SSLC ವಿದ್ಯಾರ್ಹತೆ ಹೊಂದಿರುವ ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಆಸ್ತಿ 116 ಕೋಟಿ ರೂ.
ಚಿತ್ರದುರ್ಗ, ನವೆಂಬರ್ 24: ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ 116 ಕೋಟಿ ರೂಪಾಯಿ ಆಸ್ತಿ ಒಡೆಯ ಬಿ. ಸೋಮಶೇಖರ್ ಕಣಕ್ಕಿಳಿದಿದ್ದಾರೆ.
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಸೋಮಶೇಖರ್ ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನವರು. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಇವರು ನೆಲೆಸಿದ್ದು, ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿದ್ದಾರೆ. ಇವರಿಗೆ ಪತ್ನಿ ಮಂಜುಳಾ ಹಾಗೂ ಮೂವರು ಮಕ್ಕಳು ಇದ್ದಾರೆ.
ಬಿ. ಸೋಮಶೇಖರ್ ಹೆಸರಿನಲ್ಲಿ 35 ಕೋಟಿ ರೂ. ಚರಾಸ್ತಿ ಹಾಗೂ 80 ಕೋಟಿ ರೂ. ಸ್ಥಿರಾಸ್ತಿ ಇದೆ. ಐದು ಬ್ಯಾಂಕ್ಗಳಲ್ಲಿ 6.32 ಕೋಟಿ ರೂ. ಠೇವಣಿ ಇಟ್ಟಿದ್ದಾರೆ. 28.52 ಕೋಟಿ ಹಣವನ್ನು ಉದ್ಯಮದಲ್ಲಿ ತೊಡಗಿಸಿದ್ದಾರೆ. ಇದರಲ್ಲಿ ಬಹುತೇಕ ಹಣವನ್ನು ಜಮೀನು ಮುಂಗಡ ನೀಡಿದ್ದಾರೆ. 30 ಲಕ್ಷ ಮೌಲ್ಯದ ರೇಂಜ್ ರೋವರ್ ಕಾರು, ಪತ್ನಿ ಬಳಿ ಇನ್ನೊವಾ ಕಾರು ಇದೆ.
ಚಿತ್ರದುರ್ಗ- ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಬಿ. ಸೋಮಶೇಖರ್ ಪತ್ನಿ ಮಂಜುಳಾ ಬಳಿಯೂ 1.4 ಲಕ್ಷ ರೂ. ಮೌಲ್ಯದ ಮೊಬೈಲ್ ಫೋನ್, 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇವೆ. 22.4 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಇದೆ. ಪ್ರಸ್ತುತ ಸೋಮಶೇಖರ್ ಬಳಿ 116 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಇವರ ಪತ್ನಿಯೂ ಕೂಡ 23 ಕೋಟಿ ರೂ. ಆಸ್ತಿಯ ಒಡತಿ ಎಂದು ಘೋಷಿಸಿಕೊಂಡಿದ್ದಾರೆ.
ಅದು ಅಲ್ಲದೇ ಮಂಜುಳಾ ಅವರು 91 ಲಕ್ಷ ಹಾಗೂ ಸೋಮಶೇಖರ್ 71 ಲಕ್ಷ ರೂ. ಸಾಲ ಮಾಡಿದ್ದಾರೆಂದು ಮಂಗಳವಾರ ಸಲ್ಲಿಸಿರುವ ನಾಮಪತ್ರದ ಆಸ್ತಿ ವಿವರಣೆಯಲ್ಲಿ ಘೋಷಿಸಿದ್ದಾರೆ.
ಜಿಲ್ಲಾಧಿಕಾರಿಗೆ
ನಾಮಪತ್ರ
ಸಲ್ಲಿಸಿದ
ಕಾಂಗ್ರೆಸ್
ಅಭ್ಯರ್ಥಿ
ವಿಧಾನ
ಪರಿಷತ್
ಸ್ಥಾನಕ್ಕೆ
ಡಿಸೆಂಬರ್
10ರಂದು
ಚುನಾವಣೆ
ನಡೆಯಲಿದೆ.
ಕಾಂಗ್ರೆಸ್
ಪಕ್ಷದ
ಅಭ್ಯರ್ಥಿ
ಮಂಗಳವಾರ
ಚುನಾವಣಾಧಿಕಾರಿಯೂ
ಆಗಿರುವ
ಚಿತ್ರದುರ್ಗ
ಜಿಲ್ಲಾಧಿಕಾರಿ
ಕವಿತಾ
ಎಸ್.
