ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ಊಟವಿಲ್ಲದೇ ಪರದಾಡುತ್ತಿದ್ದ ವೃದ್ಧೆ ಸಹಾಯಕ್ಕೆ ಬಂದ ಡಿಸಿ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಏಪ್ರಿಲ್ 11: ದಾವಣಗೆರೆಯ ಯಲ್ಲಮ್ಮ ನಗರದಲ್ಲಿ ಹದಿನೈದು ದಿನಗಳಿಂದ ಊಟ ಸಿಗದೇ ಪರದಾಡುತ್ತಿದ್ದ ವೃದ್ಧೆ ಪಕೀರಮ್ಮ ಹಾಗೂ ಮಗ ಇದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಎಸ್ ಪಿ ಹನುಮಂತರಾಯ ಭೇಟಿ ನೀಡಿ ಆಹಾರ ಕಿಟ್ ವಿತರಿಸಿದರು.

ಲಾಕ್ ಡೌನ್ ನಿಂದಾಗಿ ಹದಿನೈದು ದಿನಗಳಿಂದ ಸರಿಯಾಗಿ ಆಹಾರವಿಲ್ಲದೇ ಇಬ್ಬರೂ ಪರಿತಪಿಸುತ್ತಿದ್ದರು. ಮಗ ಪಾರ್ಶ್ವವಾಯು ಪೀಡಿತನಾಗಿದ್ದು, ಪಕೀರಮ್ಮ ಮನೆಗೆಲಸ ಮಾಡಿಕೊಂಡು ಮಗನನ್ನು ಸಾಕುತ್ತಿದ್ದರು. ಆದರೆ ಲಾಕ್ ಡೌನ್ ಆದಾಗಿನಿಂದ ಕೆಲಸಕ್ಕೆ ಹೋಗಲು ಆಗದೇ, ಆಹಾರವೂ ಸಿಗದೇ ಒದ್ದಾಡುತ್ತಿದ್ದರು.

Davangere Came To Help Old Mother And Son

ಮನೆಗೆಲಸ ಮಾಡಿ ಮಗನ ಸಾಕುತ್ತಿದ್ದ ದಾವಣಗೆರೆಯ ಈಕೆ ಪಾಡು ಯಾರಿಗೂ ಬೇಡಮನೆಗೆಲಸ ಮಾಡಿ ಮಗನ ಸಾಕುತ್ತಿದ್ದ ದಾವಣಗೆರೆಯ ಈಕೆ ಪಾಡು ಯಾರಿಗೂ ಬೇಡ

ಈ ವಿಷಯ ಗಮನಕ್ಕೆ ಬಂದ ನಂತರ ಜಿಲ್ಲಾಧಿಕಾರಿ ಹಾಗೂ ಎಸ್ ಪಿ ಸ್ಥಳಕ್ಕೆ ಬಂದು ಆಹಾರ ನೀಡಿದ್ದಾರೆ. ಅಲ್ಲದೇ, ವೃದ್ಧೆ ಹಾಗೂ ಆಕೆಯ ಮಗನಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಸರೆ ಕಲ್ಪಿಸಿದ್ದಾರೆ. ಸ್ಥಳದಿಂದಲೇ ಅಧಿಕಾರಿಗಳಿಗೆ ಕರೆ ಮಾಡಿ ಜಿಲ್ಲಾಧಿಕಾರಿಗಳು ತರಾಟೆಗೆ ತೆಗೆದುಕೊಂಡರು.

ಕೂಡಲೇ ತಾಯಿ ಮತ್ತು ಮಗನನ್ನು ನಿರಾಶ್ರಿತರ ಕೇಂದ್ರಕ್ಕೆ ಕರೆದೊಯ್ಯುವಂತೆ ಆದೇಶಿಸಿದರು.

English summary
avanagere dc helped old mother and son who were not getting food since 15 days in davanagere
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X