ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಶ್ರೀರಾಮುಲು ಸವಾಲು
ಚಿತ್ರದುರ್ಗ, ಜುಲೈ 11: ಕೋವಿಡ್ ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.
Recommended Video
ಚಿತ್ರದುರ್ಗದಲ್ಲಿ ಇಂದು ಮಾತನಾಡಿದ ಅವರು, "ಮುರುಘೇಶ್ ನಿರಾಣಿ ಬಳಿ ಸಲಕರಣೆ ಖರೀದಿ ಅವ್ಯವಹಾರದ ದಾಖಲೆ ಇದೆ ಎಂಬ ಸಿದ್ದರಾಮಯ್ಯ ಅವರಿಗೆ ಈ ಕುರಿತು ಯಾವುದೇ ದಾಖಲೆ ಇದ್ದರು ಬಿಡುಗಡೆ ಮಾಡುವ ಸ್ವತಂತ್ರ ಇದೆ. ಅದರ ಬದಲು ಭ್ರಷ್ಟಾಚಾರ, ಅವ್ಯವಹಾರ ಆಗಿದೆ ಎಂದು ಯಾಕೆ ಮಾತನಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ" ಎಂದು ಹೇಳಿದರು.
ಕೊರೊನಾ ಭ್ರಷ್ಟಾಚಾರ: ರಾಜ್ಯ ಸರ್ಕಾರಕ್ಕೆ 6 ಲೆಕ್ಕ ಕೇಳಿದ ಸಿದ್ದರಾಮಯ್ಯ
"ಸಿದ್ದರಾಮಯ್ಯ 2 ಸಾವಿರ ಕೋಟಿ ರೂ ಅವ್ಯವಹಾರ ಆಗಿದೆ ಎಂದು ಹೇಳುತ್ತಿದ್ದಾರೆ. ಕೋವಿಡ್ ಸಲಕರಣೆಗಳ ಖರೀದಿ ಮಾಡಲು ಖರ್ಚಾಗಿರುವುದು 500 ರಿಂದ 600 ಕೋಟಿ. 2 ಸಾವಿರ ಕೋಟಿ ಎಲ್ಲಿಂದ ಭ್ರಷ್ಟಾಚಾರ ಆಗಿದೆ ಎಂದು ಗೊತ್ತಾಗುತ್ತಿಲ್ಲ. ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು, ದಾಖಲೆಗಳಿದ್ದರೆ ಬಿಡುಗಡೆ ಮಾಡಿ. ಸಿದ್ದರಾಮಯ್ಯ ಅವರೇ ಯಾಕೆ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದರು.
ಈ ಹಿಂದೆ ಸವಾಲು ಹಾಕಿ, ಬಳ್ಳಾರಿ ಬ್ರದರ್ಸ್ ಜೈಲಿಗೆ ಹೋಗಿದ್ದನ್ನು ನೆನಪಿಸಿಕೊಳ್ಳಬೇಕು ಎಂಬ ಸಿದ್ದು ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಶ್ರೀರಾಮುಲು, ಎಕ್ಸ್ ಪೈರಿ ಡೇಟ್ ಗಳನ್ನು ನೆನಪಿಸಿಕೊಳ್ಳುವುದರಿಂದ ಇವತ್ತಿನ ತಪ್ಪುಗಳನ್ನು ಸರಿ ಎಂದು ಒಪ್ಪಿಕೊಳ್ಳಲು ಆಗುವುದಿಲ್ಲ. ದಾಖಲೆಗಳನ್ನು ಬಿಡುಗಡೆ ಮಾಡಿ, ಯಾರು ಜೈಲಿಗೆ ಹೋಗಬೇಕೋ ಅವರು ಜೈಲಿಗೆ ಹೋಗುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ಕೊರೊನಾ
ಚಿಕಿತ್ಸೆಗಾಗಿ
10
ಸಾವಿರ
ಬೆಡ್
ಗಳ
ವ್ಯವಸ್ಥೆ
ರಾಜ್ಯದಲ್ಲಿ
ಕೋವಿಡ್19
ಚಿಕಿತ್ಸೆಗಾಗಿ
10
ಸಾವಿರ
ಬೆಡ್
ಗಳ
ವ್ಯವಸ್ಥೆ
ಮಾಡಲಾಗಿದೆ.
ಪತ್ರಕರ್ತರು
ಕೊರೊನಾ
ಫ್ರಂಟ್
ಲೈನ್
ವಾರಿಯರ್ಸ್
ಗಳಾಗಿ
ಕೆಲಸ
ಮಾಡುತ್ತಿದ್ದಾರೆ.
ಜೀವದ
ಹಂಗು
ತೊರೆದು
ಹಗಲೂ
ರಾತ್ರಿ
ಕೆಲಸ
ಮಾಡುತ್ತಿದ್ದಾರೆ.
ಬಹಳಷ್ಟು
ಪತ್ರಕರ್ತರಿಗೆ
ಕೊರೊನಾ
ಸೋಂಕು
ತಗುಲಿದೆ.
ಅದಕ್ಕೋಸ್ಕರ
ಪತ್ರಕರ್ತರ
ಬೇಡಿಕೆಯಂತೆ
ಆದಷ್ಟು
ಬೇಗ
ಇನ್ಶೂರೆನ್ಸ್
ಮಾಡಿಸಲು
ಅಂತಿಮ
ತೀರ್ಮಾನಕ್ಕೆ
ಬರುತ್ತೇವೆ
ಎಂದರು.
ಹಳ್ಳಿಗಳಿಗೂ
ಕೊರೊನಾ
ಹರಡಲು
ಶುರುವಾಗಿದೆ.
ಹೀಗಾಗಿ
ನನ್ನ
ನಡೆ
ಹಳ್ಳಿಗಳ
ಕಡೆ
ಎಂಬಂತೆ
ಗ್ರಾಮಾಂತರ
ಪ್ರದೇಶಗಳಲ್ಲಿ
ಜಾಗೃತಿ
ಮೂಡಿಸುತ್ತೇನೆ
ಎಂದು
ಹೇಳಿದರು.