ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಷ್ಟು ಅಲೆದರೂ ಸಿಗದ ಪರಿಹಾರ; ಮೂಡಿಗೆರೆಯಲ್ಲಿ ಗುಂಡಿಕ್ಕಿಕೊಂಡು ರೈತ ಆತ್ಮಹತ್ಯೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಸೆಪ್ಟೆಂಬರ್ 14: ಕಳೆದ ತಿಂಗಳು ಸಂಭವಿಸಿದ ಪ್ರವಾಹದಲ್ಲಿ ಬೆಳೆಯನ್ನು ಕಳೆದುಕೊಂಡು ಬೇಸರಗೊಂಡ ರೈತನೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ನಡೆದಿದೆ.

ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಾಯುಸೇನೆಯ ಯೋಧಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಾಯುಸೇನೆಯ ಯೋಧ

ಮೂಡಿಗೆರೆಯ ಕಳಸ ಬಳಿಯ ಕಾರಗದ್ದೆ ಎಂಬಲ್ಲಿ ಚನ್ನಪ್ಪಗೌಡ (65) ಎಂಬಾತ ತೋಟದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡವರು. ನೆರೆಯಿಂದಾಗಿ ಬೆಟ್ಟ-ಗುಡ್ಡ ಕುಸಿದು ಇವರ ಐದು ಎಕರೆ ಕಾಫಿ ತೋಟ ಹಾಳಾಗಿತ್ತು. ಬೆಳೆದ ಬೆಳೆಯೂ ನೀರುಪಾಲಾಗಿತ್ತು.

Farmer Committed Suicide By Shooting Himself In Mudigere

ಈ ಸಂದರ್ಭ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಆದರೆ ಸರ್ಕಾರದಿಂದ ಯಾವುದೇ ಪರಿಹಾರ ದೊರೆತಿರಲಿಲ್ಲ. ಒಂದು ತಿಂಗಳಿನಿಂದಲೂ ಪರಿಹಾರಕ್ಕೂ ಅಲೆದಾಡುತ್ತಿದ್ದು, ಪರಿಹಾರ ದೊರಕದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

English summary
A farmer who lost his crop during deluge in last month committed suicide by shooting himself in mudigere of chikkamgaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X