ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶವಯಾತ್ರೆ ವೇಳೆ ಹಾರ್ನ್ ಮಾಡಿದ್ದಕ್ಕೆ ಬಸ್ ಡ್ರೈವರ್ ಗೆ ಥಳಿತ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜೂನ್ 6: ಶವಸಂಸ್ಕಾರ ಮಾಡಲು ಹೋಗುತ್ತಿದ್ದ ಸಂದರ್ಭ, ಹಿಂದೆ ಬಸ್ ನಲ್ಲಿ ಹಾರ್ನ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಚಾಲಕನಿಗೆ ಮೃತರ ಸಂಬಂಧಿಗಳು ಥಳಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಜಿಲ್ಲೆಯ ಮೇದೇಹಳ್ಳಿ ರಸ್ತೆಯಲ್ಲಿರುವ ಖಾಸಗಿ ಬಸ್ ನಿಲ್ದಾಣದ ಮುಂದೆ ಮುಸ್ಲಿಂ ಸಮುದಾಯದ ವ್ಯಕ್ತಿಯ ಶವಯಾತ್ರೆ ನಡೆಯುತ್ತಿತು. ಈ ವೇಳೆ ಹಾರ್ನ್ ಮಾಡಿದ ಎಂಬ ಕಾರಣಕ್ಕೆ ಖಾಸಗಿ ಬಸ್ ಚಾಲಕ ರಾಕೇಶ್ ಎಂಬುವವರ ಮೇಲೆ ಮೃತ ಸಂಬಂಧಿಕರು ಹಲ್ಲೆ ನೆಡೆಸಿದ್ದಾರೆ.

 ದುಬಾರಿ ಬೈಕ್ ‌ನೊಂದಿಗೆ ಸೆಲ್ಫಿ ತೆಗೆಯಲು ಅವಕಾಶ ನೀಡದ್ದಕ್ಕೆ ಥಳಿತ ದುಬಾರಿ ಬೈಕ್ ‌ನೊಂದಿಗೆ ಸೆಲ್ಫಿ ತೆಗೆಯಲು ಅವಕಾಶ ನೀಡದ್ದಕ್ಕೆ ಥಳಿತ

ಬಸ್ ನಿಲ್ದಾಣದ ಮುಂದೆ ಖಬರುಸ್ತಾನ್ ಬಳಿ ಶವಯಾತ್ರೆ ತೆರಳುತಿತ್ತು. ಆಗ ಬಸ್ ನಿಲ್ದಾಣಕ್ಕೆ ತಿರುವು ಪಡೆಯಲು ಬಸ್ ಚಾಲಕ ರಾಕೇಶ್ ಹಾರ್ನ್ ಮಾಡಿದ್ದಾರೆ. ಹಾರ್ನ್ ಮಾಡಿದ್ದಕ್ಕೆ ಆಕ್ರೋಶಗೊಂಡ ಮೃತರ ಸಂಬಂಧಿಕರು ಆತನ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ರಾಕೇಶ್ ಅವರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಘಟನೆಯಿಂದ ಕ್ಷಣಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

bus driver beaten by people for horning during funeral

ಘಟನಾ ಸ್ಥಳಕ್ಕೆ ಡಿವೈಎಸ್ ಪಿ ಸಂತೋಷ್ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಈ ಸಂಬಂಧ ಚಿತ್ರದುರ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
a bus driver was beaten by people for horning during funeral parade. A funeral parade was going in front of private bus station at Mehedahalli road. at that time driver horned to make a way. by this incident, relations of the dead angrily beat the driver. The deceased has been identified as Rakesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X