ಮಣ್ಣಿಕೇರಿಗೆ
ನಾಮಪತ್ರ
ಸಲ್ಲಿಸಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಚುನಾವಣೆಗೆ ಬಿ. ಸೋಮಶೇಖರ್ ದೇವರಿಗೆ ಪೂಜೆ ನೆರವೇರಿಸಿ, ಅಪಾರ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕ ಟಿ. ರಘುಮೂರ್ತಿ, ಮಾಜಿ ಸಚಿವ ಎಚ್. ಆಂಜನೇಯ, ಡಿ. ಸುಧಾಕರ್, ಮಾಜಿ ಶಾಸಕರಾದ ಬಿ. ಜಿ. ಗೋವಿಂದಪ್ಪ, ಎವಿ ಉಮಾಪತಿ, ಮಾಜಿ ಸಂಸದ ಬಿ. ಎನ್. ಚಂದ್ರಪ್ಪ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಎದುರಾಳಿ
ಅಭ್ಯರ್ಥಿ
ಯಾರು
ದಾವಣಗೆರೆ-
ಚಿತ್ರದುರ್ಗ
ಸ್ಥಳೀಯ
ಸಂಸ್ಥೆಗಳಿಂದ
ವಿಧಾನ
ಪರಿಷತ್
ಸದಸ್ಯರನ್ನು
ಆಯ್ಕೆ
ಮಾಡುವ
ಚುನಾವಣೆಗೆ
ಕಾಂಗ್ರೆಸ್ನಿಂದ
ಬಿ.
ಸೋಮಶೇಖರ್
ಕಣಕ್ಕಿಳಿದಿದ್ದರೆ,
ಎದುರಾಳಿಯಾಗಿ
ಬಿಜೆಪಿಯಿಂದ
ಕೆ.
ಎಸ್.
ನವೀನ್
ನಾಮಪತ್ರ
ಸಲ್ಲಿಸಿದ್ದಾರೆ.
ಜೆಡಿಎಸ್
ಅಭ್ಯರ್ಥಿ
ಕಣಕ್ಕಿಳಿಸಿಲ್ಲ.
ಹಾಗಾಗಿ
ಕಾಂಗ್ರೆಸ್
ಮತ್ತು
ಬಿಜೆಪಿ
ಅಭ್ಯರ್ಥಿಗಳ
ನಡುವೆ
ನೇರ
ಹಣಾಹಣಿ
ಏರ್ಪಟ್ಟಿದೆ.
ಬಿಜೆಪಿ ಅಭ್ಯರ್ಥಿ ಕೆ. ಎಸ್. ನವೀನ್ ಎರಡು ಬಾರಿ ಸೋತಿದ್ದರು. ಮೂರನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಕೂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಬಂಧಿಕರು ಎಂಬ ಸುದ್ದಿ ಇದೆ. ಮೊದಲ ಬಾರಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇನ್ನೂ ಜೆಡಿಎಸ್ ಅಭ್ಯರ್ಥಿ ಇಲ್ಲದ ಕಾರಣ ಪಕ್ಷ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುವ ಮಾತು ಹರಿದಾಡುತ್ತಿದೆ.
Recommended Video
ಡಿಸೆಂಬರ್
14
ರಂದು
ಫಲಿತಾಂಶ;
ಕರ್ನಾಟಕ
ವಿಧಾನ
ಪರಿಷತ್ನ
25
ಸ್ಥಾನಗಳ
ಚುನಾವಣೆಗೆ
ನಾಮಪತ್ರ
ಸಲ್ಲಿಕೆ
ಮಾಡಲು
ಮಂಗಳವಾರ
ಕೊನೆಯ
ದಿನ.
ಡಿಸೆಂಬರ್
10ರ
ಬೆಳಗ್ಗೆ
8
ಗಂಟೆಯಿಂದ
ಸಂಜೆ
4
ಗಂಟೆಯವರೆಗೆ
ಮತದಾನ
ನಡೆಯಲಿದೆ.
ಡಿಸೆಂಬರ್
14
ರಂದು
ಚುನಾವಣಾ
ಫಲಿತಾಂಶ
ಪ್ರಕಟಗೊಳ್ಳಲಿದೆ.