ದಾವಣಗೆರೆಯಿಂದ ಹೊಸ ಮಾರ್ಗದಲ್ಲಿ ಸರ್ಕಾರಿ ಬಸ್ ಸೇವೆ
ದಾವಣಗೆರೆ , ಜೂನ್ 17 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ದಾವಣಗೆರೆ ವಿಭಾಗದಿಂದ ಜನರ ಬೇಡಿಕೆಗೆ ಅನುಗುಣವಾಗಿ ಹೊಸ ಮಾರ್ಗದಲ್ಲಿ ಬಸ್ಗಳ ಸಂಚಾರ ಆರಂಭಿಸಲಾಗಿದೆ. ಜೂನ್ 17ರ ಬುಧವಾರಿಂದ ಬಸ್ ಸಂಚಾರ ಪ್ರಾರಂಭವಾಗಿದೆ.
Recommended Video
ಪ್ರಯಾಣಿಕರ ಬೇಡಿಕೆಗೆ ಅನುಸಾರವಾಗಿ ವಿವಿಧ ಮಾರ್ಗಗಳಲ್ಲಿ ಬಸ್ಗಳ ಸಂಚಾರ ಆರಂಭಿಸಲಾಗಿದೆ ಎಂದು ದಾವಣಗೆರೆ ವಿಭಾಗ ಹೇಳಿದೆ. ನೂತನ ಸಾರಿಗೆ ಸೌಲಭ್ಯವನ್ನು ಸಾರ್ವಜನಿಕರು ಉಪಯೋಗ ಮಾಡಿಕೊಳ್ಳಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಬಾಳ್ ಮನವಿ ಮಾಡಿದ್ದಾರೆ.
ವಿಆರ್ಎಸ್ ಯೋಜನೆ ಪ್ರಕಟಿಸಿದ ಕೆಎಸ್ಆರ್ಟಿಸಿ
ಬುಧವಾರದಿಂದಲೇ ಬಸ್ಗಳು ಸಂಚಾರ ಆರಂಭಿಸಿವೆ. ದಾವಣಗೆರೆ ನಗರದಿಂದ ವಿವಿಧ ಪ್ರದೇಶಗಳಿಗೆ ಬಸ್ಗಳು ಸಂಚಾರವನ್ನು ಆರಂಭಿಸಿವೆ. ಬಸ್ ಸಂಚಾರ ನಡೆಸುವ ಮಾರ್ಗಗಳ ವಿವರ ಇಲ್ಲಿದೆ.
ಅಂತರರಾಜ್ಯ ಬಸ್ ಸೇವೆ; ಕೆಎಸ್ಆರ್ಟಿಸಿ ಮಹತ್ವದ ಪ್ರಕಟಣೆ
* ದಾವಣಗೆರೆ-ಕೊಟ್ಟೂರು via ಮೇಗಳಗೆರೆ, ಕಂಬತ್ತಳ್ಳಿ, ಅರಸೀಕೆರೆ, ಮತ್ತಿಹಳ್ಳಿ
ದಾವಣಗೆರೆ ಜಿ.ಪಂ ನೂತನ ಅಧ್ಯಕ್ಷರಾಗಿ ದೀಪಾ ಜಗದೀಶ್ ಆಯ್ಕೆ
* ದಾವಣಗೆರೆ-ಭದ್ರಾವತಿ via ಹದಡಿ, ತ್ಯಾವಣಗಿ, ನಲ್ಲೂರು, ಚನ್ನಗಿರಿ, ಜೋಳದಾಳು
* ದಾವಣಗೆರೆ-ಉಜ್ಜನಿ via ಅಣಜಿ, ಕುರುಡಿ, ಕಿತ್ತೂರು, ಪಲ್ಲಾಗಟ್ಟೆ, ಸೊಕ್ಕೆ
* ದಾವಣಗೆರೆ-ಚಳ್ಳಕೆರೆ via ಅಣಜಿ, ಬಿಳಿಚೋಡು, ಜಗಳೂರು, ಮುಷ್ಟೂರು, ನಾಯಕನಹಟ್ಟಿ