ನ್ಯಾಮತಿಯಲ್ಲಿ ಸಿಎಂ ಕಾರ್ಯಕ್ರಮದ ಸಮೀಪ ಬೆಂಕಿ ಅವಘಡ
ದಾವಣಗೆರೆ, ಫೆಬ್ರವರಿ 14: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾಗವಹಿಸಿದ್ದ ಸೇವಾಲಾಲ್ ಜಯಂತಿ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಪಕ್ಕದಲ್ಲಿಯೇ ಬೆಂಕಿ ಅವಘಡ ಸಂಭವಿಸಿದೆ. ತಕ್ಷಣವೇ ಎಚ್ಚೆತ್ತಗೊಂಡ ಅಗ್ನಿಶಾಮಕ, ಪೋಲಿಸ್ ಹಾಗೂ ಸ್ಥಳೀಯರಿಂದ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದೆ.
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಸುರಗೊಂಡನಕೊಪ್ಪದಲ್ಲಿ ಸೇವಾಲಾಲ್ ಜಯಂತಿ ನಡೆಯಿತು. ಸೇವಾಲಾಲ್ ಜಯಂತಿಗೆ ಆಗಮಿಸಿದ್ದ ಭಕ್ತಾಧಿಗಳಿಂದ ಕಿಡಿಗೇಡಿಗಳು ಬೀಡಿ ಸಿಗರೇಟ್ ಸೇದಿ ಬೆಂಕಿ ನಂದಿಸದೆ ಎಸೆದಿದ್ದರಿಂದ ಅಗ್ನಿ ಅವಘಡ ಸಂಭವಿಸಿದೆ.
ಕತ್ತಿಗೆ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕೆಂದ ರೇಣುಕಾಚಾರ್ಯ
ಮೆಕ್ಕೆಜೋಳ ಕಟಾವು ಮಾಡಿ ಉಳಿದ ಒಣ ದಂಟುಗಳಿಗೆ ಬೆಂಕಿ ಆವರಿಸಿದೆ. ಗಾಳಿಯಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಬೆಂಕಿ ವ್ಯಾಪಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ದನಕರುಗಳ ಮೇವಿಗೆ ಮೀಸಲಿಡಲಾಗಿದ್ದ ಅಲ್ಪ ಸ್ವಲ್ಪ ಮೇವು ಬೆಂಕಿಗೆ ಆಹುತಿಯಾಗಿದ್ದು, ಜಮೀನಿನ ಮಾಲೀಕರು ಭಕ್ತಾಧಿಗಳಿಗೆ ಇಡಿಶಾಪ ಹಾಕಿದ್ದಾರೆ.