ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಶೇ 62ರಷ್ಟು ಮತದಾನ
ದಾವಣಗೆರೆ, ಅಕ್ಟೋಬರ್ 28: ಕರ್ನಾಟಕ ವಿಧಾನ ಪರಿಷತ್ತಿಗೆ ನಾಲ್ವರು ಸದಸ್ಯರನ್ನು ಆಯ್ಕೆ ಮಾಡಲು ಬುಧವಾರ ಮತದಾನ ನಡೆಯಿತು. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಶೇ.62.55 ಮತದಾನವಾಗಿದೆ.
ಆಗ್ನೇಯ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ ಮತ್ತು ಜಗಳೂರು ಮತ ಕ್ಷೇತ್ರಗಳ ಒಟ್ಟು 32 ಮತಗಟ್ಟೆ ಕೇಂದ್ರಗಳಲ್ಲಿ ಮತದಾನ ನಡೆಯಿತು. ಒಟ್ಟು 12,813 ಪುರುಷ ಮತದಾರರ ಪೈಕಿ 8,641 ಜನರು ಮತದಾನ ಮಾಡಿದರು. 8,143 ಮಹಿಳಾ ಮತದಾರರ ಪೈಕಿ 4,471 ಮಹಿಳೆಯರು ಮತದಾನ ಮಾಡಿದರು.
ಪರಿಷತ್ ಚುನಾವಣೆ; ಕೋವಿಡ್ ಮಾರ್ಗಸೂಚಿಗಳು
ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 13,112 ಮತದಾರರು ಮತದಾನ ಮಾಡಿದ್ದು ಶೇ. 62.55 ರಷ್ಟು ಮತದಾನವಾಗಿದೆ. ನವೆಂಬರ್ 2ರಂದು ಮತ ಎಣಿಕೆ ನಡೆಯಲಿದೆ. ಮಲೆಬೆನ್ನೂರು ಮತಗಟ್ಟೆ ಸಂಖ್ಯೆ 2ರಲ್ಲಿ ಅತಿ ಹೆಚ್ಚು ಶೇ. 85.64 ಮತದಾನವಾಗಿದ್ದರೆ, ದಾವಣಗೆರೆ ಮತಗಟ್ಟೆ ಸಂಖ್ಯೆ 13ರಲ್ಲಿ ಅತಿ ಕಡಿಮೆ ಶೇ.42.56 ರಷ್ಟು ಮತದಾನವಾಗಿದೆ.
ವಿಧಾನ ಪರಿಷತ್ ಚುನಾವಣೆ; ನೋಟಾ ಆಯ್ಕೆ ಲಭ್ಯವಿಲ್ಲ
ಬೆಳಗ್ಗೆ 10 ಗಂಟೆಗೆ ಶೇ.5 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 12 ಗಂಟೆಗೆ ಶೇ 19.54 ಮತದಾನವಾಯಿತು. ಮಧ್ಯಾಹ್ನ 2 ಗಂಟೆಗೆ ಶೇ. 32.20 ಮತದಾನವಾದರೆ, ಸಂಜೆ 4 ಗಂಟೆಗೆ ಶೇ. 52.80 ಮತದಾನವಾಗಿತ್ತು.
ವಿಧಾನ ಪರಿಷತ್ 4 ಕ್ಷೇತ್ರದ ಚುನಾವಣೆ; ಅಭ್ಯರ್ಥಿಗಳ ಪಟ್ಟಿ
ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯ ತನಕ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಮತದಾನ ಎಲ್ಲಾ ಕಡೆ ಶಾಂತಿಯುತವಾಗಿ ನಡೆಯಿತು. ಕೋವಿಡ್ 19 ನಿಯಮಗಳನ್ನು ಸಹ ಮತದಾರರು ಪಾಲನೆ ಮಾಡಿದರು.
Recommended Video
ಎಲ್ಲಾ ಮತಗಟ್ಟೆಗಳಲ್ಲಿ ಆಶಾ ಕಾರ್ಯಕರ್ತೆಯರು ಮತದಾರರಿಗೆ ಸ್ಯಾನಿಟೈಸರ್ ನೀಡಿದರು. ಥರ್ಮಲ್ ಸ್ಕ್ಯಾನರ್ ಮೂಲಕ ದೇಹದ ಉಷ್ಣತೆ ಪರಿಶೀಲನೆ ನಡೆಸಲಾಯಿತು. ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೈಸ್ಕೂಲ್ ಮೈದಾನದಲ್ಲಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು.