ರಮ್ಯಾಗೆ ದೇವೇಗೌಡರ ಬೆಂಬಲ ದುರಾದೃಷ್ಟಕರ: ರೇಣುಕಾ
ದಾವಣಗೆರೆ, ಆಗಸ್ಟ್ 30: ಮಾಜಿ ಸಂಸದೆ ರಮ್ಯಾ ಅವರು ಪಾಕಿಸ್ತಾನವನ್ನು ಹೊಗಳುವ ಮೂಲಕ ತಾವೊಬ್ಬ ಅಪ್ರಬುದ್ಧ ರಾಜಕಾರಣಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ರಮ್ಯಾ ಹೇಳಿಕೆಗೆ ಮಾಜಿ ಪ್ರಧಾನಿ ದೇವೇಗೌಡ ಅವರು ಬೆಂಬಲ ನೀಡುರುವುದು ದುರಾದೃಷ್ಟಕರ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಟೀಕಿಸಿದ್ದಾರೆ.
ದೇಶ ದ್ರೋಹಿ ಹೇಳಿಕೆ ನೀಡಿರುವ ರಮ್ಯಾರನ್ನು ಅವರ ಪಕ್ಷದ ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ಉಗ್ರಪ್ಪ ಮತ್ತಿತರರು ಬೆಂಬಲಿಸುತ್ತಿರುವುದು ನಿರೀಕ್ಷಿತ. ತಮ್ಮ ವರಿಷ್ಠರನ್ನು ಓಲೈಸುವುದಕ್ಕಾಗಿ ಈ ರೀತಿ ಮಾಡುತ್ತಾರೆ.[ಬಿಜೆಪಿಗೆ ದಿಗ್ವಿಜಯ್ ಸಿಂಗ್ ಕೇಳಿದ 5 ಪ್ರಶ್ನೆಗಳು]
ಆದರೆ,
ಮಾಜಿ
ಪ್ರಧಾನಿ
ದೇವೇಗೌಡರೂ
ಸಹ
ರಮ್ಯಾ
ಅವರ
ಹೇಳಿಕೆಗೆ
ಬೆಂಬಲ
ನೀಡಿರುವುದು
ದುರಾದೃಷ್ಟಕರ.
ಹಿರಿಯ
ರಾಜಕಾರಣಿಯಾಗಿರುವ
ದೇವೇಗೌಡರು
ತಮ್ಮ
ಹೇಳಿಕೆಯನ್ನು
ವಾಪಸ್
ಪಡೆಯಬೇಕು
ಎಂದು
ರೇಣುಕಾಚಾರ್ಯ
ಒತ್ತಾಯಿಸಿದರು.['ರಮ್ಯಾ
ಹೇಳಿಕೆಯಲ್ಲಿ
ಯಾವುದೇ
ತಪ್ಪು
ಕಾಣುತ್ತಿಲ್ಲ']
ಪಾಕಿಸ್ತಾನ ಪರವಾಗಿ ಹಾಗೂ ದೇಶದ ವಿರುದ್ಧವಾಗಿ ಹೇಳಿಕೆ ನೀಡಿರುವ ರಮ್ಯಾ ದೇಶದ ಜನರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಜನರೇ ಅವರಿಗೆ ಸರಿಯಾದ ಪಾಠ ಕಲಿಸುತ್ತಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.[ಪಾಕಿಸ್ತಾನ ನರಕವಲ್ಲ, ನನ್ನ ಹೇಳಿಕೆ ಬದ್ಧಳಾಗಿದ್ದೇನೆ: ರಮ್ಯಾ ಲೇಖನ]
ಗೊಂದಲ ನಿವಾರಣೆ: ಪಿಯುಸಿ ಪ್ರಶ್ನೆ ಪತ್ರಿಕೆ ಪ್ರಕರಣದಲ್ಲಿ ತಮ್ಮ ಹೆಸರನ್ನು ವಿನಾಕಾರಣ ತರಲಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದು, ಈ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲವೆಂದು ಸ್ಪಷ್ಟಪಡಿಸಿದ್ದರೂ, ನಗರದಲ್ಲಿ ನನ್ನ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯನ್ನು ಪ್ರಚಾರಕ್ಕಾಗಿ ನಡೆಸಿದ್ದಾರೆಂದು ಆರೋಪಿಸಿದರು.
ರಾಜ್ಯದಲ್ಲಿ
ಕಾಂಗ್ರೆಸ್
ಸರ್ಕಾರವೇ
ಆಡಳಿತವಾಗಿದ್ದು,
ನಾನು
ತಪ್ಪು
ಮಾಡಿದ್ದರೆ,
ನನ್ನನ್ನು
24
ಗಂಟೆಯೊಳಗಾಗಿ
ಪೊಲೀಸರು
ಬಂಧಿಸಬಹುದು
ಎಂದು
ಹೇಳಿದರು.