ಮಾಜಿ ಸಚಿವರ ಕಾರು ಡಿಕ್ಕಿ: ಬೈಕ್ ಸವಾರ ಗಂಭೀರ
ಚಿತ್ರದುರ್ಗ, ಡಿಸೆಂಬರ್, 04 : ಮಾಜಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ್ ಅವರ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ತೀವ್ರ ಗಾಯಗೊಂಡ ಘಟನೆ ಚಿತ್ರದುರ್ಗದ ಸಿಬಾಳ ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗ ಹೊರವಲಯದ ಸಿಬಾರ ಬಳಿ ಘಟನೆ ನಡೆದಿದ್ದು, ಬೈಕ್ ಸವಾರ ನೆಲ್ಲಿಕಟ್ಟೆ ಓಬಳೇಶ್ ತೀವ್ರವಾಗಿ ಗಾಯಗೊಂಡಿದ್ದಾರೆ. ಅಪಘಾತ ನಂತರ ಬೈಕ್ ಸವಾರನ ಸ್ಥಿತಿ ವಿಚಾರಿಸದೆ ತೆರಳಿದ್ದಾರೆ.
ನಂತರ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಪಘಾತದ ಬಳಿಕ ಮಾಜಿ ಸಚಿವ ಪರಮೇಶ್ವರ್ ನಾಯ್ಕ ಮಾನವೀಯತೆ ಮರೆತು ಬೇರೆ ಕಾರಿನಲ್ಲಿ ತೆರಳಿದ್ದಾರೆ.
Comments
English summary
A car which former minister PT Parameshwar Naik was travelling hit a bike near sibar village of chitradurga outskirt. The accident caused seriously injured bike rider shifted to Davanagere district hospital for the treatment.