ಹಿರಿಯೂರಿನಲ್ಲಿ ಆತಂಕ ತಂದ ಶಿರಾ ಮೃತ ವ್ಯಕ್ತಿ ಸಂಬಂಧಿಗಳ ವಾಸ್ತವ್ಯ
ಚಿತ್ರದುರ್ಗ, ಮಾರ್ಚ್ 28: ತುಮಕೂರು ಜಿಲ್ಲೆ ಶಿರಾ ಮೂಲದ ವ್ಯಕ್ತಿಯೊಬ್ಬರು ನಿನ್ನೆಯಷ್ಟೆ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಇದೀಗ ಆತನ ಸುಮಾರು 20 ರಿಂದ 25 ಜನ ಸಂಬಂಧಿಗಳು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹೂವಿನಹೊಳೆ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು ಎಂಬ ಮಾಹಿತಿ ಇದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಅವರು ಇಲ್ಲೇ ಬೆಳಿಗ್ಗೆ ನಮಾಜ್ ಮಾಡಿದ್ದು, ಗ್ರಾಮಸ್ಥರು ಅವರನ್ನು ಪ್ರಶ್ನಿಸಿದಾಗ, ವಿಷಯ ಬೆಳಕಿಗೆ ಬಂದಿದೆ. ನಂತರ ಅವರು ಪಲಾಯನ ಮಾಡಿದ್ದಾರೆಂದು ಗ್ರಾಮಸ್ಥರು ದೂರಿದ್ದಾರೆ. ಮೃತನ ಸಂಬಂಧಿಗಳನ್ನು ಹೋಂ ಕ್ವಾರಂಟೈನ್ ನಲ್ಲಿ ಇರಿಸಿ, ಗ್ರಾಮಸ್ಥರು ನೆಮ್ಮದಿಯಿಂದ ಬದುಕಲು ಬಿಡುವಂತೆ ಮನವಿ ಮಾಡಿದ್ದಾರೆ.
ಕೊರೊನಾದ 3ನೇ ಹಂತದಲ್ಲಿ ಭಾರತ: 5-10 ದಿನ ತುಂಬಾ ಎಚ್ಚರದಿಂದಿರಿ
ವಿಷಯ ತಿಳಿದ ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಮೃತನ ಐದು ಜನ ಸಂಬಂಧಿಗಳಿಗೆ ಸೀಲ್ ಹಾಕಿ ಯಾರು ಸಹ ಮನೆಯಿಂದ ಹೊರ ಬರದಂತೆ ಸೂಚಿಸಿದ್ದಾರೆ. ಮನೆಯ ಸುತ್ತ ಮುತ್ತ ರಾಸಾಯನಿಕ ಸಿಂಪಡಣೆ ಮಾಡಲು ಪಂಚಾಯಿತಿಯರಿಗೆ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಮೃತನ ಸಂಬಂಧಿಕರು ಹೂವಿನಹೊಳೆ ಗ್ರಾಮಕ್ಕೆ ಬಂದಿದ್ದರಿಂದ ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ.