ಹಿರಿಯೂರು ಹೆದ್ದಾರಿಯಲ್ಲಿ ಧಗಧಗನೆ ಹೊತ್ತಿ ಉರಿದ ಕೆಎಸ್ ಆರ್ ಟಿಸಿ ವೋಲ್ವೊ ಬಸ್
Recommended Video
ಚಿತ್ರದುರ್ಗ, ಜನವರಿ 21: ಜಿಲ್ಲೆಯ ಗಿಡ್ಡೋಬನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಇದ್ದಕ್ಕಿದ್ದಂತೆ ಕೆಎಸ್ ಆರ್ ಟಿಸಿ ವೋಲ್ವೊ ಬಸ್ ನಲ್ಲಿ ಬೆಂಕಿ ಹೊತ್ತಿಕೊಂಡಿರುವ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಗಿಡ್ಡೋಬನಹಳ್ಳಿ ಬಳಿ ಘಟನೆ ಸಂಭವಿಸಿದೆ. ಬೆಳಗಾವಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವೋಲ್ವೊ ಬಸ್ ಗೆ ಆಕಸ್ಮಿಕವಾಗಿ ಹೊತ್ತಿಕೊಂಡು ರಸ್ತೆ ಮಧ್ಯೆ ಧಗಧಗನೆ ಹೊತ್ತಿ ಉರಿದಿದೆ.
ದೆಹಲಿ ಸಾರಿಗೆ ಇಲಾಖೆಗೆ ಸೇರಿದ ಎಲ್ಲಾ ದಾಖಲೆಗಳು ಬೆಂಕಿಗಾಹುತಿ
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಪ್ರಯಾಣಿಕರು ಬಸ್ ನಿಂದ ಕೆಳಗಿಳಿದಿದ್ದಾರೆ. ಅದೃಷ್ಟವಶಾತ್ ಬಸ್ ನಲ್ಲಿದ್ದ 30 ಮಂದಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟೈರ್
ಗೆ
ಬೆಂಕಿ-ಹೊತ್ತಿ
ಉರಿದ
ಲಾರಿ:
ಚಿತ್ರದುರ್ಗ
ಜಿಲ್ಲೆ
ಚಳ್ಳಕೆರೆ
ತಾಲೂಕಿನ
ಕಾಲುವೆ
ಹಳ್ಳಿ
ಕ್ರಾಸ್
ಬಳಿ
ಸಿಮೆಂಟ್
ತುಂಬಿದ
ಲಾರಿಯ
ಟೈರ್
ಬಿಸಿಗೂಂಡು,
ಬೆಂಕಿ
ಹತ್ತಿಕೊಂಡಿದೆ.
ಅದೃಷ್ಟವಶಾತ್
ಯಾವುದೇ
ಅನಾಹುತ
ಸಂಭವಿಸಿಲ್ಲ.
ಸ್ಥಳಕ್ಕೆ
ಅಗ್ನಿ
ಶಾಮಕ
ದಳ
ಸಿಬ್ಬಂದಿ
ದೌಡಾಯಿಸಿ
ಬೆಂಕಿ
ನಂದಿಸಿದ್ದಾರೆ.
ತಳಕು
ಪೊಲೀಸರು
ಸ್ಥಳಕ್ಕೆ
ಭೇಟಿ
ನೀಡಿದ್ದಾರೆ.