ಸ್ವಚ್ಛ ಸರ್ವೇಕ್ಷಣೆಯಲ್ಲಿ ಹೊಸದುರ್ಗ ಪುರಸಭೆಗೆ ರಾಷ್ಟ್ರಪ್ರಶಸ್ತಿ
ಚಿತ್ರದುರ್ಗ, ನವೆಂಬರ್ 13: ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರ ಸಚಿವಾಲಯದ ವ್ಯಾಪ್ತಿಯಲ್ಲಿ ನೀಡಲಾಗುವ 2021ನೇ ಸಾಲಿನ ಸ್ವಚ್ಛ ಸರ್ವೇಕ್ಷಣ ಸಫಾಯ್ ಮಿತ್ರ ಚಾಲೆಂಜ್ ಸ್ಪರ್ಧೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪುರಸಭೆಗೆ ರಾಷ್ಟ್ರಪ್ರಶಸ್ತಿ ನೀಡಲಾಗಿದೆ.
75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರ ಸ್ವಚ್ಛ ಸರ್ವೇಕ್ಷಣ 2021 ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮೈಸೂರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕೃಷ್ಣರಾಜಸಾಗರ, ಕುಮಟಾ, ಪಿರಿಯಾಪಟ್ಟಣ, ಉಡುಪಿ, ಕೋಲಾರ ಹಾಗೂ ಹೊಸದುರ್ಗ ಸೇರಿದಂತೆ ರಾಜ್ಯದ 8 ನಗರಗಳಿಗೆ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ ಲಭಿಸಿದೆ. ಇದರಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪುರಸಭೆಯು ಒಂದಾಗಿದ್ದು, ಪ್ರಶಸ್ತಿ ಬಂದಿರುವುದಕ್ಕೆ ಜಿಲ್ಲೆ ಹಾಗೂ ಹೊಸದುರ್ಗ ಜನತೆಗೆ ಖುಷಿ ತಂದಿದೆ.
ಕಸ ಮುಕ್ತ ನಗರ ಎಂಬ ಹೆಮ್ಮೆಗೆ ಹೆಸರಾಗಿರುವ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಹೊಸದುರ್ಗ ಪುರಸಭೆ ಅಧಿಕಾರಿಗಳು, ಪುರಸಭೆ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ಹಗಲಿರುಳು ಶ್ರಮಿಸಿದ್ದಾರೆ.
ಇದೇ ನವೆಂಬರ್ 20ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಏರ್ಪಡಿಸಲಿರುವ ಸ್ವಚ್ಛ ಸರ್ವೇಕ್ಷಣ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ವರು ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹೊಸದುರ್ಗ ಪುರಸಭೆ ಆಡಳಿತಾಧಿಕಾರಿ ನರಸಿಂಹಮೂರ್ತಿ, ಇಂಜಿನಿಯರ್ ಜಿ.ವಿ. ತಿಮ್ಮರಾಜು ಹಾಗೂ ಅಧ್ಯಕ್ಷ ಶ್ರೀನಿವಾಸನ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಉಸ್ತುವಾರಿ
ಸಚಿವ
ಶ್ರೀರಾಮುಲು
ಅಭಿನಂದನೆ
ಕೇಂದ್ರ
ವಸತಿ
ಮತ್ತು
ನಗರ
ವ್ಯವಹಾರ
ಸಚಿವಾಲಯದ
ವ್ಯಾಪ್ತಿಯಲ್ಲಿ
ನೀಡಲಾಗುವ
2021ನೇ
ಸಾಲಿನ
ಸ್ವಚ್ಛ
ಸರ್ವೇಕ್ಷಣ
ಸಫಾಯ್
ಮಿತ್ರ
ಚಾಲೆಂಜ್
ಸ್ಪರ್ಧೆಯಲ್ಲಿ
ಚಿತ್ರದುರ್ಗ
ಜಿಲ್ಲೆಯ
ಹೊಸದುರ್ಗ
ಪುರಸಭೆ
ಆಯ್ಕೆಯಾಗಿರುವುದು
ಸಂತಸ
ತಂದಿದೆ.
ಪ್ರಶಸ್ತಿಗೆ
ಆಯ್ಕೆಯಾಗಲು
ಶ್ರಮಿಸಿದ
ಸರ್ವರಿಗೂ
ಹೃದಯಪೂರ್ವಕ
ಧನ್ಯವಾದಗಳು
ಎಂದು
ಜಿಲ್ಲಾ
ಉಸ್ತುವಾರಿ
ಹಾಗೂ
ಸಾರಿಗೆ
ಸಚಿವ
ಶ್ರೀರಾಮುಲು
ತನ್ನ
ಟ್ವಿಟ್ಟರ್
ಖಾತೆಯಲ್ಲಿ
ತಿಳಿಸಿದ್ದಾರೆ.
ಇನ್ನು ಹೊಸದುರ್ಗ ಶಾಸಕ ಗೂಳಿಹಟ್ಟಿ. ಡಿ. ಶೇಖರ್ ಕೂಡ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ ಲಭಿಸಲು ಸಹಕರಿಸಿದ ನಗರದ ನಾಗರಿಕರು, ಅಧಿಕಾರಿಗಳು, ಪುರಸಭಾ ಕಾರ್ಮಿಕರಿಗೆ ಹಾಗೂ ಮಾರ್ಗದರ್ಶನ ನೀಡಿದ ಜಿಲ್ಲಾ ಮಟ್ಟದ ಅಧಿಕಾರಿಗಳಿಗನ್ನು ಅಭಿನಂದಿಸಿದ್ದಾರೆ. ಪ್ರಶಸ್ತಿ ಬಂದಿರುವುದಕ್ಕೆ ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ. ಎಸ್. ಮನ್ನಿಕೇರಿ ಸೇರಿದಂತೆ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.
Recommended Video