ಎಲ್ಲಾ ಜಿಲ್ಲೆಗಳಲ್ಲೂ ವಿಮಾನ ನಿಲ್ದಾಣ ನಿರ್ಮಾಣ
ಚಿತ್ರದುರ್ಗ, ಸೆ. 17 : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿ ಲಘು ವಿಮಾನಗಳ ಹಾರಾಟ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ವಿಮಾನಯಾನ ಖಾತೆ ರಾಜ್ಯ ಸಚಿವ ಜಿ.ಎಂ.ಸಿದ್ದೇಶ್ವರ್ ಹೇಳಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಸುಮಾರು 130 ಎಕರೆ ಜಾಗದಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬಹುದಾಗಿದೆ ಎಂದು ಸಚಿವರು ಹೇಳಿದರು.
ಚಿತ್ರದುರ್ಗದಲ್ಲಿ
ಮಂಗಳವಾರ
ಮಾತನಾಡಿದ
ಜಿ.ಎಂ.ಸಿದ್ದೇಶ್ವರ್,
ಕಡಿಮೆ
ಖರ್ಚಿನಲ್ಲಿ
ವಿಮಾನ
ನಿಲ್ದಾಣ
ನಿರ್ಮಿಸಿ
ಜಿಲ್ಲೆಯಿಂದ
ಜಿಲ್ಲೆಗೆ
ವಿಮಾನಗಳ
ಹಾರಾಟ
ಆರಂಭಿಸುವ
ಉದ್ದೇಶವಿದ್ದು,
ಕನಿಷ್ಠ
130
ಎಕರೆ
ಭೂಮಿಯನ್ನು
ರಾಜ್ಯ
ಸರ್ಕಾರ
ಒದಗಿಸಿದರೆ
ಶೀಘ್ರ
ಕಾಮಗಾರಿ
ಆರಂಭಿಸುವ
ಕುರಿತು
ಚಿಂತನೆ
ನಡೆಸಲಾಗುತ್ತದೆ
ಎಂದರು.
ದೇಶದ ದೊಡ್ಡ ನಗರಗಳಲ್ಲಿ 50 ನೂತನ ವಿಮಾನ ನಿಲ್ದಾಣ ಸ್ಥಾಪಿಸಲು ನಿರ್ಧರಿಸಲಾಗಿದೆ. ಕರ್ನಾಟಕದಲ್ಲಿ ಶಿವಮೊಗ್ಗ, ಬಳ್ಳಾರಿ, ಹಾಸನ, ಬಿಜಾಪುರ ಹಾಗೂ ಗುಲ್ಬರ್ಗಾ ಜಿಲ್ಲಾ ಕೇಂದ್ರಗಳಲ್ಲಿಯೂ ವಿಮಾನ ನಿಲ್ದಾಣ ಆರಂಭಿಸಲಾಗುತ್ತದೆ ಎಂದು ಜಿ.ಎಂ.ಸಿದ್ದೇಶ್ವರ್ ಹೇಳಿದರು. ಚಿತ್ರದುರ್ಗ ಅಥವ ದಾವಣಗೆರೆಯಲ್ಲಿ 500 ಎಕರೆ ಜಾಗ ದೊರೆತರೆ ಅಲ್ಲಿಯೂ ನಿಲ್ದಾಣ ಸ್ಥಾಪಿಸಲಾಗುತ್ತದೆ ಎಂದರು. [ಹುಬ್ಬಳ್ಳಿ ವಿಮಾನ ನಿಲ್ದಾಣ ಬಂದ್]
ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದ್ದು ಇದಕ್ಕಾಗಿ 120 ಕೋಟಿ ಬಿಡುಗಡೆ ಮಾಡಲಾಗಿದೆ. ಬೆಳಗಾವಿ ನಿಲ್ದಾಣಕ್ಕೆ 130 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮೈಸೂರು ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಆದರೆ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಡ್ಡಿಯಾಗುತ್ತಿದೆ ಎಂದು ತಿಳಿಸಿದರು. [ಮೈಸೂರು ವಿಮಾನ ನಿಲ್ದಾಣಕ್ಕೆ ವಿಸ್ತರಣೆ ಭಾಗ್ಯ]