2 ದಶಕಗಳ ಬಳಿಕ ಬ್ರಿಟಿಷರು ಮಾಡಿದ ಮಾರ್ಗದಲ್ಲಿ ರೈಲು ಸಂಚಾರ
ದಾವಣಗೆರೆ, ಅಕ್ಟೋಬರ್ 16 : ಎರಡು ದಶಕಗಳ ಬಳಿಕ ಹರಿಹರ- ಹೊಸಪೇಟೆ-ಕೊಟ್ಟೂರು ರೈಲು ಮಾರ್ಗದಲ್ಲಿ ಪ್ರಯಾಣಿಕರ ರೈಲು ಸಂಚಾರಕ್ಕೆ ಚಾಲನೆ ಸಿಗಲಿದೆ. ಬ್ರಿಟಿಷರು ರೈಲು ಸಂಚಾರ ಆರಂಭಿಸಿದ್ದ 1994ರಿಂದ ಪ್ಯಾಸೆಂಜರ್ ರೈಲು ಸಂಚಾರ ಸ್ಥಗಿತವಾಗಿತ್ತು.
ಅಕ್ಟೋಬರ್ 17ರಂದು 9.30ಕ್ಕೆ ಹೊಸಪೇಟೆ ರೈಲು ನಿಲ್ದಾಣದಲ್ಲಿ ಹರಿಹರ-ಕೊಟ್ಟೂರು ರೈಲು ಸೇವೆಗೆ ಚಾಲನೆ ಸಿಗಲಿದೆ. ರೈಲ್ವೆ ಖಾತೆ ರಾಜ್ಯ ಸಚಿವ, ಬೆಳಗಾವಿ ಸಂಸದ ಸುರೇಶ್ ಅಂಗಡಿ ರೈಲು ಸಂಚಾರಕ್ಕೆ ಹಸಿರು ನಿಶಾನೆಯನ್ನು ತೋರಿಸಲಿದ್ದಾರೆ.
ಶೀಘ್ರದಲ್ಲೇ ಹರಿಹರ-ಕೊಟ್ಟೂರು ಮೂಲಕ ಬೆಂಗಳೂರು ರೈಲು ಸಂಚಾರ
ಹರಿಹರ-ಕೊಟ್ಟೂರು ರೈಲು ಮಾರ್ಗದಲ್ಲಿ ಪ್ರಯಾಣಿಕರ ರೈಲು ಸಂಚಾರ ಆರಂಭವಾದರೆ ಬೆಂಗಳೂರು-ಹೊಸಪೇಟೆ-ಹಂಪಿ ನಡುವಿನ ಪ್ರಯಾಣದ ಅವಧಿ ಕಡಿತವಾಗಲಿದೆ. ಬೆಂಗಳೂರು- ಹುಬ್ಬಳ್ಳಿ ಮತ್ತು ಹುಬ್ಬಳ್ಳಿ-ಗುಂತಕಲ್ ಮಾರ್ಗಕ್ಕೂ ಇದು ಸಂಪರ್ಕ ಕಲ್ಪಿಸುತ್ತದೆ.
ಹೊಸಪೇಟೆ-ಕೊಟ್ಟೂರು ರೈಲಿಗೆ ಅ.17ರಂದು ಹಸಿರು ನಿಶಾನೆ
19ನೇ ಶತಮಾನದಲ್ಲಿ ಬ್ರಿಟಿಷರು ಕೊಟ್ಟೂರಿನಿಂದ ಹತ್ತಿಯನ್ನು ತೆಗೆದುಕೊಂಡು ಹೋಗಲು ಈ ರೈಲು ಮಾರ್ಗವನ್ನು ಮಾಡಿದ್ದರು. 1994ರ ತನಕ ಈ ಮಾರ್ಗದಲ್ಲಿ ಪ್ರಯಾಣಿಕರ ರೈಲು ಸಹ ಸಂಚಾರ ನಡೆಸುತ್ತಿತ್ತು. ಆದರೆ, ಬ್ರಾಡ್ ಗೇಜ್ಗೆ ಬದಲಾವಣೆಯಾದ ಬಳಿಕ ರೈಲು ಸಂಚಾರ ಸ್ಥಗಿತವಾಗಿತ್ತು.
ಹೊಸಪೇಟೆ-ಕೊಟ್ಟೂರು ನಡುವೆ ರೈಲು; ದಶಕಗಳ ಕನಸು ನನಸು
2016ರಿಂದ ಗೂಡ್ಸ್ ರೈಲಿನ ಸಂಚಾರ ಆರಂಭಗೊಂಡರೂ ಪ್ರಯಾಣಿಕ ರೈಲು ಸಂಚಾರ ಆರಂಭವಾಗಿರಲಿಲ್ಲ. ಸುರೇಶ್ ಅಂಗಡಿ ರೈಲ್ವೆ ಸಚಿವರಾದ ಬಳಿಕ ಜನರ ಒತ್ತಾಯಕ್ಕೆ ಮಣಿದು ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸೂಚಿಸಿದ್ದರು.
ರೈಲು ನಂಬರ್ 56529 ಮತ್ತು 56530 ಹರಿಹರ-ಕೊಟ್ಟೂರು-ಹರಿಹರ ನಡುವೆ ಸಂಚಾರ ನಡೆಸಲಿದೆ. ಅಕ್ಟೋಬರ್ 18ರಿಂದ ಹರಿಹರ-ಹೊಸಪೇಟೆ-ಹರಿಹರ ರೈಲು ಸೇವೆಗೆ ಚಾಲನೆ ಸಿಗಲಿದೆ. 9 ಬೋಗಿಗಳ ರೈಲಿನಲ್ಲಿ 7 ಜನರಲ್, 2 ಸೆಕೆಂಡ್ ಕ್ಲಾಸ್ ಬೋಗಿ ಇರುತ್ತವೆ.