ದಾವಣಗೆರೆ: ಐತಿಹಾಸಿಕ ಪುಷ್ಕರಣಿ ಸ್ವಚ್ಛಗೊಳಿಸಿದ ಜಿಪಂ ಸಿಇಒ ಅಶ್ವತಿ
ದಾವಣಗೆರೆ, ಸೆಪ್ಟೆಂಬರ್ 19: ಶೌಚಾಲಯದ ಗುಂಡಿ ತೋಡಲು ಸ್ವತಃ ಗುದ್ದಲಿ ಹಿಡಿದಿದ್ದ ದಾವಣಗೆರೆ ಜಿಲ್ಲಾ ಪಂಚಾಯಿತಿ ಸಿಇಒ ಈಗ ಪೊರಕೆ ಹಿಡಿದಿದ್ದಾರೆ. ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಸಿಇಒ ಅಶ್ವತಿ ಗ್ರಾಮಸ್ಥರೊಂದಿಗೆ ಜಗಳೂರಿನ ಕೊಣಿಚಕಲ್ ರಂಗನಾಥ ದೇವಸ್ಥಾನದ ಐತಿಹಾಸಿಕ ಪುಷ್ಕರಣಿ ಸ್ವಚ್ಚಗೊಳಿಸಿದರು.
ಕ್ರಾಂತಿ ಮಾಡಿದ ಸಿಇಒ, ದಾವಣಗೆರೆ ಬಯಲು ಶೌಚ ಮುಕ್ತ ಜಿಲ್ಲೆ
ಹಲವು ವರ್ಷಗಳಿಂದ ಈ ಪುಷ್ಕರಣಿ ಪಾಳು ಬಿದ್ದಿತ್ತು. ಇದೀಗ ಸ್ವಚ್ಛಗೊಂಡ ನಂತರ ಪುಷ್ಕರಣಿ ಸುಂದರವಾಗಿ ಕಾಣುತ್ತಿದೆ. ಪುಷ್ಕರಣಿ ಸ್ವಚ್ಛಗೊಳಿಸಿದ ನಂತರ ದೇವಸ್ಥಾನದ ಆವರಣದಲ್ಲೇ ಅಶ್ವತಿಯವರು ಸಸಿ ನೆಟ್ಟರು.
ಸ್ವಚ್ಛತಾ ಕಾರ್ಯದಲ್ಲಿ ಸ್ಥಳೀಯ ಗ್ರಾಮಸ್ಥರು, ತಾಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ತಂಡವೂ ಕೈ ಜೋಡಿಸಿತ್ತು.
English summary
Davanagere ZP CEO Ashwati cleaned Konichakal Ranganatha Temple purgatory along with local villagers under the Swachh Bharat Mission campaign.