ಮೈತ್ರಿ ಸರ್ಕಾರ ಪತನ, ರಕ್ತದಲ್ಲಿ ಬರೆದುಕೊಡುವೆ : ರೇಣುಕಾಚಾರ್ಯ
Recommended Video
ದಾವಣಗೆರೆ, ಜೂನ್ 02 : 'ರಾಜ್ಯ ಸರ್ಕಾರ ಪತನವಾದ ಬಳಿಕ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ. ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಲಿದ್ದಾರೆ' ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಭಾನುವಾರ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ ಅವರು, 'ನಾನು ರಕ್ತದಲ್ಲಿ ಬರೆದುಕೊಡುತ್ತೇನೆ. ಸಮ್ಮಿಶ್ರ ಸರ್ಕಾರ ಬೀಳುವುದು ಖಚಿತ. ಸರ್ಕಾರ ಬೀಳದೆ ಹೋದಲ್ಲಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ' ಎಂದರು.
ಬುಧವಾರ ಸಂಪುಟ ವಿಸ್ತರಣೆ : ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ?
'ನಾವು ಯಾವುದೇ ಆಪರೇಷನ್ ಕಮಲವನ್ನೂ ಮಾಡುವುದಿಲ್ಲ. ಆದರೆ, ಅತೃಪ್ತ ಕಾಂಗ್ರೆಸಿಗರಿಂದಲೇ ಕಂಟಕವಾಗಲಿದೆ. ಕರ್ನಾಟಕ ಸರ್ಕಾರ ರೇವಣ್ಣ, ಡಿ.ಕೆ.ಶಿವಕುಮಾರ್, ಪರಮೇಶ್ವರ ಅವರಿಗೆ ಮಾತ್ರ ಸೇರಿದ್ದು ಎನ್ನುವಂತಾಗಿದೆ' ಎಂದು ರೇಣುಕಾಚಾರ್ಯ ಹೇಳಿದರು.
ಮೈತ್ರಿ ಸರ್ಕಾರದ ಸಂಪುಟ ಸೇರುವ ಸಂಭಾವ್ಯ ಶಾಸಕರ ಪಟ್ಟಿ
ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ದಿನದಿಂದ ಮೈತ್ರಿ ಸರ್ಕಾರ ಪತನಗೊಳ್ಳಲಿದೆ ಎಂಬ ಮಾತು ಕೇಳಿಬರುತ್ತಿದೆ. ಮತ್ತೊಂದು ಕಡೆ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಹಲವು ತಂತ್ರಗಳನ್ನು ಮಾಡುತ್ತಿವೆ....
ಸಂಪುಟ ಪುನಾರಚನೆಗೆ ತಾತ್ಕಾಲಿಕ ತಡೆ, ವಿಸ್ತರಣೆಗೆ ಹಸಿರು ನಿಶಾನೆ
ಯಡಿಯೂರಪ್ಪ ಏನು ಹೇಳಿದ್ದರು?
ಮೈತ್ರಿ ಸರ್ಕಾರದ ಬಗ್ಗೆ ಮಾತನಾಡಿದ್ದ ಬಿ.ಎಸ್.ಯಡಿಯೂರಪ್ಪ ಅವರು, 'ರಾಜ್ಯ ಸರ್ಕಾರ ಕಚ್ಚಾಟ, ಬಡಿದಾಟದಲ್ಲಿ ತಲ್ಲೀನವಾಗಿದೆ. ಯಾವುದೇ ಕ್ಷಣದಲ್ಲಿ ಸರ್ಕಾರ ಬೀಳಬಹುದು. ಸುಮ್ಮನೆ ಕೂರಲು ನಾವೇನು ಸನ್ಯಾಸಿಗಳಲ್ಲ. ಪಕ್ಷದ ಕಾರ್ಯಕರ್ತರು ಜಾಗೃತವಾಗಿರಬೇಕು' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು.
ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ
ದೆಹಲಿಯಿಂದ ವಾಪಸ್ ಬಂದ ಬಳಿಕ ಮಾತನಾಡಿದ್ದ ಬಿ.ಎಸ್.ಯಡಿಯೂರಪ್ಪ ಅವರು, 'ಕೆಲವು ಶಾಸಕರನ್ನು ಮುಂದೆ ಬಿಟ್ಟಿರುವ ಸಿದ್ದರಾಮಯ್ಯ ಅವರು, ಮೈತ್ರಿಯಲ್ಲಿ ಅತೃಪ್ತಿ ಇದೆ ಎಂದು ನಾಟಕ ಮಾಡಿಸುತ್ತಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವ ಯತ್ನ ಮಾಡದೇ ವಿರೋಧ ಪಕ್ಷದಲ್ಲಿ ಕೆಲಸ ಮಾಡಿ ಎಂದು ವರಿಷ್ಠರು ಹೇಳಿದ್ದಾರೆ' ಎಂಂದು ತಿಳಿಸಿದ್ದರು.
|
ಸಿದ್ದರಾಮಯ್ಯ ಟ್ವೀಟ್
ನರೇಂದ್ರ
ಮೋದಿಯವರು
ಮತ್ತೊಮ್ಮೆ
ಪ್ರಧಾನಿಯಾಗಬೇಕು
ಎಂದು
ಜನತೆ
ನೀಡಿದ
ತೀರ್ಪನ್ನು
ನಾವು
ತಲೆಬಾಗಿ
ಒಪ್ಪಿಕೊಂಡಿದ್ದೇವೆ.
ಆದರೆ
ರಾಜ್ಯ
ಬಿಜೆಪಿ
ನಾಯಕರು
ತಮಗೆ
ಬಹುಮತವಿಲ್ಲದಿದ್ದರೂ
ಸಮ್ಮಿಶ್ರ
ಸರ್ಕಾರವನ್ನು
ಬೀಳಿಸಿ
ಅಧಿಕಾರದ
ಗದ್ದುಗೆ
ಏರುವ
ಪ್ರಯತ್ನವನ್ನು
ಮಾತ್ರ
ಇಂದಿಗೂ
ಕೈಬಿಟ್ಟಿಲ್ಲ.
ಇದು
ನಾಡಿನ
ಜನಾದೇಶವನ್ನು
ತಿರಸ್ಕರಿಸಿದಂತಲ್ಲವೇ?
ಎಂದು
ಸಿದ್ದರಾಮಯ್ಯ
ಪ್ರಶ್ನೆ
ಮಾಡಿದ್ದರು.
|
ಸರ್ಕಾರ ಸುಭದ್ರವಾಗಿದೆ
'ಲೋಕಸಭಾ ಚುನಾವಣೆಯ ಫಲಿತಾಂಶ ಕರ್ನಾಟಕ ಸಮ್ಮಿಶ್ರ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಾಜ್ಯ ಸರಕಾರವು ಕುಮಾರಸ್ವಾಮಿ ಅವರ ನೇತೃತ್ವದಲ್ಲಿಯೇ ಐದು ವರ್ಷ ಸುಭದ್ರವಾಗಿವಾಗಿ ಮುಂದುವರೆಯಲಿದೆ. ಕರ್ನಾಟಕವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವುದೇ ನಮ್ಮೆಲ್ಲರ ಗುರಿ' ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಟ್ವೀಟ್ ಮಾಡಿದ್ದಾರೆ.