ಚಿತ್ರದುರ್ಗ: 4 ಎಕರೆಯಲ್ಲಿ ಗಾಂಜಾ ಬೆಳೆ, ದಂಗಾದ ಪೊಲೀಸರು
ಚಿತ್ರದುರ್ಗ, ಸೆಪ್ಟೆಂಬರ್ 4: ಸದ್ಯ ಕರ್ನಾಟಕದಲ್ಲಿ ಗಾಂಜಾ ಹಾಗೂ ಡ್ರಗ್ಸ್ ದಂಧೆ ಜೋರಾಗಿ ಕೇಳಿಬರುತ್ತಿರುವ ಬೆನ್ನಲ್ಲಿಯೇ ಚಿತ್ರದುರ್ಗ ಜಿಲ್ಲೆಯಲ್ಲಿ ಗಾಂಜಾ ಬೆಳೆ ಸದ್ದು ಮಾಡಿದೆ.
Recommended Video
Drugs
ದಂಧೆ
ಕಾರ್ಯಚರಣೆಗೆ
ಬ್ರೇಕಿಲ್ಲ:
Home
Minister
|
Oneindia
Kannada
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ದೇವಸಮುದ್ರ ಹೋಬಳಿಯ ವಡೇರಹಳ್ಳಿ ಗ್ರಾಮದ ವೈ.ಜಂಬುನಾಥ ಮತ್ತು ಬಿ.ಡಿ ಮಂಜುನಾಥ ಇವರಿಗೆ ಸೇರಿದ ಸರ್ವೇ ನಂಬರ್ 30ರಲ್ಲಿ ಸುಮಾರು ನಾಲ್ಕು ಎಕರೆಯಲ್ಲಿ ಗಾಂಜಾ ಬೆಳೆ ಬೆಳೆದಿದ್ದಾರೆ.
ಈ ಗಾಂಜಾ ಬೆಳೆಯನ್ನು ನೋಡಿದ ಪೊಲೀಸರು ದಂಗಾಗಿದ್ದಾರೆ. ಪೊಲೀಸ್ ಕಾರ್ಯಾಚರಣೆಯಿಂದ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತ ಆರೋಪಿಗಳಾದ ಸಂಡೂರಿನ ರುದ್ರೇಶ್, ರಾಂಪುರದ ಮಂಜುನಾಥ್, ಜಂಬುನಾಥ್, ಕೂಡ್ಲಿಗಿಯ ಸಮಂತ್ ಬಂಧಿತ ಆರೋಪಿಗಳಾಗಿದ್ದಾರೆ. ಪಿಎಸ್ಐ ಗುಡ್ಡಪ್ಪ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ. ರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Comments
English summary
In Vaderahalli village of Devasamudra Hobali in Chitradurga district have growed marijuana on nearly four acres.