ಸಿಬಿಐಗೆ ಸಿಕ್ಕ ಚಳ್ಳಕೆರೆಯ ದೊಡ್ಡನೋಟಿನ ಧಣಿ ವೀರೇಂದ್ರ
ಚಳ್ಳಕೆರೆ, ಡಿಸೆಂಬರ್ 12: ಚಳ್ಳಕೆರೆಯ ಲೇವಾದೇವಿಗಾರ ಭಾರಿ ಅಕ್ರಮ ಹಣ ಮತ್ತು ಚಿನ್ನಾಭರಣಗಳಿಂದ ಇತ್ತೀಚೆಗೆ ಹೆಸರಾಗಿದ್ದ ಕೆಸಿ ವೀರೇಂದ್ರನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಲೇವಾದೇವಿಗಾರ ಕೆಸಿ ವೀರೇಂದ್ರ ಲೇವಾದೇವಿಗಾರ ಹವಾಲ ದಂಧೆಯಲ್ಲಿ ತೊಡಗಿ ಹಣ ಚಿನ್ನಾಭರಣ ಮತ್ತು ಬಂಗಾರದ ಗಟ್ಟಿಯನ್ನು ಬಚ್ಚಲು ಮನೆಯ ಗೊಡೆಯೊಳಗೆ ಬಚ್ಚಿಟ್ಟಿದ್ದ. ಇದರಲ್ಲಿ 5.7 ಕೋಟಿ ಹೊಸ ನಗದು, 28 ಕೆಜಿ ಚಿನ್ನದ ಗಟ್ಟಿ, ಮತ್ತು 4 ಕೆಜಿ ಬಂಗಾರದ ವಡವೆಗಳಿದ್ದದ್ದು, ಐಟಿ ದಾಳಿಯಿಂದ ಬಹಿರಂಗಗೊಂಡಿತ್ತು.[ಐಟಿ ಅಧಿಕಾರಿಗಳನ್ನೂ ಬೆಚ್ಚಿಬೀಳಿಸಿದ ಸೀಕ್ರೆಟ್ ಲಾಕರ್!]
ಬಚ್ಚಲು ಮನೆಯ ಗೋಡೆ ಮಾದರಿಯಲ್ಲಿ ಇರುವ ಸೀಕ್ರೆಟ್ ಲಾಕರ್ ನಲ್ಲಿ ಅಷ್ಟೋಂದು ಪ್ರಮಾಣದಲ್ಲಿ ಹಣ ಬಚ್ಚಿಟ್ಟದ್ದು ಯಾಕೆ? ಹಣ ಬಂದಿದ್ದು ಹವಾಲ ದಂಧೆಯಿಂದಲೇ? ವೀರೇಂದ್ರನಿಗೆ ಗೋವಾದಲ್ಲಿ ಅಕ್ರಮ ವ್ಯವಹಾರವಿದೇಯೇ? ಇತ್ಯಾದಿ ಪ್ರಶ್ನೆಗಳು ಜನಮಾನದಲ್ಲಿ ಕಾಡಲು ಪ್ರಾರಂಭವಾಗಿದ್ದವು.
ಕೆಸಿ ವೀರೇಂದ್ರ ಪ್ರಸ್ತುತ ಸ್ಥಳದಲ್ಲಿಲ್ಲದೇ ಇರುವ ಕಾರಣ ಆತನನ್ನು ಹುಡುಕಲು ಸಿಬಿಐ ಅಧಿಕಾರಿಗಲು ತೀವ್ರ ಶೋಧ ನಡೆಸುತ್ತಿದ್ದರು. ಆದರೆ ಸೋಮವಾರ ಕೆಸಿ ವೀರೇಂದ್ರನನ್ನು ಬಂಧಿಸಿದ್ದಾರೆ. ಅಲ್ಲದೆ ವಿಚಾರಣೆಗೊಳಪಡಿಸಿದ್ದಾರೆ.