ದಾವಣಗೆರೆ : ಶಶಿ ಸೋಪ್ ಮಾಲೀಕನ ಮನೆ ಮೇಲೆ ಐಟಿ ದಾಳಿ
ದಾವಣಗೆರೆ, ಜನವರಿ 10 : ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾವಣಗೆರೆಯಲ್ಲಿ ಉದ್ಯಮಿ ಮನೆ ಮೇಲೆ ದಾಳಿ ನಡೆಸಿದ್ದಾರೆ. ಗುರುವಾರ ಬೆಳಗ್ಗೆಯಿಂದ ದಾಖಲೆಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ.
ಗುರುವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಶಿ ಸೋಪ್ಸ್ ಮಖ್ಯಸ್ಥ ರವಿರಾಜ್ ಅವರ ದಾವಣಗೆರೆ ಮನೆ ಮೇಲೆ ದಾಳಿ ನಡೆಸಿದ್ದಾರೆ. 10 ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಡಿ.ಕೆ.ಶಿವಕುಮಾರ್ಗೆ ಐಟಿ ಸಂಕಷ್ಟ: ಬೇನಾಮಿ ಆಸ್ತಿ ಜಪ್ತಿ ಶೀಘ್ರ
ದಾವಣಗೆರೆಯಲ್ಲಿರುವ ರವಿರಾಜ್ ಅವರ ನಿವಾಸ ಶಶಿ ಸೋಪ್ಸ್ ತಯಾರಿಕಾ ಫ್ಯಾಕ್ಟರಿ, ಟಿವಿಎಸ್ ಶೋ ರೂಂ, ಶಾಲೆಗಳ ಮೇಲೆ ದಾಳಿ ನಡೆಸಲಾಗಿದೆ.
ಸ್ಯಾಂಡಲ್ ವುಡ್ ಐಟಿ ಶಾಕ್: ಇಂದೂ ಮುಂದುವರಿದ ಕಾರ್ಯಾಚರಣೆ!
ಕಳೆದ ವಾರ ಬೆಂಗಳೂರಿನಲ್ಲಿ ಕನ್ನಡ ಚಲನಚಿತ್ರ ನಟರಾದ ಯಶ್, ಪುನೀತ್ ರಾಜ್ಕುಮಾರ್, ಶಿವರಾಜ್ ಕುಮಾರ್, ಸುದೀಪ್ ಮನೆಗಳ ಮೇಲೆ ಐಟಿ ದಾಳಿ ನಡೆದಿತ್ತು. ನಿರ್ಮಾಪಕರಾದ ವಿಜಯ್ ಕಿರಗಂದೂರು, ರಾಕ್ಲೈನ್ ವೆಂಕಟೇಶ್, ಮನೋಹರ್ ನಿವಾಸದ ಮೇಲೆಯೂ ದಾಳಿ ನಡೆಸಲಾಗಿತ್ತು.
ಐಟಿ ದಾಳಿ ಕುರಿತು ಪತ್ರಕರ್ತರ ಪ್ರಶ್ನೆಗಳು: ಪುನೀತ್ ರಾಜ್ಕುಮಾರ್ ವಿನಯಪೂರ್ವಕ ಉತ್ತರಗಳು
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