ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹರಿಹರದಲ್ಲಿ ನಿರ್ಗತಿಕರಿಗೆ ಊಟ ವಿತರಿಸಿ ಮಾನವೀಯತೆ ಮೆರೆದ ಪಿಎಸ್ಐ

By ದಾವಣಗೆರೆ ಪ್ರತಿನಿಧಿದೇಶದಲ್ಲಿ ಕೊರೊನಾ ಮಹಾಮಾರಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮನೆ ತೊರೆದಿರುವ ವಲಸಿಗರು, ನಿರಾಶ್ರಿತರು ಹಾಗೂ ನಿರ್ಗತಿಕರು ಅತಂತ್ರರಾಗಿದ್ದಾರೆ. ಊಟವಿಲ್ಲದೆ, ಅಡುಗೆ ಮಾಡಲು ಆಹಾರ ಪದಾರ್ಥಗಳಿಲ್ಲದೇ ಪರದಾಡುತ್ತಿದ್ದಾರೆ. ಇಂಥವರ ಕಷ್ಟಕ್ಕೆ ಖಾಕಿ ಪಡೆ ಸಹಾಯಕ್ಕೆ ನಿಂತಿದೆ. ದಾವಣಗೆರೆ ಜಿಲ್ಲೆಯ ಹರಿಹರ ಗ್ರಾಮಾಂತರ ಠಾಣೆಯ ಪಿಎಸ್ ‌ಐ ಡಿ.ರವಿಕುಮಾರ್ ಅಲೆಮಾರಿಗಳಿಗೆ ಹಾಗೂ ನಿರ್ಗತಿಕರಿಗೆ ಊಟ ವಿತರಿಸಿ ಮಾನವೀಯ ಕಾರ್ಯ ಮಾಡುತ್ತಿದ್ದಾರೆ. ತಾಲೂಕಿನ ಗುತ್ತೂರು
|
Google Oneindia Kannada News

ದಾವಣಗೆರೆ, ಏಪ್ರಿಲ್ 07: ದೇಶದಲ್ಲಿ ಕೊರೊನಾ ಮಹಾಮಾರಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮನೆ ತೊರೆದಿರುವ ವಲಸಿಗರು, ನಿರಾಶ್ರಿತರು ಹಾಗೂ ನಿರ್ಗತಿಕರು ಅತಂತ್ರರಾಗಿದ್ದಾರೆ.

ಊಟವಿಲ್ಲದೆ, ಅಡುಗೆ ಮಾಡಲು ಆಹಾರ ಪದಾರ್ಥಗಳಿಲ್ಲದೇ ಪರದಾಡುತ್ತಿದ್ದಾರೆ. ಇಂಥವರ ಕಷ್ಟಕ್ಕೆ ಖಾಕಿ ಪಡೆ ಸಹಾಯಕ್ಕೆ ನಿಂತಿದೆ. ದಾವಣಗೆರೆ ಜಿಲ್ಲೆಯ ಹರಿಹರ ಗ್ರಾಮಾಂತರ ಠಾಣೆಯ ಪಿಎಸ್ ‌ಐ ಡಿ.ರವಿಕುಮಾರ್ ಅಲೆಮಾರಿಗಳಿಗೆ ಹಾಗೂ ನಿರ್ಗತಿಕರಿಗೆ ಊಟ ವಿತರಿಸಿ ಮಾನವೀಯ ಕಾರ್ಯ ಮಾಡುತ್ತಿದ್ದಾರೆ.

ಹೋಮ್ ಗಾರ್ಡ್ ಸಿಬ್ಬಂದಿಗೆ ಆಹಾರ ಧಾನ್ಯ ವಿತರಿಸಿದ ಪೊಲೀಸರುಹೋಮ್ ಗಾರ್ಡ್ ಸಿಬ್ಬಂದಿಗೆ ಆಹಾರ ಧಾನ್ಯ ವಿತರಿಸಿದ ಪೊಲೀಸರು

Harihara PSI Distributing Food To Refugees And Needed

ತಾಲೂಕಿನ ಗುತ್ತೂರು ಬಳಿಯ ನೂರಾರು ವಲಸಿಗರಿಗೆ ಮತ್ತು ಹನಗವಾಡಿ ಬೈಪಾಸ್ ಬಳಿ ಇರುವ ಹತ್ತಾರು ನಿರ್ಗತಿಕ ಕುಟುಂಬಗಳಿಗೆ ಮಧ್ಯಾಹ್ನದ ಊಟದ ಪ್ಯಾಕೆಟ್‌ ಗಳನ್ನು ವಿತರಿಸಿದ್ದಾರೆ. ಅಲ್ಲದೆ ಮನೆಗಳಿಗೆ ಅವಶ್ಯಕವಾಗಿ ಬೇಕಾಗಿರುವ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿದ್ದಾರೆ. ಹಸಿದವರಿಗೆ ಅನ್ನ ನೀಡುವ, ಅವರ ಕಣ್ಣೀರೊರೆಸುವಲ್ಲಿ ಪಿಎಸ್ಐ ಮುಂದಾಗಿರುವುದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

English summary
Harihara Rural Police Station PSI D. Ravikumar is distributing food to refugees and needed people in davanagere due to lockdown,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X