ಅಮಿತ್ ಶಾಗೆ ಧರ್ಮ ಸಂಕಟ ತಂದಿತ್ತ ಮುರುಘಾಶ್ರೀಗಳ ಮನವಿ
Recommended Video
ಚಿತ್ರದುರ್ಗ, ಮಾರ್ಚ್ 28: ತುಮಕೂರಿನ ಸಿದ್ಧಗಂಗಾ, ಶಿವಮೊಗ್ಗದ ಬೆಕ್ಕಿನ ಕಲ್ಮಠ, ಸಿರಿಗೆರೆಯ ಬೃಹನ್ಮಠ, ಚಿತ್ರದುರ್ಗದ ಮುರುಘಾಮಠ, ಮಾದಾರ ಚೆನ್ನಯ್ಯ ಗುರುಪೀಠ ಸೇರಿದಂತೆ 40ಕ್ಕೂ ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಧರ್ಮ ಸಂಕಟಕ್ಕೆ ದೂಡುವ ಮನವಿಯನ್ನು ಮುರುಘಾಶ್ರೀಗಳು ಸಲ್ಲಿಸಿದ್ದಾರೆ.
'ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಕೇಂದ್ರ ಸರ್ಕಾರದ ಸಹಕಾರ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ನಮಗೆ ಸಹಕಾರ ನೀಡಬೇಕು' ಎಂದು ಮುರುಘಾಮಠದ ಶಿವಮೂರ್ತಿ ಶರಣರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
'ಅಲ್ಪಸಂಖ್ಯಾತ' ಟ್ಯಾಗ್ ಬೇಡ ಎನ್ನುವ ಲಿಂಗಾಯತರಿವರು!
ಮನವಿ ಸ್ವೀಕರಿಸಿದ ಶಾ ಅವರು, 'ಈ ವಿಷಯವನ್ನು ಪರಿಶೀಲಿಸಿದ ನಂತರ ತೀರ್ಮಾನ ಕೈಗೊಳ್ಳುತ್ತೇವೆ' ಎಂದು ಹೇಳಿದರು. ಮಂಗಳವಾರದಂದು ಮಠಕ್ಕೆ ಅಮಿತ್ ಶಾ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಮನವಿ ಪತ್ರ ನೀಡಲಾಯಿತು ಎಂದು ನಂತರ ಸುದ್ದಿಗೋಷ್ಠಿಯಲ್ಲಿ ಮುರುಘಾಶ್ರೀಗಳು ತಿಳಿಸಿದರು.
'ಸಿದ್ದಗಂಗಾ ಮಠ, ಮುರುಘಾಮಠ, ಸಿರಿಗೆರೆ ಮಠ ಸೇರಿದಂತೆ ರಾಜ್ಯದಲ್ಲಿ ಸಾವಿರಾರು ಬಸವ ಪರಂಪರೆಯ ಮಠಗಳಿವೆ. ಎಲ್ಲವೂ ಬಸವಾದಿ ಶರಣರ ತತ್ವ ಪಾಲಿಸುತ್ತಿವೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ಸಿಗಬೇಕು ಎಂಬುದು ಬಸವ ಧರ್ಮದ ಅನುಯಾಯಿಗಳ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಬಸವ ಪರಂಪರೆಯ ಮಠಾಧೀಶರ ಪರವಾಗಿ ಅಮಿತ್ ಶಾ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ.
Soon after @AmitShah ji took blessings of Shivamurthy Murugha sharanaru swami on his visit to Sri Murugha Mutt, The pontiff of Murugha mutt wrote a letter to Amit Shah appreciating the decision of @CMofKarnataka and said it's a step to unite the community. #ChanakyaNeetiFail pic.twitter.com/Pn9FPW1vdr
— Unofficial Sususwamy (@swamv39) March 28, 2018
ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಅಧಿಸೂಚನೆ
ಯಾವ ಪಕ್ಷಕ್ಕೆ ಬೆಂಬಲಿಸಬೇಕು ಎಂಬುದನ್ನು ಇನ್ನೂ ಮಠ ನಿರ್ಧರಿಸಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಡಿದ ಮಠಾಧೀಶರೊಂದಿಗೆ ಚರ್ಚಿಸಿ ನಂತರ ತಿಳಿಸುವೆ ಎಂದರು. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಾತಾ ಮಹಾದೇವಿ ಅವರು ಈಗಾಗಲೇ ಕಾಂಗ್ರೆಸ್ಸಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಚರ್ಚೆ : ಲಿಂಗಾಯತರ ಮತ ಯಾವ ಪಕ್ಷಕ್ಕೆ ಬೀಳಲಿವೆ?