ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ- ಎಸ್ಪಿ ಅರುಣ್ ನಡುವೆ ಸಭೆಯಲ್ಲೇ ಜಟಾಪಟಿ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಅಕ್ಟೋಬರ್ 18: ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮತ್ತು ಚಿತ್ರದುರ್ಗ ಎಸ್ಪಿ ಡಾ.ಕೆ.ಅರುಣ್ ನಡುವೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯುತ್ತಿದ್ದ ಕೆಡಿಪಿ ಸಭೆಯಲ್ಲೇ ಜಟಾಪಟಿ ನಡೆದಿದೆ.

"ಮಾದಕ ದ್ರವ್ಯ, ವಸ್ತುಗಳ ಮಾರಾಟ ಭರಾಟೆ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಪೊಲೀಸರು ಏನು ಮಾಡುತಿದ್ದಾರೆ, ಪೊಲೀಸರು 10 ವರ್ಷಗಳಿಂದ ಒಂದೇ ಕಡೆ ಇದ್ದಾರೆ. ಎಸ್ಪಿ ಏನು ಮಾಡ್ತಿದ್ದಾರೆ" ಎಂದು ಎಸ್ಪಿ ವಿರುದ್ಧ ಶಾಸಕ ಎಂ. ಚಂದ್ರಪ್ಪ ಸಭೆಯಲ್ಲೇ ಹರಿಹಾಯ್ದರು.

ಜಗಳ ಬಿಡಿಸಲು ದೇವರ ಕೋಣಕ್ಕೆ ಡಿಎನ್‌ಎ ಪರೀಕ್ಷೆ ಮಾಡಿಸಿದ ಪೊಲೀಸರುಜಗಳ ಬಿಡಿಸಲು ದೇವರ ಕೋಣಕ್ಕೆ ಡಿಎನ್‌ಎ ಪರೀಕ್ಷೆ ಮಾಡಿಸಿದ ಪೊಲೀಸರು

ಇದಕ್ಕೆ ಕೋಪಗೊಂಡ ಅರುಣ್, "ಮಾದಕ ವಸ್ತು ಮಾರಾಟಕ್ಕೆ ಕಡಿವಾಣ ಹಾಕಿದ್ದೇವೆ. ನಾನು ಎಸ್ಪಿ ಆಗಿ ಜಿಲ್ಲೆಗೆ ಬಂದ ಮೇಲೆ ಯಾರನ್ನೂ ಬಿಟ್ಟಿಲ್ಲ. ಅಗತ್ಯಕ್ಕೆ ಅನುಸಾರ ವರ್ಗಾವಣೆ ಮಾಡಿದ್ದೇನೆ" ಎಂದು ತಿರುಗಿ ಹೇಳಿದ್ದಾರೆ.

 Fight Between Holalkere MLA M Chandrapappa And SP Arun At Kdp Meeting

"ವರ್ಗಾವಣೆ ಮಾಹಿತಿ ಕೊಡಿ" ಎಂದು ಚಂದ್ರಪ್ಪ ಹೇಳುತ್ತಿದ್ದಂತೆ, "ಇದು ಕೆಡಿಪಿ ಸಭೆ, ಇಲ್ಲಿ ಏನು ಮಾತನಾಡಬೇಕೋ ಅದನ್ನು ಮಾತಾಡಿ" ಎಂದು ಪ್ರತ್ಯುತ್ತರ ನೀಡಿದ್ದಾರೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಟಾಪಟಿಯಾಗಿದೆ.

ಕುಡಿದು ಗಲಾಟೆ ಮಾಡಿ ಸಿಕ್ಕಿಬಿದ್ದರೆ ಊರಿಗೆಲ್ಲ ಮಟನ್ ಊಟ ಹಾಕಿಸೋ ಶಿಕ್ಷೆಕುಡಿದು ಗಲಾಟೆ ಮಾಡಿ ಸಿಕ್ಕಿಬಿದ್ದರೆ ಊರಿಗೆಲ್ಲ ಮಟನ್ ಊಟ ಹಾಕಿಸೋ ಶಿಕ್ಷೆ

ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ನಡೆಯುತ್ತಿದ್ದ ಕೆಡಿಪಿ ಸಭೆಯಲ್ಲಿ ಶಾಸಕಿ ಕೆ. ಪೂರ್ಣಿಮಾ, ತಿಪ್ಪಾರೆಡ್ಡಿ, ರಘುಮೂರ್ತಿ, ಗೂಳಿಹಟ್ಟಿ ಶೇಖರ್ ಮತ್ತಿತರರು ಇದ್ದರು.

English summary
Fight happened between holalkere MLA M Chandrappa and Chitradurga SP Dr K Arun at the District Panchayat Hall in chitradurga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X