ಆರೋಗ್ಯ ಸಚಿವರಿಂದಲೇ ಸಾಮಾಜಿಕ ಅಂತರ ಉಲ್ಲಂಘನೆ
ಬೆಂಗಳೂರು, ಏಪ್ರಿಲ್ 29: ಆರೋಗ್ಯ ಸಚಿವ ಬಿ ಶ್ರೀರಾಮುಲು ಕೋವಿಡ್ 19 ತಡೆ ಹಿನ್ನೆಲೆಯಲ್ಲಿ ಸಾರ್ವಜನಿಕರನ್ನು ಭೇಟಿಯಾಗಿದ್ದ ವೇಳೆ ಸಾಮಾಜಿಕ ಅಂತರದ ಮಾನದಂಡಗಳನ್ನು ಮೀರಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಮಂಗಳವಾರ ಬಿ.ಶ್ರೀರಾಮುಲು ಚಿತ್ರದುರ್ಗದ ಮೊಳಕಾಲ್ಮುರಿನಲ್ಲಿ ಪಡಿತರ ಪೂರೈಕೆಗೆ ಚಾಲನೆ ನೀಡುವ ವೇಳೆ ಈ ಘಟನೆ ನಡೆದಿದೆ.
ಸಚಿವರು ಪಡಿತರ ಸರಬರಾಜು ಕಿಟ್ಗಳನ್ನು ವಿತರಿಸುತ್ತಿದ್ದಂತೆ, ಜನರು ಹತ್ತಿರದಲ್ಲಿ ಬಂದು ನಿಂತು ಸಚಿವರ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ. ಈ ವೇಳೆ ಅನೇಕರು ಮುಖವಾಡಗಳನ್ನು ಸಹ ಧರಿಸಲಿಲ್ಲದಿರುವುದು ಕಂಡು ಬಂದಿತು.
ವಿಪರ್ಯಾಸವೆಂದರೆ, ಅವರು ತಮ್ಮ ಈ ಭೇಟಿಯ ಸಮಯದಲ್ಲಿ ಮುಖವಾಡಗಳನ್ನು ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಅಭ್ಯಾಸ ಮಾಡುವುದು ಬಗ್ಗೆ ಹಾಗೂ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಬಗ್ಗೆ ಸಚಿವರು ಜನರಿಗೆ ತಿಳಿವಳಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ಬುಧವಾರ 73 ವರ್ಷದ ಕೋವಿಡ್ -19 ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ, ಸೋಂಕಿನಿಂದಾಗಿ ಕರ್ನಾಟಕದಲ್ಲಿ 21 ಮಂದಿ ಸಾವನ್ನಪ್ಪಿದ್ದಾರೆ ಮತ್ತು 12 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಒಟ್ಟು 535 ಕೋವಿಡ್ -19 ಧನಾತ್ಮಕ ಪ್ರಕರಣಗಳು ರಾಜ್ಯದಲ್ಲಿ ದೃಢಪಟ್ಟಿವೆ.