ದಾವಣಗೆರೆಯಲ್ಲಿ ಇಂದಿರಾಗಾಂಧಿ ಭಾವಚಿತ್ರಕ್ಕೆ ಮಸಿ; ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ
ದಾವಣಗೆರೆ, ಮೇ 31: ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಆವರಣದ ಇಂದಿರಾ ಕ್ಯಾಂಟೀನ್ ಹೊರಭಾಗದಲ್ಲಿರುವ ಇಂದಿರಾಗಾಂಧಿ ಭಾವಚಿತ್ರಕ್ಕೆ ಕಪ್ಪುಮಸಿ ಬಳಿದಿರುವುದನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು.
Recommended Video
ಕಲಬುರಗಿಯಲ್ಲೊಂದು
ಕರುಳು
ಕಿವಿಚುವ
ದೃಶ್ಯ
|
Oneindia
Kannada
ಈ ಕುರಿತು ಮಾತನಾಡಿದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್, "ಕೋಮುವಾದಿಗಳ, ಮತೀಯವಾದಿಗಳ ಅಟ್ಟಹಾಸ ನಡೆದಿದೆ. ಇದಕ್ಕೆ ಸಾಕ್ಷಿಯಂತೆ ದಾವಣಗೆರೆ ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ತಡರಾತ್ರಿ ಕೆಲ ಕಿಡಿಗೇಡಿಗಳು ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ಮಸಿ ಬಳಿದಿದ್ದಾರೆ. ಇಂತಹ ಕೃತ್ಯವನ್ನು ಎಸಗಿರುವುದು ದೇಶದ ಜನತೆಗೆ ಮಾಡಿದ ಅಪಮಾನ" ಎಂದಿದ್ದಾರೆ.
'ಇಂದಿರಾ ಗಾಂಧಿಗೆ ಅಂಡರ್ವರ್ಲ್ಡ್ ನಂಟು': ಕಿಡಿಯೆಬ್ಬಿಸಿದ ಶಿವಸೇನಾ ಮುಖಂಡ ಸಂಜಯ್ ರಾವತ್
ಈ ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಸರ್ಕಾರ ಈ ಕೂಡಲೇ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
Comments
English summary
Congress leaders staged protests against incident of black ink smeared on Indira Gandhi's photo outside the district's Chigateri hospital premises
Story first published: Sunday, May 31, 2020, 18:04 [IST]