ಕನಿಷ್ಠ
ವೇತನ
ಜಾರಿಗೆ
ಬರಬೇಕು.
ಬಿಸಿಯೂಟ
ತಯಾರಕರನ್ನು
ತಮಿಳುನಾಡು
ಮಾದರಿಯಲ್ಲಿ
ಅರೆಕಾಲಿಕ
ಖಾಯಂ
ನೌಕರರೆಂದು
ಪರಿಗಣಿಸಬೇಕು.
ಇಎಸ್ಐ,
ಭವಿಷ್ಯ
ನಿಧಿ,
ಗ್ರಾಚ್ಯೂಟಿ
ಯೋಜನೆಗಳನ್ನು
ಜಾರಿಗೆ
ತರಬೇಕು.
ಯಾವುದೇ
ರೀತಿಯ
ಅಪಘಾತದಿಂದ
ಮರಣ
ಹೊಂದಿದಲ್ಲಿ
ಅಥವಾ
ಶಾಶ್ವತ
ಅಂಗವಿಕಲರಾದಲ್ಲಿ
ಕನಿಷ್ಠ
5
ಲಕ್ಷ
ರೂ.
ಪರಿಹಾರ
ಧನ
ಒದಗಿಸಬೇಕು
ಎಂದು
ಆಗ್ರಹ
ಪಡಿಸಿದರು.
ಮಹಿಳಾ ಅಡುಗೆ ಸಿಬ್ಬಂದಿಯವರಿಗೆ 26 ವಾರಗಳ ಸಂಬಳ ಸಹಿತ ಹೆರಿಗೆ ಸೌಲಭ್ಯ ಜಾರಿ ಮಾಡಬೇಕು. ಬಿಸಿಯೂಟ ತಯಾರಕರು ಸ್ವಾಭಾವಿಕ ಮರಣ ಹೊಂದಿದರೆ ಕನಿಷ್ಠ 2 ಲಕ್ಷ ರೂ. ಪರಿಹಾರ ನೀಡುವ ಯೋಜನೆ ಜಾರಿಗೆ ತರಬೇಕು. ಇವರಿಗೆ ವೈದ್ಯಕೀಯ ಚಿಕಿತ್ಸೆಗೆ ಕನಿಷ್ಠ 1 ಲಕ್ಷ ರೂ. ವಿಮೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಬಿಸಿಯೂಟ ತಯಾರಕರು ಸ್ವಾಭಾವಿಕ ಮರಣ ಹೊಂದಿದರೆ, ಕನಿಷ್ಠ 2 ಲಕ್ಷ ರೂ. ಪರಿಹಾರ ನೀಡಬೇಕು. ಅಕ್ಷಯ ಪಾತ್ರೆ ಫೌಂಡೇಷನ್, ಅದಮ್ಯ ಚೇತನ ಹಾಗೂ ಇನ್ನಿತರೆ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಮಾಡಿರುವ ಗುತ್ತಿಗೆ ಒಪ್ಪಂದಗಳನ್ನು ರದ್ದುಪಡಿಸಿ, ಸರ್ಕಾರದ ಕೈಪಿಡಿಯಲ್ಲಿರುವಂತೆ ಇಲಾಖೆಯಿಂದಲೇ ಶಾಲೆಗಳಲ್ಲಿ ಬಿಸಿಯೂಟ ತಯಾರಿಸಿ, ಮಕ್ಕಳಿಗೆ ಬಡಿಸಬೇಕೆಂದು ಆಗ್ರಹಪಡಿಸಿದರು.
ಬಿಸಿಯೂಟ ತಯಾರಕರಿಗೆ ಮಾಸಿಕ ಕನಿಷ್ಠ 3 ಸಾವಿರ ರೂ. ಪಿಂಚಣಿ ಸಿಗುವಂತೆ ಯೋಜನೆ ರೂಪಿಸಿ, ಜಾರಿಗೆ ತರಬೇಕು. ಅಡುಗೆ ಸಿಬ್ಬಂದಿಯವರು ಯಾವುದೇ ರೀತಿಯಲ್ಲಿ ಮರಣ ಹೊಂದಿದರೆ, ತಕ್ಷಣ 15 ಸಾವಿರ ರೂ. ಗಳನ್ನು ಅಂತ್ಯಕ್ರಿಯೆಗೆ ನೀಡಬೇಕೆಂದು ಒತ್ತಾಯಿಸಿದರು.