ಮುರುಘಾ ಶ್ರೀಗಳ ವಿರುದ್ಧ ಜಾಮೀನು ರಹಿತ ವಾರಂಟ್
ಚಿತ್ರದುರ್ಗ, ಫೆಬ್ರವರಿ, 02: ಮಠದ ಆಸ್ತಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಗೆ ಗೈರು ಹಾಜರಾದ ಪರಿಣಾಮ ಮುರುಘಾಮಠದ ಶ್ರೀ ಡಾ.ಶಿವಮೂರ್ತಿ ಸ್ವಾಮೀಜಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.
ಮುರುಘಾ ಮಠಕ್ಕೆ ಸೇರಿದ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪ ಸಂಬಂಧ ದಾಖಲಾಗಿದ್ದ ಪ್ರಕರಣದ ವಿಚಾರಣೆಗೆ ಶ್ರೀಗಳು ನಿರಂತರವಾಗಿ ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ 4ನೇ ಎಸಿಎಂಎಂ ಕೋರ್ಟ್ ಮಂಗಳವಾರ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.[ಸಿರಿಗೆರೆ ತರಳಬಾಳು ಮಠದ ಪ್ರೀತಿಯ 'ಗೌರಿ' ಇನ್ನು ನೆನಪು ಮಾತ್ರ]
ಪ್ರಕರಣವೇನು?
ಮುರುಘಾ
ಮಠಕ್ಕೆ
ಸೇರಿದ್ದು
ಎನ್ನಲಾದ
ಕೆಂಗೇರಿಯ
ಸೂಲಿಕೆರೆಯಲ್ಲಿನ
7ಎಕರೆ
ಜಮೀನನ್ನು
ಶ್ರೀಗಳು
ಅಕ್ರಮವಾಗಿ
ಮಾರಾಟ
ಮಾಡಿದ್ದಾರೆಂದು
ಆರೋಪಿಸಿ
ಪಿಎಸ್
ಪ್ರಕಾಶ್
ಎಂಬವರು
ದೂರು
ದಾಖಲು
ಮಾಡಿದ್ದರು.
ನಂತರ
ಪೊಲೀಸರು
ಆರೋಪಪಟ್ಟಿ
ಕೂಡಾ
ಸಲ್ಲಿಸಿದ್ದರು.
ಮಂಗಳವಾರ
ಪ್ರಕರಣದ
ವಿಚಾರಣೆ
ನಡೆಯುವುದಿತ್ತು.
ಆದರೆ
ವಿಚಾರಣೆಗೆ
ಡಾ.ಶಿವಮೂರ್ತಿ
ಮುರುಘಾ
ಶರಣರು
ಗೈರಾದ
ಹಿನ್ನೆಲೆಯಲ್ಲಿ
ನ್ಯಾಯಾಲಯ
ಆದೇಶ
ನೀಡಿದೆ.