ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ನ್ಯಾಯಬೆಲೆ ಅಂಗಡಿಗೂ ಕೊರೊನಾ ಎಫೆಕ್ಟ್

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮಾರ್ಚ್ 15: ಕೊರೊನಾ ವೈರೆಸ್ ನ ಎಫೆಕ್ಟ್ ಈಗ ನ್ಯಾಯಬೆಲೆ ಅಂಗಡಿಗಳಿಗೂ ತಟ್ಟಿದೆ. ದಾವಣಗೆರೆ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳಚ್ಚು ನೀಡುವಾಗ ವೈರಸ್ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಬಯೋಮೆಟ್ರಿಕ್ ಸಾಧನವನ್ನು ಸ್ವಚ್ಛಗೊಳಿಸುವಂತೆ ಆಹಾರ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

ಬೆರಳಚ್ಚು ಪಡೆದ ನಂತರ ಸ್ಯಾನಿಟೈಸರ್ ಮೂಲಕ ಪ್ರತಿ ಬಾರಿಯೂ ಸ್ವಚ್ಛಗೊಳಿಸಲು ಆಹಾರ ಇಲಾಖೆ ಆಯುಕ್ತರು ಸೂಚನೆ ನೀಡಿದ್ದು, ಇದರಿಂದ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಸೊಸೈಟಿಯ ಕಾರ್ಯದರ್ಶಿಗಳಿಗೆ ಆಹಾರ ಇಲಾಖೆಯಿಂದ ಸೂಚನೆ ಬಂದಿದೆ.

Corona Effect To The Ration Shop At Davanagere

ಪಡಿತರ ವಿತರಣೆ ಹಾಗೂ ಇ-ಕೆವೈಸಿ ಸಂದರ್ಭದಲ್ಲಿ ಪ್ರತಿ ಬಾರಿಯೂ ಸ್ವಚ್ಚಗೊಳಿಸಬೇಕು ಎಂಬ ಆದೇಶ ನೀಡಲಾಗಿದ್ದು, ಪ್ರತಿಯೊಬ್ಬರ ಬಯೋ ಪಡೆದ ತಕ್ಷಣ ಬಯೋಮೆಟ್ರಿಕ್ ಸಾಧನವನ್ನು ಸ್ಯಾನಿಟೈಸರ್ ಮೂಲಕ ಪ್ರತಿ ಬಾರಿಯೂ ಸ್ವಚ್ಛಗೊಳಿಸಬೇಕು. ಸದ್ಯಕ್ಕೆ ಬಟ್ಟೆಯಿಂದ ಕೈ ಶುಚಿಗೊಳಿಸಿಸುತ್ತಿದ್ದು, ಸರ್ಕಾರದ ಆದೇಶ ಬಂದ ಬಳಿಕ ಸ್ಯಾನಿಟೈಸರ್ ಬಳಸಲು ಮುಂದಾಗುವುದಾಗಿ ಆಹಾರ ಇಲಾಖೆ ತಿಳಿಸಿದೆ.

English summary
Food department officials have suggested cleaning up the biometric device in the wake of the virus spreading at Ration shops in Davanagere district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X