ರಾಮುಲು ಪಿಎಯದ್ದು ಎನ್ನಲಾದ ಆಡಿಯೋ ಟೇಪ್ ವಿರುದ್ಧ ಕಾಂಗ್ರೆಸ್ ದೂರು
ದಾವಣಗೆರೆ, ಡಿಸೆಂಬರ್ 04: ರಾಮುಲು ಅವರ ಪಿಎ ಮಾತನಾಡಿದ್ದ ಎನ್ನಲಾಗುತ್ತಿರುವ ಶಾಸಕರ ಖರೀದಿಗೆ ಯತ್ನಿಸುತ್ತಿರುವ ಸಂಭಾಷಣೆ ಉಳ್ಳ ಆಡಿಯೋ ಕ್ಲಿಪ್ ಒಂದು ವೈರಲ್ ಆಗಿದ್ದ ಆ ಬಗ್ಗೆ ರಾಜ್ಯ ಕಾಂಗ್ರೆಸ್ ದೂರು ನೀಡುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬಿಜೆಪಿ ಎಷ್ಟು ಶಾಸಕರನ್ನಾದರೂ ಭೇಟಿ ಆಗಲಿ ಡೋಂಟ್ ಕೇರ್: ಡಿ.ಕೆ.ಶಿವಕುಮಾರ್
ದಾವಣೆಗೆರೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈರಲ್ ಆಗಿರುವ ಆಡಿಯೋ ಕ್ಲಿಪ್ ಬಗ್ಗೆ ಇಂದು ಸಂಜೆ ಬೆಂಗಳೂರಿನಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.
ಯಾವ ಶಾಸಕರೂ ಪಕ್ಷ ಬಿಟ್ಟುಹೋಗಲ್ಲ: ಸಿದ್ದರಾಮಯ್ಯ
ಆಡಿಯೋ ಕ್ಲಿಪ್ನಲ್ಲಿ ಶಾಸಕರಿಗೆ ಆಮೀಷ ಒಡ್ಡುತ್ತಿರುವ ಧ್ವನಿ ರಾಮುಲು ಪರಮಾಪ್ತ ಸುರ್ಜಿತ್ ಎಂಬುವರದ್ದು ಎನ್ನಲಾಗುತ್ತಿದೆ. ಆದರೆ ಕೆಲವು ಬಿಜೆಪಿ ಶಾಸಕರು ಅದು ಡಿ.ಕೆ.ಶಿವಕುಮಾರ್ ಆಪ್ತನ ಧ್ವನಿ ಎಂದಿದ್ದಾರೆ.
ಈ ಬಗ್ಗೆ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದು, ಸುರ್ಜಿತ್ ನನ್ನ ಪಿಎ ಅಲ್ಲ ಅವರು ರಾಮುಲು ಅವರ ಪಿಎ. ಹಗಲು ರಾತ್ರಿ ಅವರ ಬೆನ್ನಹಿಂದೆಯೇ ಅವರು ಓಡಾಡುತ್ತಿರುತ್ತಾರೆ ಎಂದು ಹೇಳಿದ್ದಾರೆ.
ಸಂಪುಟ ವಿಸ್ತರಣೆ ಸನಿಹ: ಕಾಂಗ್ರೆಸ್ಗೆ ಬಂಡಾಯದ ಭೀತಿ
ಆಡಿಯೋ ಕ್ಲಿಪ್ನಲ್ಲಿ ವ್ಯಕ್ತಿಯೊಬ್ಬರು ಶಾಸಕರೊಬ್ಬರಿಗೆ ಪಕ್ಷ ತ್ಯಜಿಸಲು ಭಾರಿ ಮೊತ್ತದ ಹಣದ ಆಫರ್ ನೀಡಿದ್ದಾರೆ, ಮುಂದಿನ ಚುನಾವಣೆಯ ಖರ್ಚು ನಾವೇ ಭರಿಸುತ್ತೇವೆ ಎಂದು ಸಹ ಆಡಿಯೋ ಕ್ಲಿಪ್ನಲ್ಲಿ ಇದೆ.