ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊಳಕಾಲ್ಮೂರಿನಲ್ಲಿ ನಕಲಿ ವೈದ್ಯನ ಮನೆ ಮೇಲೆ ತಹಶೀಲ್ದಾರ್ ದಾಳಿ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಅಕ್ಟೋಬರ್ 15: ವೈದ್ಯ ಎಂದು ಸುಳ್ಳು ಹೇಳಿಕೊಂಡು ಜನರಿಗೆ ಚಿಕಿತ್ಸೆ ನೀಡುತ್ತಿದ್ದ ವ್ಯಕ್ತಿಯ ಮನೆಯ ಮೇಲೆ ತಹಶೀಲ್ದಾರ್ ದಾಳಿ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು ನಡೆದಿದೆ.

ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೊನಸಾಗರ ಗ್ರಾಮದಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ್ ನಕಲಿ ವೈದ್ಯನ ಮನೆಯ ಮೇಲೆ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ.

ಬಳ್ಳಾರಿಯಲ್ಲಿ ಕ್ಲಿನಿಕ್‌ಗೆ ಬೀಗ; ನಕಲಿ ವೈದ್ಯ ಪೊಲೀಸರ ವಶಕ್ಕೆಬಳ್ಳಾರಿಯಲ್ಲಿ ಕ್ಲಿನಿಕ್‌ಗೆ ಬೀಗ; ನಕಲಿ ವೈದ್ಯ ಪೊಲೀಸರ ವಶಕ್ಕೆ

ಆಂಧ್ರ ಮೂಲದ ಸುರೇಶ್ ಎಂಬಾತ ಹಲವು ದಿನಗಳಿಂದ ಗ್ರಾಮದಲ್ಲಿ ತಾನು ಡಾಕ್ಟರ್ ಎಂದು ಜನರಿಗೆ ಸುಳ್ಳು ಹೇಳಿಕೊಂಡು ಚಿಕಿತ್ಸೆ ನೀಡುತ್ತಿದ್ದನು. ಇದಲ್ಲದೆ ಆಂಧ್ರ ಪ್ರದೇಶಕ್ಕೂ ಆಗಾಗ್ಗೆ ಹೋಗಿ ಬರುತ್ತಿದ್ದನು ಎಂದು ತಿಳಿದುಬಂದಿದೆ. ಈ ವೈದ್ಯನ ಕೆಲವರಲ್ಲಿ ಅನುಮಾನವೂ ಮೂಡಿತ್ತು. ಖಚಿತ ಮಾಹಿತಿ ಪಡೆದುಕೊಂಡ ತಹಶೀಲ್ದಾರ್ ನಕಲಿ ವೈದ್ಯನ ಮೇಲೆ ದಾಳಿ ನಡೆಸಿ ಆತನಿಂದ ವಿವಿಧ ಮಾತ್ರೆಗಳು, ಇಂಜೆಕ್ಷನ್, ಸಿರೆಂಜ್ ಔಷಧಿಗಳನ್ನು ಜಪ್ತಿ ಮಾಡಿದ್ದಾರೆ.

Chitradurga: Tahsildar Raid On Fake Doctor Home At Molakalmuru

Recommended Video

BJP ಅವ್ರು ಕೈ ಗೆ ಬಳೆ ಹಾಕೊಬೇಕು | DK Shivkumar | RR Nagar By Election | Oneindia Kannada

ದಾಳಿ ವೇಳೆ ತಾಲೂಕು ವೈದ್ಯಾಧಿಕಾರಿ ಸುಧಾಮಣಿ ಮತ್ತು ಪೊಲೀಸರು ಇದ್ದರು. ನಕಲಿ ವೈದ್ಯ ಸುರೇಶ್ ವಿರುದ್ಧ ಮೊಳಕಾಲ್ಮೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Tahsildar raid on fake doctor home at konasagara at Molakalmuru and seized tablets, injections
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X