ದಾವಣಗೆರೆಯಲ್ಲಿ ಕಾಲುವೆಗೆ ಬಿದ್ದು ನರಳಾಡಿದ ಕಾಡೆಮ್ಮೆ
ದಾವಣಗೆರೆ, ಜುಲೈ 20: ಕಾಡಿನಿಂದ ಆಹಾರ ಅರಸಿಕೊಂಡು ನಾಡಿಗೆ ಬಂದಿದ್ದ ಕಾಡೆಮ್ಮೆಯೊಂದು ಕಾಲುವೆಗೆ ಬಿದ್ದು ನರಳಾಡಿದ ಘಟನೆ ಇಂದು ದಾವಣಗೆರೆಯಲ್ಲಿ ನಡೆದಿದೆ.
ಜಿಲ್ಲೆಯ ನ್ಯಾಮತಿ ತಾಲೂಕಿನ ಕಂಕನಹಳ್ಳಿ ಹಾಗೂ ಬಸವನಹಳ್ಳಿ ಗ್ರಾಮಗಳ ಮಧ್ಯದಲ್ಲಿರುವ ತುಂಗಭದ್ರಾ ಕಾಲುವೆಯಲ್ಲಿ ಕಾಡೆಮ್ಮೆ ಬಿದ್ದಿದ್ದು, ಗಾಯಗೊಂಡಿದೆ. ಕಾಲುವೆಯಿಂದ ಮೇಲೆ ಬರಲಾರದೇ ಬಹು ಸಮಯದವರೆಗೆ ನರಳಾಡಿದೆ.
ಇಟ್ಟಿಗೆ ಗ್ರಾಮದಲ್ಲಿ ರಸ್ತೆ ಮಧ್ಯ ನಿಂತ ಕಾಡೆಮ್ಮೆ; ಬೆದರಿದ ಕಾರು ಚಾಲಕ
ಕಾಡೆಮ್ಮೆ ಹೀಗೆ ಕಾಲುವೆಗೆ ಬಿದ್ದಿರುವುದನ್ನು ಕಂಡು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳು ಕಾಡೆಮ್ಮೆ ಸೆರೆ ಹಿಡಿಯಲು ಹರಸಾಹಸ ಪಟ್ಟರು. ಬಹು ಸಮಯದ ನಂತರ ಸೆರೆ ಹಿಡಿದ ಕಾಡೆಮ್ಮೆಗೆ ಪಶುವೈದ್ಯರು ಚಿಕಿತ್ಸೆಯನ್ನು ನೀಡಿದರು.
Comments
English summary
Bison which came to village searching food fell into canal in nyamati of davanagere district,
Story first published: Monday, July 20, 2020, 20:28 [IST]