ಕಾಂಗ್ರೆಸ್ಸಿನಿಂದ ಇತಿಹಾಸ ನಿರ್ಮಾಣ, ಜಗಳೂರಿನಲ್ಲಿ ಮಹಿಳಾ ಅಭ್ಯರ್ಥಿ
ಜಗಳೂರು, ಏಪ್ರಿಲ್ 17: ದಾವಣಗೆರೆ ಜಿಲ್ಲೆಯ ಜಗಳೂರು ಕ್ಷೇತ್ರದ 70 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಟಿಕೆಟ್ ನೀಡಲಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ತನ್ನ 218 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಕಾಂಗ್ರೆಸ್ಸಿನ ಮೊದಲ ಪಟ್ಟಿಯಲ್ಲಿ 15 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.
'ಪಕ್ಷವು ನನ್ನ ಮನವಿಯನ್ನು ಗುರುತಿಸಿ, ನನಗೆ ಟಿಕೆಟ್ ನೀಡಿದೆ. ಅಲ್ಲದೇ ಈ ಬಾರಿ ರಾಜ್ಯದಲ್ಲಿ 15 ಮಂದಿ ಮಹಿಳೆಯರಿಗೆ ಟಿಕೆಟ್ ನೀಡಿದೆ' ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಪಕ್ಷದ ಅಭ್ಯರ್ಥಿ ಪುಷ್ಪ ಲಕ್ಷ್ಮಣಸ್ವಾಮಿ ತಿಳಿಸಿದರು.
ಪತ್ರಿಕಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಗೆ ಟಿಕೆಟ್ ನೀಡುವುದರ ಮೂಲಕ ಮಹಿಳೆಯರಿಗೆ ಪಕ್ಷವು ಗೌರವ ನೀಡಿದೆ ಎಂದರು.
ಜಗಳೂರು
ವಿಧಾನಸಭಾ
ಕ್ಷೇತ್ರದ
ಕಾಂಗ್ರೆಸ್
ಪಕ್ಷದ
ಆಭ್ಯರ್ಥಿಯಾಗಿ
ನನಗೆ
ಟಿಕೆಟ್
ನೀಡಿದ
ಪಕ್ಷದ
ರಾಷ್ಟ್ರೀಯ
ಅಧ್ಯಕ್ಷ
ರಾಹುಲ್
ಗಾಂಧಿಯವರಿಗೂ,
ಮಾಜಿ
ಅಧ್ಯಕ್ಷೆ
ಸೋನಿಯ
ಗಾಂಧಿಯವರಿಗೂ,
ಮುಖ್ಯಮಂತ್ರಿ
ಸಿದ್ದರಾಮಯ್ಯನವರಿಗೂ,
ಸತೀಶ್
ಜಾರಕಿಹೊಳಿ,
ರಾಜ್ಯ
ಮುಖಂಡರೂ
ಸೇರಿದಂತೆ
ಜಿಲ್ಲಾ,
ತಾಲ್ಲೂಕು
ನಾಯಕರು
ಹಾಗೂ
ಪ್ರತ್ಯಕ್ಷ-ಪರೋಕ್ಷವಾಗಿ
ಸಹಕಾರ
ನೀಡಿದ
ಎಲ್ಲರಿಗೂ
ಧನ್ಯವಾದಗಳನ್ನು
ತಿಳಿಸಿದರು.
ಕ್ಷೇತ್ರದಲ್ಲಿ
ನೀರಾವರಿ,
ಕೈಗಾರಿಕೆ,
ಗುಡಿ
ಕೈಗಾರಿಕೆಗಳನ್ನು
ಸ್ಥಾಪಿಸಿ,
ಉದ್ಯೋಗ
ಒದಗಿಸಲು
ಆದ್ಯತೆ
ನೀಡಲಾಗುವುದು
ಎಂದರು.
ನನಗೆ
ಟಿಕೆಟ್
ನೀಡಿರುವುದು
ಕಾರ್ಯಕರ್ತರಲ್ಲಿ
ಯಾವುದೇ
ಅಸಮಾದಾನವಿಲ್ಲ.
ಎಲ್ಲರೂ
ಪಕ್ಷದ
ಸಿದ್ದಾಂತಕ್ಕೆ
ಬದ್ಧರಾಗಿರುತ್ತಾರೆ.
ಅಧ್ಯಕ್ಷರೂ
ಸೇರಿದಂತೆ
ಪಕ್ಷದ
ಎಲ್ಲಾ
ಕಾರ್ಯಕರ್ತರ
ಸಹಕಾರವಿದೆ
ಎಂದರು.
ಶಾಸಕರಿಗೆ
ಟಿಕೆಟ್
ಕೈ
ತಪ್ಪಿರುವುದರಿಂದ
ನಿಮ್ಮ
ಪರ
ಪ್ರಚಾರ
ಮಾಡಲು
ಬರುತ್ತಾರೆಯೇ?
ಎಂಬ
ಪ್ರಶ್ನೆಗ
ಉತ್ತರಿಸಿದ
ಅವರು,
ಈ
ಹಿಂದೆ
ಪಕ್ಷ
ಯಾರಿಗೆ
ಟಿಕೆಟ್
ನೀಡಿದರೂ
ಅವರ
ಪರವಾಗಿ
ಕೆಲಸ
ಮಾಡುತ್ತೇವೆ
ಎಂದು
ಹೇಳಿದ್ದರು.
ಕೊಟ್ಟಮಾತಿನಂತೆ
ಅವರು
ನಡೆದು
ಕೊಳ್ಳಬೇಕು
ಎಂದು
ಪುಷ್ಪ
ಹೇಳಿದರು.
ಈಗ
ಟಿಕೆಟ್
ಪಡೆಯುವ
ಪರ್ವ
ಮುಗಿದಿದ್ದು,
ಮತ್ತೊಂದು
ಪರ್ವ
ಮುಂದಿನ
ದಿನಗಳಲ್ಲಿ
ತಿಳಿಯಲಿದೆ.
ಇತಿಹಾಸದಲ್ಲೇ ಪ್ರಥಮ ಬಾರಿಗೆ ಕ್ಷೇತ್ರದಲ್ಲಿ ಮಹಿಳೆಗೆ ಅವಕಾಶ ಸಿಕ್ಕಿದೆ. ಮತದಾರರು ನನಗೆ ಬೆಂಬಲ ನೀಡಲಿದ್ದಾರೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.