ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಅಂಥಹವರು ಈ ಭೂಮಿ ಮೇಲೆ ಇರಬಾರದು: ಶ್ರೀರಾಮುಲು

|
Google Oneindia Kannada News

Recommended Video

Siddaramaiah and CT Ravi tweets creating a controversy | Oneindia Kannada

ಚಿತ್ರದುರ್ಗ, ಅಕ್ಟೋಬರ್ 19: ಗಾಂಧಿಯನ್ನು ಕೊಂದ ಗೋಡ್ಸೆಗೆ ಭಾರತ ರತ್ನ ಕೊಡುವ ಮಾತನಾಡಿರುವ ಸಿದ್ದರಾಮಯ್ಯ ಅಂಥಹವರು ಈ ಭೂಮಿ ಮೇಲೆ ಇರಬಾರದು ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ಸಾವರ್ಕರ್‌ಗೆ ಭಾರತ ರತ್ನ ಕೊಡುವ ಬಗ್ಗೆ ಬಿಜೆಪಿ ಪ್ರಣಾಳಿಕೆ ಹೊರಡಿಸಿರುವ ಕುರಿತು ನಿನ್ನೆ ಮಾತನಾಡಿದ್ದ ಸಿದ್ದರಾಮಯ್ಯ, 'ಸಾವರ್ಕರ್ ಬದಲಿಗೆ ಗೋಡ್ಸೆಗೆ ಭಾರತ ರತ್ನ ಕೊಟ್ಟು ಬಿಡಿ' ಎಂದು ವ್ಯಂಗ್ಯ ಮಾಡಿದ್ದರು. ಆದರೆ ವ್ಯಂಗ್ಯವನ್ನು ಗಂಭೀರವಾಗಿ ಪರಿಗಣಿಸಿದಂತಿರುವ ರಾಮುಲು, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ಮೊದಲು ಸಿದ್ದರಾಮಯ್ಯ ರಾಜಕೀಯ ಮಾಡುವುದನ್ನು ನಿಲ್ಲಿಸಲಿ; ಶ್ರೀರಾಮುಲುಮೊದಲು ಸಿದ್ದರಾಮಯ್ಯ ರಾಜಕೀಯ ಮಾಡುವುದನ್ನು ನಿಲ್ಲಿಸಲಿ; ಶ್ರೀರಾಮುಲು

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, 'ಸಿದ್ದರಾಮಯ್ಯಗೆ ನಾಲಿಗೆ ಮೇಲೆ ಹಿಡಿತವಿಲ್ಲ, ಯಾರಿಗೆ ಪುರಸ್ಕಾರ ಕೊಡಬೇಕು, ಯಾರಿಗೆ ಸನ್ಮಾನ ಮಾಡಬೇಕು ಎಂದು ಗೊತ್ತಿಲ್ಲದ ಸಂಸ್ಕೃತಿಯಲ್ಲಿ ಅವರು ಬೆಳೆದಿದ್ದಾರೆ, ಸಾವರ್ಕರ್‌ ಅವರ ಬಗ್ಗೆ ಓದಿಕೊಂಡು ಅವರು ಮಾತನಾಡಲಿ' ಎಂದು ರಾಮುಲು ಹೇಳಿದರು.

Siddaramaiah Unfit To Live On The Earth: Sriramulu

'ಈ ರೀತಿಯ ಪ್ರಚೋದನಕಾರಿ, ದುರಹಂಕಾರದ ಹೇಳಿಕೆಗಳನ್ನು ಕೊಡುವ ಸಿದ್ದರಾಮಯ್ಯ ಅವರನ್ನು ಜನರು ಸಹಿಸಬಾರದು' ಎಂದು ರಾಮುಲು ಆಕ್ರೋಶ ವ್ಯಕ್ತಪಡಿಸಿದರು.

ಬಿ.ಎಲ್.ಸಂತೋಶ್ ಅವರು ಹೇಳಿದಂತೆ ನಳಿನ್ ಕಟೀಲ್ ಕುಣಿಯುತ್ತಾರೆ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಮುಲು, ದೆಹಲಿಯಲ್ಲಿರುವ ಸೋನಿಯಾ ಗಾಂಧಿ ರಿಮೋಟ್‌ನಲ್ಲಿ ಸಿದ್ದರಾಮಯ್ಯ ಇದ್ದಾರಲ್ಲ, ಸೋನಿಯಾ ರಿಮೋಟ್ ಒತ್ತಿದರೆ ಇವರು ಕುಣಿಯುತ್ತಾರಾ? ಎಂದು ಪ್ರಶ್ನೆ ಮಾಡಿದರು.

'ಮಾತನಾಡಲು ಬಾಯಿ ಇದೆ ಎಂದು ಏನೇನೋ ಮಾತನಾಡಬಾರದು, ರಾಜ್ಯಾಧ್ಯಕ್ಷರು ಎಂದ ಮೇಲೆ ಎಲ್ಲರ ಮಾತನ್ನೂ ಕೇಳಿಸಿಕೊಳ್ಳಬೇಕಾಗುತ್ತದೆ' ಎಂದು ಅವರು ಹೇಳಿದರು.

English summary
Minister Sriramulu said Siddaramaiah is unfit live on the earth. He said 'he should learn about Savarkar first then he should speak
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X