ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಟೆ ನಾಡಿಗೆ ಬಂದಿಳಿದ ಡಿಬಾಸ್ ಗೆ ಅಭಿಮಾನಿಗಳ ಹೃದಯ ತುಂಬಿದ ಸ್ವಾಗತ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

Recommended Video

ಗಂಡುಗಲಿ ನೋಡಲು ಚಿತ್ರದುರ್ಗದಲ್ಲಿ ಭಾರೀ ನೂಕುನುಗ್ಗಲು | FILMIBEAT KANNADA

ಚಿತ್ರದುರ್ಗ, ಡಿಸೆಂಬರ್ 2: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕೆ ಇಂದು ಚಿತ್ರದುರ್ಗದಲ್ಲಿ ಮುಹೂರ್ತ ನಿಗದಿಯಾಗಿದೆ. ಚಿತ್ರದುರ್ಗದಲ್ಲಿ ಇಂದು ಚಿತ್ರಕ್ಕೆ ಚಾಲನೆ ದೊರೆಯಲಿದ್ದು, ಈ ಹಿನ್ನೆಲೆಯಲ್ಲಿ ದರ್ಶನ್ ಹಾಗೂ ಚಿತ್ರತಂಡ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿದೆ. ಡಿ ಬಾಸ್​ ನೋಡಲು ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದಾರೆ. ಡೋಲು ಬಾರಿಸುತ್ತಾ ಅದ್ಧೂರಿಯಾಗಿ ದರ್ಶನ್ ಬರಮಾಡಿಕೊಳ್ಳಲಾಗಿದೆ.

ಕುರುಕ್ಷೇತ್ರ ಸಿನಿಮಾ ಬಿಡುಗಡೆ; 50 ಸಾವಿರ ಲಾಡು ವಿತರಣೆಗೆ ಸಿದ್ಧತೆಕುರುಕ್ಷೇತ್ರ ಸಿನಿಮಾ ಬಿಡುಗಡೆ; 50 ಸಾವಿರ ಲಾಡು ವಿತರಣೆಗೆ ಸಿದ್ಧತೆ

ಗಂಡುಗಲಿ ಮದಕರಿ ನಾಯಕ ಚಿತ್ರತಂಡ ನಗರದ ನೀಲಕಂಠೇಶ್ವರ, ಬರಗೇರಮ್ಮ, ಉಚ್ಚಂಗಿ ಯಲ್ಲಮ್ಮ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ಮೂಲಕ ಚಿತ್ರಕ್ಕೆ ಚಾಲನೆ ನೀಡಲಿದೆ.

Challenging Star Darshan Came To Chitradurga For Gandugali Madakari Nayaka Film Muhurta

ಮೊದಲನೆಯದಾಗಿ ದರ್ಶನ್ ಹಾಗೂ ಚಿತ್ರತಂಡದ ಸದಸ್ಯರು ನೀಲಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ದರ್ಶನ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಸಾಹಿತಿ ಬಿ.ಎಲ್ ವೇಣು ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಸೇರಿದಂತೆ ಮತ್ತಿತರರು ಸಾಥ್ ನೀಡಿದ್ದಾರೆ.

English summary
Challenging star Darshan's much awaited 'Gandugali Madakari Nayaka' film muhurta is set to be happen in Chitradurga today. The film will be launched today in Chitradurga. So darshan and his team came to chitradurga today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X