ದೇವಸ್ಥಾನದಲ್ಲಿ ಕಳೆದುಕೊಂಡ ಮಗು ಜಿಲ್ಲಾ ಮಕ್ಕಳ ಸಂರಕ್ಷಣ ಅಧಿಕಾರಿಗಳಲ್ಲಿ ಸುರಕ್ಷಿತ
ಚಿತ್ರದುರ್ಗ, ಜನವರಿ 16: ಪೋಷಕರೊಂದಿಗೆ ದೇವಸ್ಥಾನಕ್ಕೆ ಬಂದ ಚಿಕ್ಕ ಮಗುವೊಂದು ಅನಾಥವಾಗಿ ತಂದೆ ತಾಯಿಯನ್ನು ಹುಡುಕಾಟ ನಡೆಸಿತ್ತು, ಒಂಟಿ ಮಗುವನ್ನು ಕಂಡ ಹಿರಿಯೂರು ತಾಲ್ಲೂಕಿನ ನಂದಿಹಳ್ಳಿ ಗ್ರಾಮಸ್ಥರು ಪೊಲೀಸರಿಗ ಒಪ್ಪಿಸಿದ್ದಾರೆ.
ಈ ಘಟನೆ ನಡೆದಿರುವುದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಶ್ರೀಕ್ಷೇತ್ರ ನಂದಿಹಳ್ಳಿ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ. ದೇವಸ್ಥಾನಕ್ಕೆ ಜೊತೆಯಲ್ಲಿ ಮಗುವನ್ನು ಕರೆದುಕೊಂಡು ಬಂದಿದ್ದ ಪೋಷಕರು ವಾಪಸ್ ಮನೆಗೆ ಹೋಗುವಾಗ ಮಗುವನ್ನು ದೇವಸ್ಥಾನದಲ್ಲಿಯೇ ಬಿಟ್ಟು ಹೋಗಿದ್ದಾರೆ.
ಅನೈತಿಕ ಸಂಬಂಧದ ಜಗಳ; ಚಿತ್ರದುರ್ಗದಲ್ಲಿ ಬೆಂಕಿ ಹಚ್ಚಿಕೊಂಡು ಮೂವರ ಆತ್ಮಹತ್ಯೆ
ಈ ವಿಷಯ ತಿಳಿದ ಗ್ರಾಮಸ್ಥರು ಕೂಡಲೇ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮತ್ತು ಮಾಧ್ಯಮದವರಿಗೆ ಕರೆ ನೀಡಿ ಮಾಹಿತಿ ನೀಡಿದ್ದಾರೆ.
ಸುಮಾರು ಒಂದೂವರೆ ವರ್ಷದ ಮಗುವಾಗಿದ್ದು, ಈ ಮಗುವಿನ ಚಹರೆ ಹೀಗಿರುತ್ತದೆ. ಮಗುವಿನ ಬಣ್ಣ ಕಪ್ಪು ಮತ್ತು ಕೆಂಪು ಬಣ್ಣ ಮಿಶ್ರಿತವಾಗಿದೆ, ಸಾಧಾರಣ ಮೈಕಟ್ಟು ಹೊಂದಿರುವ ಹಾಗೂ ಟೀ ಶರ್ಟ್ ಮತ್ತು ಚಡ್ಡಿ ಧರಿಸಿರುತ್ತಾನೆ. ಈ ಮಗು ತೆಲುಗು ಭಾಷೆ ಮಾತನಾಡಬಹುದೆಂದು ಗ್ರಾಮಸ್ಥರು ಹೇಳುತ್ತಿದ್ದಾರೆ.