ಚಿತ್ರದುರ್ಗ ಜಿ.ಪಂ ಅಧ್ಯಕ್ಷ ಸ್ಥಾನಕ್ಕೆ ಸೌಭಾಗ್ಯ ರಾಜೀನಾಮೆ
ಚಿತ್ರದುರ್ಗ, ಏಪ್ರಿಲ್ 07: ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸೌಭಾಗ್ಯ ಬಸವರಾಜನ್ ಅವರು ಕೊನೆಗೂ ರಾಜೀನಾಮೆ ನೀಡಿದ್ದಾರೆ. ಸೌಭಾಗ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಜಿ. ಪಂ ಸದಸ್ಯರು ಅನೇಕ ಬಾರಿ ಪ್ರತಿಭಟನೆ ನಡೆಸಿದ್ದರು.
ಕಾಂಗ್ರೆಸ್ ಮುಖಂಡರಿಂದಲೂ ಒತ್ತಡ ಹಾಕಲಾಗಿತ್ತು, ಆದರೆ, ರಾಜೀನಾಮೆ ನೀಡದೆ, ಅಧಿಕಾರದಲ್ಲೆ ಮುಂದುವರೆದಿದ್ದ ಸೌಭಾಗ್ಯ ಅವರು ಇಂದು ದಿಢೀರ್ ಪ್ರತ್ಯಕ್ಷರಾಗಿ ರಾಜೀನಾಮೆ ಸಲ್ಲಿಸಿದ್ದಾರೆ.
ಸ್ವ ಇಚ್ಛಾಶಕ್ತಿಯಿಂದ ಬರೆದ ಪತ್ರವನ್ನು ಸೌಭಾಗ್ಯ ಬಸವರಾಜನ್ ನವರೆ ಖುದ್ದಾಗಿ ಚಿತ್ರದುರ್ಗ ಪಂಚಾಯತ್ ಇಲಾಖೆ ನಿರ್ದೇಶಕರಾದ ಯಾಲಕ್ಕಿ ಗೌಡರಿಗೆ ರಾಜೀನಾಮೆ ಪತ್ರ ನೀಡಿದ್ದಾರೆ.
ಈ ಹಿಂದೆ ರಾಜೀನಾಮೆ ನೀಡದೆ ಅಧಿಕಾರದಲ್ಲಿ ಮುಂದು ವರೆದಿದ್ದರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿತ್ತು. ವಿಧಾನಸಭಾ ಚುನಾವಣೆ ನಡೆಯಲಿದ್ದು, ಇಂದು ರಾಜೀನಾಮೆ ಕೊಟ್ಟಿದ್ದು ಚಿತ್ರದುರ್ಗ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗಳ ಮತ್ತು ಕೈ ಮುಖಂಡರಲ್ಲಿ ಬಾರಿ ಕುತೂಹಲ ಮೂಡಿಸಿದೆ.
Comments
chitradurga zilla panchayat resignation district news karnataka assembly elections 2018 ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ರಾಜೀನಾಮೆ ಜಿಲ್ಲಾಸುದ್ದಿ ಕರ್ನಾಟಕ ವಿಧಾನಸಭೆ ಚುನಾವಣೆ 2018
English summary
Chitradurga ZP president Soubhagya Basavarajan resigned. Last year she was expelled from the primary membership of the Congress for violating the party rules
Story first published: Saturday, April 7, 2018, 22:25 [IST]