ಪ್ರವೀಣ್ ಹತ್ಯೆ: ಚಿತ್ರದುರ್ಗದಲ್ಲೂ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕಿಡಿ
ಚಿತ್ರದುರ್ಗ, ಜುಲೈ, 27 : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ಯುವ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಆರೋಪಿಗಳನ್ನು ಬಂಧಿಸಿ ಪ್ರವೀಣ್ ಹತ್ಯೆಗೆ ನ್ಯಾಯ ಕೊಡಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಹೊಸದುರ್ಗ ಮಂಡಲ ಉಪಾಧ್ಯಕ್ಷ ಮಂಜು ಸಾಣೇಹಳ್ಳಿ, ಹೊಸದುರ್ಗ ಮಂಡಲ ಕಾರ್ಯದರ್ಶಿ ಎನ್. ಆರ್. ಜಗದೀಶ್ ಸೇರಿದಂತೆ ಇತರೆ ಕಾರ್ಯಕರ್ತರು ಸಂಘಟನೆಯಲ್ಲಿ ಕೆಲಸ ಮಾಡಲ್ಲ ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ಹೊರ ಹಾಕಿ, ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಪ್ರವೀಣ್ ಹತ್ಯೆಗೆ ನ್ಯಾಯ ಸಿಗುವವರೆಗೆ ಸಂಘಟನೆಯಲ್ಲಿ ಕೆಲಸ ಮಾಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ಜಿಲ್ಲಾ ಸಾಮಾಜಿಕ ಜಾಲತಾಣ ಪದಾಧಿಕಾರಿ ಜವಾಬ್ದಾರಿ ಸ್ಥಾನಕ್ಕೂ ರಮೇಶ್ ಗೂಳಿಹಟ್ಟಿ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ
ಪತ್ರದಲ್ಲಿ
ಏನಿದೆ?
ಹಿಂದುತ್ವ
ಆಧಾರದ
ಮೇಲೆ
ಅಧಿಕಾರಕ್ಕೆ
ಬಂದ
ನಮ್ಮ
ಬಿಜೆಪಿ
ಸರ್ಕಾರ
ಹಿಂದೂ
ಪರ
ಕಾರ್ಯಕರ್ತರು,
ಪಕ್ಷದ
ಕಾರ್ಯಕರ್ತರನ್ನು
ಉಳಿಸಿಕೊಳ್ಳಲು
ಆಗದೇ
ಇರುವುದು
ವಿಶಾಧನೀಯ
ಸಂಗತಿಯಾಗಿದೆ.
ಯಾವುದೇ
ಹತ್ಯೆ
ನಡೆದಾಗಲೂ
ಕಠಿಣ
ಕ್ರಮದ
ಭರವಸೆ
ನೀಡುತ್ತಿದ್ದು,
ಆ
ಭರವಸೆ
ಕೇವಲ
ಭರವಸೆಯಾಗಿ
ಮಾತ್ರ
ಉಳಿದಿದೆ.
ನಾವು
ಪ್ರತಿದಿನ
ಸಾಮಾಜಿಕ
ಜಾಲತಾಣಗಳಲ್ಲಿ
ಉತ್ತರ
ಕೊಡುವಷ್ಟು
ಕಷ್ಟದ
ಪರಿಸ್ಥಿತಿ
ನಿರ್ಮಾಣವಾಗುತ್ತಿದೆ.
ದಯವಿಟ್ಟು
ಈಗಲಾದರೂ
ಸರ್ಕಾರ
ಈ
ಪ್ರಕರಣವನ್ನು
ಗಂಭೀರವಾಗಿ
ಪರಿಗಣಿಸಿ,
ಸೂಕ್ತ
ಕಾನೂನು
ಕ್ರಮ
ತೆಗೆದುಕೊಳ್ಳಬೇಕೆಂದು
ಮನವಿ
ಮಾಡಿಕೊಳ್ಳುತ್ತೇವೆ
ಎಂದು
ತಿಳಿಸಿದ್ದಾರೆ.
ಕಠಿಣ ಕಾನೂನು ಜಾರಿಗೆ ತಂದು ಪಕ್ಷಾತೀತವಾಗಿ ಜೀವಗಳನ್ನು ಕಾಪಾಡಬೇಕು. ಹಾಗೆ ನನ್ನ ಜವಾಬ್ದಾರಿಗೆ ರಾಜೀನಾಮೆ ನೀಡುತ್ತಿದ್ದೇನೆ. ಹಾಗೂ ನನ್ನ ರಾಜೀನಾಮೆಯನ್ನು ಅಂಗೀಕರಿಸಲು ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹೀಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬೆಳ್ಳಾರೆಯಲ್ಲಿ ಪ್ರವೀಣ್ ಹತ್ಯೆ ನಡೆದಿದ್ದು, ರಾಜ್ಯದೆಲ್ಲೆಡೆ ಆಕ್ರೋಶಗಳು ಭುಗಿಲೆದ್ದಿವೆ. ಹಾಗೂ ಪ್ರವೀಣ್ ಹತ್ಯೆಗೆ ನ್ಯಾಯ ಸಿಗುವವರೆಗೂ ನಾವು ಸಂಘಟನೆಯಲ್ಲಿ ಕರ್ತವ್ಯವನ್ನು ನಿರ್ವಹಿಸುವುದಿಲ್ಲ ಎಂದು ಪಕ್ಷದ ಇತರ ಯುವ ಕಾರ್ಯಕರ್ತರು ಎಚ್ಚರಿಸಿದ್ದಾರೆ.
ಸರ್ಕಾರಕ್ಕೆ ಎಚ್ಚರಿಕೆ ನೀಡುವುದಲ್ಲದೇ ಎಷ್ಟೋ ಬಿಜೆಪಿ ಯುವ ಮೋರ್ಚಾ ಕಾರ್ಯರ್ತರ ರಾಜೀನಾಮೆ ಪರ್ವವೇ ಆಗಿದೆ.