ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಸ್ವಾಗತಿಸಿ ಸಂಭ್ರಮಾಚರಣೆ
ದಾವಣಗೆರೆ, ನವೆಂಬರ್ 18: ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ರಚಿಸಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಿಸಿ ಅಖಿಲ ಭಾರತ ವೀರಶೈವ ಮಹಾಸಭಾದ ದಾವಣಗೆರೆ ಜಿಲ್ಲಾ ಮಹಿಳಾ ಘಟಕದ ಕಾರ್ಯಕರ್ತೆಯರು ನಗರದಲ್ಲಿ ಬುಧವಾರ ಸಂಭ್ರಮಾಚರಣೆ ನಡೆಸಿದರು.
ನಗರದ ರಾಮ್ ಅಂಡ್ ಕೋ ವೃತ್ತದಲ್ಲಿ ಜಮಾಯಿಸಿದ ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ಕಾರ್ಯಕರ್ತೆಯರು ಮುಖ್ಯಮಂತ್ರಿ ಯಡಿಯೂರಪ್ಪ, ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಅವರ ಪರವಾಗಿ ಘೋಷಣೆ ಕೂಗಿ, ಸಿಹಿ ವಿತರಿಸಿ ಸಂಭ್ರಮಿಸಿದರು.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ; ಸಿಎಂಗೆ ಸಾಣೇಹಳ್ಳಿ ಶ್ರೀಗಳ ಸಲಹೆ
ಈ ಸಂದರ್ಭದಲ್ಲಿ ಮಾತನಾಡಿದ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ, ಪಾಲಿಕೆ ಸದಸ್ಯ ದೇವರಮನಿ ಶಿವಕುಮಾರ್, ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮತ್ತು ನಾಡಿನ ವಿವಿಧ ಮಠಾಧೀಶರು ಮನವಿ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಇದು ಸ್ವಾಗತಾರ್ಹ ಬೆಳವಣಿಗೆ ಎಂದರು.
Recommended Video
ಈ
ನಿಗಮಕ್ಕೆ
ಬೇರೆ
ಅಭಿವೃದ್ಧಿ
ನಿಗಮಗಳಂತೆ
50,
100
ಕೋಟಿ
ರೂ.
ಅನುದಾನ
ನೀಡಿದರೆ
ಸಾಲುವುದಿಲ್ಲ.
ನಮ್ಮದು
ರಾಜ್ಯದಲ್ಲಿಯೇ
ಅತೀ
ದೊಡ್ಡ
ಸಮಾಜವಾಗಿದ್ದು,
ಕನಿಷ್ಠ
ಸಾವಿರ
ಕೋಟಿ
ಅನುದಾನ
ಮೀಸಲು
ಇಡಬೇಕು
ಎಂದು
ಆಗ್ರಹಿಸಿದರು.
ಈ
ಸಂದರ್ಭದಲ್ಲಿ
ಪಾಲಿಕೆ
ಸದಸ್ಯರಾದ
ಸೋಗಿ
ಶಾಂತಕುಮಾರ್,
ಶಿವನಗೌಡ
ಪಾಟೀಲ್,
ಜಿಲ್ಲಾ
ಪಂಚಾಯತ್
ಸದಸ್ಯೆ,
ಮಹಿಳಾ
ಘಟಕದ
ಜಿಲ್ಲಾಧ್ಯಕ್ಷೆ
ಉಮಾ
ರಮೇಶ್
ಸೇರಿದಂತೆ
ಹಲವರು
ಇದ್ದರು.